ಕನ್ನಡನಾಡುನುಡಿ ರಕ್ಷಣೆಗಾಗಿ ಪ್ರಾಣತ್ಯಾಗಕ್ಕೂ ಸಿದ್ಧ ಕರವೇ ತಾಲ್ಲೂಕುಅಧ್ಯಕ್ಷರಾದ ಕೃಷ್ಣಪೂಜಾರಿ ಹೇಳಿಕೆ

by | 17/11/23 | ಸಾಂಸ್ಕೃತಿಕ


ಹಿರಿಯೂರು :
ರಾಜ್ಯದಲ್ಲಿ ಕನ್ನಡ ಭಾಷೆ ನೆಲ, ಜಲದ ವಿಷಯ ಬಂದಾಗ ಕನ್ನಡನಾಡುನುಡಿ ರಕ್ಷಣೆಗಾಗಿ ಪ್ರಾಣ ತ್ಯಾಗಕ್ಕೂ ಕರ್ನಾಟಕ ರಕ್ಷಣಾ ವೇದಿಕೆ ಸದಾ ಸಿದ್ದವಾಗಿರುತ್ತದೆ ಎಂಬುದಾಗಿ ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಕೃಷ್ಣ ಪೂಜಾರಿ ಹೇಳಿದರು.
ತಾಲ್ಲೂಕಿನ ಕಸ್ತೂರಿರಂಗಪ್ಪನಹಳ್ಳಿ ಗೇಟ್ ಬಳಿ ಇರುವ ಗಾರ್ಮೆಂಟ್ ಮುಂಭಾಗದಲ್ಲಿ ಕರವೇ ಆಟೋ ಚಾಲಕರು ಹಾಗೂ ಮಾಲೀಕರು ಏರ್ಪಡಿಸಲಾಗಿದ್ದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯದ ನೆಲ-ಜಲ ಉಳಿವಿಗೆ ಹಾಗೂ ರಕ್ಷಣೆಗಾಗಿ ನಮ್ಮ ಸಂಘಟನೆಯು ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದೇವೆ. ರಾಜ್ಯದ ಯಾವ ಮೂಲೆಯಲ್ಲಿ ಕನ್ನಡಿಗರಿಗೆ ಯಾವುದೇ ರೀತಿಯ ಅನ್ಯಾಯವಾದರೂ ಸಹ ನಮ್ಮ ಕರವೇ ವತಿಯಿಂದ ಖಂಡಿಸಿ ಹೋರಾಟಕ್ಕಿಳಿದಿದ್ದೇವೆ ಎಂದರಲ್ಲದೆ,
ಇದೀಗ ತಾಲೂಕಿನಲ್ಲಿಯೂ ಕರವೇ ಸಂಘಟನೆಯನ್ನು ಅತ್ಯಂತ ಬಲಿಷ್ಠವಾಗಿ ಕಟ್ಟಲು ನಾವೆಲ್ಲಾ ಪಣತೊಟ್ಟಿದ್ದು ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಕನ್ನಡತಾಯಿ ಭುವನೇಶ್ವರಿಯ ತೇರು ಹೀಗೆಯೇ ನಿರಂತರವಾಗಿ ಎಲ್ಲರ ಮನೆ ಮನದಲ್ಲೂ ಸಾಗುತ್ತಲಿರಲಿ ಎಂಬುದಾಗಿ ಅವರು ಹೇಳಿದರು.
ಕನ್ನಡ ಭುವನೇಶ್ವರಿ ಮಾತೆಗೆ ಪೂಜೆ ನೆರವೇರಿಸಿದ ಬಳಿಕ ಆಟೋ ಮಾಲೀಕರು ರಾಷ್ಟ್ರೀಯ ಹೆದ್ದಾರಿ ಮೂಲಕ ನಗರ ಪ್ರವೇಶಿಸಿ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಿದರು. ಕಾರ್ಯಕರ್ತರು ಆಟೋಗಳಲ್ಲಿ, ಕಾರ್ ಗಳಲ್ಲಿ ಬಾವುಟಗಳನ್ನು ಕಟ್ಟಿಕೊಂಡು ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಕರವೇ ಚಾಲಕರ ಮತ್ತು ಮಾಲೀಕರ ಘಟಕದ ಅಧ್ಯಕ್ಷ ರಾಮು, ಗೌರವಾಧ್ಯಕ್ಷ ವಿಶ್ವನಾಥ್,ಉಪಾಧ್ಯಕ್ಷ ರಮೇಶ್, ಕಾರ್ಯದರ್ಶಿ ರಾಮು, ಸದಸ್ಯರಾದ ರಾಜು, ಪಾತಲಿಂಗಪ್ಪ, ಕಿರಣ್,ರಾಜಣ್ಣ, ಮಂಜಣ್ಣ, ಅನಿಲ್, ಶಿವು, ಸಿಕೆ ಕುಮಾರ್, ರಾಘು, ಅಪ್ಪು, ಗೋವಿಂದ, ಬಾಲು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *