ಚಳ್ಳಕೆರೆ ಡಿ.15 ಖಾಲಿ ನಿವೇಶನದಲ್ಲಿ ತ್ಯಾಜ್ಯ ನೀರು ನಿಂತು ಸೊಳ್ಳೆಗಳ ಉತ್ಪತ್ತಿತಾಣವಾದ್ದು ಸಾಂಕ್ರಮಿಕ ರೋಗಗಳಿಗೆ ಕೈ ಬೀಸಿ ಕರೆಯುವಂತಿದೆ.
ಚಿತ್ರದುರ್ಗ ರಸ್ತೆ ಅರಣ್ಯ ಇಲಾಖೆ ಎದುರು ಇರುವ ಕರಾವಳಿ ಹೋಟೆಲ್ಲಿನ ಬಳಕೆಯ ತ್ಯಾಜ್ಯ ನೀರು ಖಾಲಿ ನಿವೇಶನದಲ್ಲಿ ಬಿಟ್ಟಿರುವುದರಿಂದ ಇಲ್ಲಿ ತ್ಯಾಜ್ಯ ನೀರು ಸಂಗ್ರಹಣಾವಂಡವಾಗಿರುವುದರಿಂದ ಹಂದಿ.ನಾಯಿಗಳು ಈಜುಕೊಳವಾಗಿದ್ದು ಸೊಳ್ಳೆಗಳ ಉತ್ಪತ್ತಿ ತಾಣವಾಗಿದ್ದು ಸಂಜೆಯಾದರೆ ಸಾಕು ಸೊಳ್ಳೆಗಳ ಕಡಿತದಿಂದ ಇಲ್ಲಿನ ಸುತ್ತಮುತ್ತಲಿನ ನಾಗರೀಕರು.ಡೆಂಗ್ಯೂ.ಮಲೇರಿಯಾ.ಕಾಲರದಂತಹ ಸಾಂಕ್ರಮಿಕ ಭೀತಿಯಿಂದ ಜೀವನ ಸಾಗಿಸುವಂತಾಗಿದೆ ಎಂದು ಇಲ್ಲಿನ ನಾಗರೀಕರು ಆರೋಪಿಸಿದ್ದಾರೆ.
ಎಷ್ಟೋ ಜನ ಸಾರ್ವಜನಿಕರು ಹೋಟೆಲ್ ಗೆ ಊಟ ಸವಿಯಲು ಬರುತ್ತಾರೆ ಮೂಗು ಮುಚ್ಚಿಕೊಂಡ ಊಟ ಮಾಡುವ ಅನಿವಾರ್ಯತೆ ಇದೆ ತ್ಯಾಜ್ಯ ನೀರು ಖಾಲಿ ನಿವೇಶನದಲ್ಲಿ ಬೀಡ ಬೇಡಿ ಎಂದು ಹೇಳಿದರೂ ಸಹ ಸಾರ್ವಜನಿಕರ ಮನವಿಗೂ ಕ್ಯಾರೆ ಎನ್ನದ ಹೋಟೆಲ್ ಮಾಲೀಕ ನೀರು ಬಿಡುತ್ತಿದ್ದಾನೆ.
ನಗರದ ಚಿತ್ರದುರ್ಗ. ರಸ್ತೆಯ 31ನೇ ವಾರ್ಡಿನ ವಿಠ್ಠಲ್ ನಗರದ ದುರ್ಗದ ರಸ್ತೆಯಲ್ಲಿ ಬಲ ಭಾಗದಲ್ಲಿ ಬರುವ ಪಕ್ಕದಲ್ಲಿ ಚರಂಡಿಗಳಿಲ್ಲದೆ ಹೋಂಡ ವಾಗಿದೆ ,
ಆದರೆ ನೀರು ಹರಿಯಲ್ಲ ಕಾರಣ ನೀರು ನಿಂತಲ್ಲೇ ನಿಂತು ಕಲುಷಿತಗೊಂಡು ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.
![](https://janadhwani.in/wp-content/uploads/2023/12/Screenshot_20231215_165626.png)
ಇಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾದು ಹೋಗಿದ್ದು ಪೈಪ್ ಲೈನ್ ಹೊಡೆದರೆ ಮಲಿನಗೊಂಡ ನೀರು ಶುದ್ಧ ನೀರಿನ ಪೈಪ್ ಗೆ ಸೇರುವ ಭೀತಿಯೂ ಸಹ ಎದುರಾಗಿದೆ. ಕ
ಇದೇ ಹೊಂಡದ ಮಧ್ಯದಲ್ಲಿ ವಿದ್ಯುತ್ ಕಂಬ ಇದ್ದು ,
ನೀರಿನ ಸೆಳೆತದಿಂದ ಬೀಳುವ ಹಂತದಲ್ಲಿದೆ, ಈ ಮುನ್ನೆಚ್ಚರಿಕೆಯಾಗಿ ಸಂಬಂಧಪಟ್ಟ ಕೂಡಲೆ ಗಮನ ಹರಿಸಿ ನಿಂತ ಮಲೀನ ನೀರು ಹರಿಯುವಂತೆ ಮಾಡುವ ಜತೆ ನೈರ್ಮಲ್ಯ ಕಾಪಾಡಲು ಮುಂದಾಗ ಬೇಕಿದೆ ಇಲ್ಲವಾದಲ್ಲಿ ಇಲ್ಲಿ ನಿವಾಸಿಗಳು ಉಗ್ರ ಪ್ರತಿಭಟನೆ ಮಾಡುವುದಾಗಿ ವಕೀಲ ಬೋರನಾಯಕ್. ಶಾರದಮ್ಮ. ಕುಮಾರ್ ಇತರರು ಆಗ್ರಹಿಸಿದ್ದಾರೆ.
0 Comments