ಚಳ್ಳಕೆರೆ:ನಗರದ ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟದ ಕಚೇರಿಯಲ್ಲಿ ಶುಕ್ರವಾರ ವಯೋಸಹಜ ಕಾಯಿಲೆಯಿಂದ ನಿಧನರಾದ ನಟಿ ಡಾ.ಲೀಲಾವತಿಯವರಿಗೆ ಮಾಧ್ಯಮದ ಸ್ನೇಹಿತರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಾಚರಣೆ ಸಲ್ಲಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ತನ್ನ ಅಪಾರ ಪ್ರತಿಭೆಯಿಂದ 50 ವರ್ಷ ಕನ್ನಡ ಸಿನಿಮಾ ರಂಗವನ್ನು ಶ್ರೀಮಂತಗೊಳಿಸಿ ಲೀಲಾವತಿ ನಮ್ಮನ್ನು ಅಗಲಿದ್ದಾರೆ ಕನ್ನಡ ಸಿನಿಮಾ ರಂಗವೇ ಅನಾಥವಾಗಿದೆ ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕರ್ನಾಟಕ ಮಾಧ್ಯಮ ಮಹಾಕೂಟದ ಅಧ್ಯಕ್ಷ ಎಂ ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಡಿ ಈಶ್ವರಪ್ಪ ಮಾತನಾಡಿ ಲೀಲಾವತಿ ಅಮ್ಮನವರು ಒಬ್ಬ ಅಭಿಜಾತ ಕಲಾವಿದೆಯಾಗಿ ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ 600ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರ ರಸಿಕರ ಮನಸೂರೆಗೊಂಡಿದ್ದರು ಇಂತಹ ಹಿರಿಯ ಕಲಾವಿದೆಯನ್ನು ಕಳೆದುಕೊಂಡ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಸ್ಮರಿಸಿದರು.
ವಕೀಲ ಓ ಪಾಪಣ್ಣ ಮಾತನಾಡಿ ಹಿರಿಯ ಕಲಾವಿದೆ ಲೀಲಾವತಿಯವರು ಮಾತೃ ಹೃದಯ ಹೊಂದಿದ್ದರು ಒಬ್ಬ ನಾಯಕ ನಟಿಯಾಗಿ ಡಾ. ರಾಜಕುಮಾರ್ ಸೇರಿದಂತೆ ಅನೇಕ ಹಿರಿಯ ಕಲಾವಿದರೊಂದಿಗೆ ನಟಿಸಿ ಜನಪ್ರಿಯತೆ ಗಳಿಸಿದ್ದರು ಪೋಷಕ ಪಾತ್ರಗಳನ್ನು ಅಭಿನಯಿಸಿ ಸೈ ಎನಿಸಿಕೊಂಡಿದ್ದರು ತಮ್ಮ ಬೆವರಿನ ದುಡಿಮೆಯಿಂದಲೇ ಸಾರ್ವಜನಿಕ ಆಸ್ಪತ್ರೆ ಪಶು ಆಸ್ಪತ್ರೆ ಗಳನ್ನು ಕಟ್ಟಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ ಯುವಜನತೆಗೆ ಸ್ಪೂರ್ತಿಯಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮ ಮಹಾಒಕ್ಕೂಟ ರಾಜ್ಯಧ್ಯಕ್ಷ ಕೆ ಶಿವಕುಮಾರ್ ಉಪಾಧ್ಯಕ್ಷ ಡಿ ಈಶ್ವರಪ್ಪ ಮೌನೇಶ್ ಆಚಾರ್ ಮಂಜುನಾಥ್ ಸುರೇಶ್ ಬೆಳೆಗೆರೆ
ರಘು, ಆದರ್ಶ ವಕೀಲರಾದ ಒ ಪಾಪಣ್ಣ ಹನುಮಂತರಾಯ ಚಂದ್ರು ಉಪಸ್ಥಿತರಿದ್ದರು.
0 Comments