ಚಳ್ಳಕೆರೆ ಫೆ.24:
ಕಲೆ ಮತ್ತು ಸಂಸ್ಕøತಿಯಲ್ಲಿ ಭಾರತ ದೇಶ ವಿಶೇಷವಾದ ಕೊಡುಗೆ ನೀಡಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈಶ್ವರಪ್ಪ ಹೇಳಿದರು.
ಚಳ್ಳಕೆರೆ ತಾಲ್ಲೂಕಿನ ಪಿ.ಮಹದೇವಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ವಾತ್ಸಲ್ಯ ಸೋಷಿಯಲ್ ಕಲ್ಚರಲ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಭಾರತ ಸ್ವಾತಂತ್ರ್ಯ ಅಮೃತೋತ್ಸವ ಸವಿನೆನಪು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಂಧ್ರಗಡಿನಾಡು ಘಟಕದ ಮಾಜಿ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ಹಳ್ಳಿಗಳ ಜೀವಂತಿಕೆ ಜನಪದ ಕಲೆಗಳಲ್ಲಿ ಅಡಗಿದೆ. ಜನಪದ ಕಲೆಗಳ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರದಾಗಿದೆ. ವಿವಿಧ ಪ್ರದೇಶ ಹಾಗೂ ಜನಾಂಗಗಳಲ್ಲಿ ವೈವಿದ್ಯಮಯವಾದ ಕಲೆ, ಸಂಸ್ಕøತಿ ಮತ್ತು ಪರಂಪರೆ ಇದೆ ಎಂದರು.
ನಿವೃತ್ತ ಶಿಕ್ಷಕ ನಾಗರಾಜ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕನ್ನಡ ಭಾಷಾಭಿಮಾನ ಹೆಚ್ಚುಗೊಳಿಸಲು ವಿಶೇಷ ಪ್ರಾಧ್ಯಾನತೆ ಜೊತೆಯಲ್ಲಿ ಅನುದಾನ ನೀಡುತ್ತಾ ಕನ್ನಡ ಶಾಲೆಗಳಲ್ಲಿ ಓದಿದವರಿಗೆ ವಿವಿಧ ರಂಗಗಳಲ್ಲಿ ಹೆಚ್ಚಿನ ಆದ್ಯತೆ ಸಿಗುವಂತಾಗಲಿ ಎಂದರು.
ಕಾರ್ಯಕ್ರಮಕ್ಕೂ ಮೊದಲು ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಾರುಡಿಗೊಂಬೆ, ಸೋಮನ ಕುಣಿತ, ಕೀಲುಕುದುರೆ, ಸೇರಿದಂತೆ ಇತರೆ ಕಲಾತಂಡಗಳ ಮೆರವಣಿಗೆಯಲ್ಲಿ ಜನಾಕರ್ಷಣೆಗೊಂಡವು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತ್ಯಾಗರಾಜು, ಉಪಾಧ್ಯಕ್ಷೆ ರತ್ನಮ್ಮ, ಹಿರಿಯ ನಾಗರಾಜ್ ರಾವ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಯಪ್ರಕಾಶ್, ಗ್ರಾಮ ಪಂಚಾಯಿತಿ ಸದಸ್ಯರಾದ ನಿಂಗಣ್ಣ, ಓಬಳೇಶ್, ವಿರೇಶ್, ಶಿವಣ್ಣ, ಪೋತರಾಜ, ಶಶಿಕಲಾ, ಪಾಪಣ್ಣ, ವಾತ್ಸಲ್ಯ ಸೋಷಿಯಲ್ ಕಲ್ಚರಲ್ ಸೊಸೈಟಿ ಸೌಮ್ಯ, ಸಾಯಿ ಮೇಘನಾ ಮಹಿಳಾ ಮಂಡಳಿ ಕಾರ್ಯದರ್ಶಿ ಜಯಂತಿ, ಕಲಾವಿದ ಲಿಮಗಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments