ಹೊಳಲ್ಕೆರೆ ಡಿ.16 ಕಳೆದು ಹೋದ ಕುರಿಗಳನ್ನು ಹುಡುಕಲು ಹೋದ ವ್ಯಕ್ತಿಗೆ ಟ್ರಾಕ್ಟರ್ ಇಂಜಿನ್ ಡಿಕ್ಕಿ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟ ಘಟನೆ ಚಿತ್ರಹಳ್ಳಿ ಗೇಟ್ ಪೋಲಿಸ್ ಠಾಣೆವ್ಯಾಪ್ತಿಯಲ್ಲಿ ನಡೆದಿದೆ. ವ್ಯಕ್ತಿಗೆ ಟ್ರ್ಯಾಕ್ಟರ್ ಇಂಜಿನ್ ಡಿಕ್ಕಿ ವ್ಯಕ್ತಿ ಸಾವು :
ಹೊಳಲ್ಕೆರೆ ತಾಲ್ಲೂಕಿನ ನೇರಲಕಟ್ಟೆ ಶಶಿಧರ (25)ಶುಕ್ರವಾರ ರಾತ್ರಿ 11.45 ಸಮಯದಲ್ಲಿ
ಕುರಿಗಳನ್ನು ಹುಡುಕಲು ಗ್ರಾಮದ ಬಾರೇನಹಳ್ಳಿ ಗೇಟ್ ಬಂಡೆಯ ಬಳಿ ಎರಡು ಕುರಿಗಳು ಕಳೆದು ಹೋಗಿದ್ದು,
ಅವುಗಳನ್ನು ಹುಡುಕಲು ಹೋದಾಗ ಶನಿವಾರ ತಡರಾತ್ರಿ 1.45 ರ ಸಮಯದಲ್ಲಿ
ತಾಳ್ಯ ಗ್ರಾಮದ ಕಡೆಯಿಂದ ಬಂದ ಟ್ರ್ಯಾಕ್ಟರ್ ಇಂಜಿನ್ ಚಾಲಕ ಹರೀಶ ತಾಳ್ಯ ಟ್ರ್ಯಾಕ್ಟರ್ ಇಂಜಿನ್ ನ್ನು ಅತೀ ವೇಗ
ಮತ್ತು ಅಜಾಗೂರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಶಶಿಧರ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ
ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತಗಾಯಗಳಾಗಿರುತ್ತದೆ. ಅಲ್ಲಿ ಬಂದ 108 ಆಂಬ್ಯುಲೆನ್ಸ್ ನಲ್ಲಿ ಚಿತ್ರದುರ್ಗ
ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ನೋಡಲಾಗಿ ಚಿಕಿತ್ಸೆ ಫಲಕಾರಿಯಾಗದೇ ಶಶಿಧರ
ಮೃತಪಟ್ಟಿರುತ್ತಾನೆ ಎಂದು ತಿಳಿಸಿರುತ್ತಾರೆ. ಈ ಬಗ್ಗೆ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments