ಚಿತ್ರದುರ್ಗ ಆ.29ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪ್ರವಾಸದ ನಡುವೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಶಾಖೆಯ ಪದಾಧಿಕಾರಿಗಳು ಚಿತ್ರದುರ್ಗ ಪರಿವೀಕ್ಷಣಾ ಮಂದಿರದಲ್ಲಿ ನನ್ನನ್ನು ಭೇಟಿ ಮಾಡಿ ಅವರುಗಳ ಬೇಡಿಕೆಗಳಾದ,
🔸 ಏಳನೇ ವೇತನ ಆಯೋಗದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕೇಂದ್ರಕ್ಕೆ ಸರಿಸಮಾನವಾದ ವೇತನ ಶ್ರೇಣಿ ನಿಗಧಿಪಡಿಸುವ ಬಗ್ಗೆ.
🔸 ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ ನೀಡುವುದು ಹಾಗೂ ಕಾಲ ಮಿತಿ ಬಡ್ತಿ ಮುಂದುವರೆಸುವುದು, ವಾರ್ಷಿಕ 30 ದಿನಗಳ ಗಳಿಕೆ ರಜೆ ಮಂಜೂರು ಮಾಡುವ ಬಗ್ಗೆ.
🔸 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಶೀಘ್ರದಲ್ಲಿ ಶೇ 40 ನಿಗದಿಯಂತೆ 6 ರಿಂದ 8ನೇ ತರಗತಿಗೆ ಸೇವಾ ಜೇಷ್ಠತೆ ಪರಿಗಣಿಸಿ ವಿಲೀನದೊಂದಿಗೆ ಬಡ್ತಿ ನೀಡುವುದು.
🔸 NPS ರದ್ದು ಮಾಡಿ OPS ಜಾರಿಗೊಳಿಸುವುದು.
🔸 ಅಕ್ಷರ ದಾಸೋಹ ಬ್ಯಾಂಕ್ ಖಾತೆಯನ್ನು ಹಿಂದಿನಂತೆ ಮುಖ್ಯ ಶಿಕ್ಷಕರು ಹಾಗು ಮುಖ್ಯ ಅಡುಗೆಯವರ ಜಂಟಿ ಖಾತೆಯಲ್ಲಿ ಮುಂದುವರೆಸುವುದು.
🔸 ಮುಖ್ಯ ಶಿಕ್ಷಕರ ಹೆಚ್ಚುವರಿ ಅನ್ನೋನ್ ಕೆಲಸದ ಹೊರೆಯನ್ನು ತಗ್ಗಿಸುವ ಬಗ್ಗೆ.
ಅವರುಗಳ ಮನವಿಯನ್ನು ಅಲಿಸಿ ಸರ್ಕಾರಿ ನೌಕರರ ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಕ್ರಮವಹಿಸಲಿದೆ ಎಂದು ತಿಳಿಸಿದೆ. ಸರ್ಕಾರಿ ನೌಕರರ ಬೇಡಿಕೆಗಳನ್ನು ಸರ್ಕಾರ ಸಹಾನುಭೂತಿಯಿಂದ ಪರಿಗಣಿಸಲಿದೆ ಹಾಗೂ ಹಳೆ ಪಿಂಚಣಿ ಪದ್ದತಿ ಜಾರಿ ಬಗ್ಗೆಯೂ ಸರ್ಕಾರ ಪರಿಶೀಲಿಸಲಿದೆ ಎಂದು ತಿಳಿಸಿದೆ
0 Comments