ಚಳ್ಳಕೆರೆ ಜನಧ್ವನಿ ವಾರ್ತೆ ಡಿ.24 ಗ್ರಾಮಸ್ಥರು ಕರಡಿಗಳ ಬಗ್ಗೆ ಯಾವುದೇ ಆತಂಕ ಬೇಡ ಅವುಗಳು ಒಂದೇ ಕಡೆವಾಸ ಮಾಡುವುದಲ್ಲಿ ಅವು ಸಂಚಾರಿಯಾಗಿರುತ್ತವೆ ಮತ್ತೊಮ್ಮೆ ಕರಡಿ ಕಾಣಿಸಿಕೊಂಡ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಪ್ರಾದೇಶಿಕ ಅರಣ್ಯಾಧಿಕಾರಿ ಬಹುಗುಣ ಗ್ರಾಮಸ್ಥರಿಗೆ ಅಭಯ ನೀಡಿದ್ದಾರೆ.
ಚಳ್ಳಕೆರೆ ತಾಲೂಕಿನ ಡೊಡ್ಡ ಉಳ್ಳಾರ್ತೆ ಗ್ರಾಮದ ಮಂಜಮ್ಮ ಎಂದಿನಳತೆ ಊರ ಹೊರಗೆ ರೊಪ್ಪದಲ್ಲಿ ಎರಡು ಸಿಂದಿ ಹಸುಗಳನ್ನು ಸಾಕಿದ್ದು ಬೆಳೆಗ್ಗೆ 6 ಗಂಟೆ ಸುಮಾರಿನಲ್ಲಿ ಹಾಲು ಕರೆಯಲು ಹೋದಾಗ ಕರಡಿ ಹಾಗೂ ಎರಡು ಮರಿಗಳೊಂದಿಗೆ ಸಂಚರಿಸುವಾಗ ಮಂಜಮ್ಮ ಕರಡಿನೋಡಿ ಕಿರುಕಿಕೊಂಡಾಗ ದಾಳಿ ನಡೆಸಿದೆ ಕರಡಿಗಳು ಏಕಾ ಏಕಿ ದಾಳಿ ನಡೆಸುವುದಿಲ್ಲ ಅವುಗಳನ್ನು ಗಾಬರಿ ಮಾಡಿದಾಗ ಅವುಗಳು ಮನುಷ್ಯರ ಮೇಲೆ ದಾಳಿ ನಡೆಸಲು ಮುಂದಾಗುತ್ತವೆ.
ಓಬಳಾಪುರ ಗ್ರಾಮದ ಸುತ್ತ ಮುತ್ತ ಕಡರಳಿಗಳಿವೆ ಹಾಗೂ ದೊಡ್ಡ ಉಳ್ಳಾರ್ತಿ ಬಾರ್ಕ್ ಅರಣ್ಯ ಪ್ರದೇಶದಲ್ಲಿ ಒಂದು ಕರಡಿ ಇದೆ ಮತ್ತೊಮ್ಮೆಕರಡಿಗಳು ಕಾಣಿಸಿಕೊಂಡರೆ ಬೋನ್ ಇಟ್ಟು ಅವುಗಳನ್ನಿಡಿಯಲಾಗುವುದು ಗ್ರಾಮಸ್ಥರು ಯಾವುದೇ ಆತಂಕ ಭೀತಿ ಪಡುವುದು ಬೇಡ ಕರಳಿಗಳು ಕಂಡ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಗ್ರಾಮಸ್ಥರಲ್ಲಿ ದೈರ್ಯ ತುಂಬಿದ್ದಾರೆ.
![](https://janadhwani.in/wp-content/uploads/2023/12/IMG-20231224-WA0185.jpg)
ನಂತರ ಜಿಲ್ಲಾಸ್ಪತ್ರೆಯಲ್ಲಿ ಗಾಯಗೊಂಡಿ ಚಿಕಿತ್ಸೆ ಪಡೆಯುತ್ತಿರುವ ಮಂಜುಳಮ್ಮನನ್ನು ಭೇಟಿ ನೀಡಿ ಮಾಹಿತಿ ಪಡೆದು ಮಹಳೆ ಹಾಗೂ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಆಸ್ಪತ್ರೆಯ ವೆಚ್ಚ ಎಷ್ಟೇ ಖರ್ಚಾಗಲಿ ಅರಣ್ಯ ಇಲಾಖೆ ಬರಿಸಲಿದೆ ಆಸ್ಪತ್ರೆಗೆ ವೆಚ್ಚ ಮಾಡಿದ ಬಿಲ್ ಗಳನ್ನು ಪಡೆಯಿರಿ ಒಂದು ವೇಳೆ ಚಿಕಿತ್ಸೆಗೆ ಇಲ್ಲಿ ಆಗದಿದ್ದರೆ ಎಲ್ಲೇ ಚಿಕಿತ್ಸೆಪಡೆದರೂ ಅದರ ಬಿಲ್ ನೀಡಿದರೆ ಚಿಕಿತ್ಸೆ ವೆಚ್ಚ ನೀಡಲಾಗುವುದು ನೀವು ಯಾವದೇ ಆತಂಕವನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಬೇಗನೇ ಗುಣ ಮುಖರಾಗಿ ಬರುವಂತೆ ಶುಭ ಹಾರೈಸಿದ್ದಾರೆ.
ಇದೇ ಸಂದರ್ಭದಲ್ಲಿ ವೈದ್ಯರನ್ನು ಭೇಟಿ ನೀಡಿ ಮಾಹಿತಿ ಪಡೆದಿದ್ದು ಮಹಿಳೆಗೆ ಯಾವುದೇ ಪ್ರಾಣ ಹಾನಿ ಇಲ್ಲ ಬೇಗನೇ ಗುಣಮುಖರಾಗುತ್ತಾರೆ ಆತಂಕ ಪಡುವ ಅಗತ್ಯ ವಿಲ್ಲ ಎಂದು ತಿಳಿಸಿದ್ದಾರೆ.
0 Comments