ಚಳ್ಳಕೆರೆ: ಕನ್ನಡ ನಾಮಫಲಕ ಬಳಕೆಗೆ ಆಗ್ರಹಿಸಿ ಪ್ರತಿಭಟನೆ ಮಾಡಿರುವ ಕರ್ನಾಟಕ ರಕ್ಷಣಾ
ಪದಾಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿರುವ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಸಾಂಸ್ಕೃತಿಕ
ಸಂಸ್ಥೆ ಅಧ್ಯಕ್ಷ ಕೊರಕುಂಟೆ ತಿಪ್ಪೇಸ್ವಾಮಿ ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎನ್ನುವ ಆಡಳಿತ ವ್ಯವಸ್ಥೆ ಕೇವಲ ಕಡತಗಳಿಗೆ ಸೀಮಿತವಾಗುತ್ತಿದೆ. ವಿಸ್ತಾರವಾಗಿ ಬೆಳೆಯುತ್ತಿರುವ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಆಂಗ್ಲ ಭಾಷೆಯ ವ್ಯಾಮೋಹ ಮತ್ತು ಬರವಣಿಗೆಯ
ನಾಮಫಲಕಗಳು ಬಳಕೆ ಆಗುತ್ತಿವೆ. ಆಡಳಿತ ಭಾಷೆ ಕನ್ನಡ ಎನ್ನುವ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕುಮ್ಮಕ್ಕಿನಿಂದ ಆಂಗ್ಲ ಭಾಷೆಯ ಪ್ರಭಾವ ಹೆಚ್ಚುತ್ತಿದೆ. ಆಂಗ್ಲಭಾಷಾ ಫಲಕಗಳ ತೆರವಿಗೆ ಪ್ರತಿಭಟನೆ ನಡೆಸಿರುವ ಕರವೇ ರಾಜ್ಯಾಧ್ಯಕ್ಷ ಪ್ರಶ ನಾರಾಯಣಗೌಡ ಸೇರಿದಂತೆ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು ಮಾಡಿರುವುದನ್ನು ಕೈಬಿಡಬೇಕು. ಕನ್ನಡ
ಭಾಷೆಯನ್ನು ಅವಮಾನಿಸುವ ರೀತಿ ಅಂಗಡಿ ಮುಗಂಟುಗಳ ಮೇಲೆ ಆಂಗ್ಲ ಭಾಷೆ ನಾಮಫಲಕ
ಹಾಕುವವರ ಪರವಾನಗಿ ರದ್ದುಪಡಿಸುವಂತೆ ನಿರ್ದಾಕ್ಷಿಣ್ಯ
ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments