ಧಾರವಾಡ : ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅವರ ಚೇಂಬರ್ನಲ್ಲಿ ವಾಮಾಚಾರ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಅದಕ್ಕೆ ಸಂಬಂಧಿಸಿದ ಕುರುಹುಗಳು ಪತ್ತೆಯಾಗಿವೆ.
ಡಾ.ರಮಾ ಗುಂಡೂರಾವ್ ಅವರು ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಡಾ.ರಮಾ ಅವರ ಚೇಂಬರ್ನಲ್ಲಿಯೇ ವಾಮಾಚಾರ ಮಾಡಿರುವುದು ಪತ್ತೆಯಾಗಿದೆ.
ಕೆಲವು ದಿನದ ಹಿಂದೆ ರಜೆಯ ಮೇಲೆ ತೆರಳಿದ್ದ ಡಾ.ರಮಾ ಶುಕ್ರವಾರ ಕರ್ತವ್ಯಕ್ಕೆ ಮರಳಿ ಬಂದು ತಮ್ಮ ಕೊಠಡಿಯ ಬಾಗಿಲು ತೆಗೆದಿದ್ದಾರೆ. ಬಾಗಿಲು ತೆರೆಯುತ್ತಿದ್ದಂತೆಯೇ ಒಳಗಡೆ ಇರುವ ವಸ್ತುಗಳನ್ನು ನೋಡಿದ ಡಾ. ರಮಾ ಅವರು ಬೆಚ್ಚಿ ಬಿದ್ದು ಹೊರಗೋಡಿ ಬಂದಿದ್ದಾರೆ.
ಡಾ. ರಮಾ ಅವರ ಬಳಿಯೇ ಕೊಠಡಿಯ ಕೀ ಇದ್ದು, ಬಾಗಿಲನ್ನು ತೆರೆಯದೆ ಈ ವಸ್ತುಗಳನ್ನು ಕಿಟಕಿಯ ಮೂಲಕ ಒಳಗೆ ಎಸೆಯಲಾಗಿದೆ ಎಂದು ತಿಳಿದು ಬಂದಿದೆ. ಮೇಜಿನ ಮೇಲಡ ಅರಿಷಿಣ-ಕುಂಕುಮ ಹಚ್ಚಿದ ಕಪ್ಪು ಬಣ್ಣದ ಮಾಟದ ಗೊಂಬೆ ಮತ್ತು 3 ಲಿಂಬೆ ಹಣ್ಣು ಎಸೆಯಲಾಗಿದೆ. ಎಸೆದಿರುವ ವಸ್ತುಗಳನ್ನು ನೋಡಿದರೆ ಎರಡು ದಿನಗಳ ಹಿಂದೆಯೇ ವಾಮಾಚಾರ ಮಾಡಿರುವ ಬಗ್ಗೆ ಅನುಮಾನ ಬರುತ್ತದೆ.
ಘಟನೆ ಸಂಬಂಧ ವಿಭಾಗದ ಪ್ರಾಧ್ಯಾಪಕರೊಬ್ಬರ ಮೇಲೆ ಶಂಕೆ ವ್ಯಕ್ತವಾಗಿದೆ. ರಮಾ ಚೇಂಬರ್ ಬಿಟ್ಟು ಕೊಡುವ ವಿಷಯವಾಗಿ ರಮ್ಯಾ ಮತ್ತು ಆ ಉಪನ್ಯಾಸಕರ ನಡುವೆ ಜಗಳ ನಡೆದಿತ್ತು. ನಾಲ್ಕು ತಿಂಗಳ ಹಿಂದೆ ವಿದ್ಯಾರ್ಥಿಗಳ ಎದುರೇ ಮಾವ-ಅಳಿಯ ಬಂದು ತಿಕ್ಕಾಟ ನಡೆಸಿದ್ದರು. ಇದೀಗ ಮತ್ತೆ ರಮಾ ವಿರುದ್ಧ ಷಡ್ಯಂತ್ರ ನಡೆಸಿರುವ ಅನುಮಾನ ವ್ಯಕ್ತವಾಗಿದೆ.
0 Comments