ಚಳ್ಳಕೆರೆ.ನ.30
ಕನಕದಾಸರು ಕೇವಲ ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾದ ವ್ಯಕ್ತಿಯಲ್ಲಿ ಅವರು ಇಡೀ ಮಾನವ ಕುಲಕ್ಕೆ ಮಾರ್ಗದರ್ಶನ ಮಾಡಿದ ಮಹಾಪುರುಷರು ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.
ನಗರದ ರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಕುರುಬ ಸಮುದಾಯದ ವಿರ್ವಿ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಾತಿ ಪಂಥ ಮೀರುವ ತತ್ವ ಪದಗಳ ಮೂಲಕ ಕುಲ ಕುಲ ಎಂದು ಹೊಡೆದಾಡದಿರಿ ಎಂದು ಸಾರಿದ ಮಹಾಪುರಷರ ಆದರ್ಶ ಪಾಲನೆಯ ಬಗ್ಗೆ ಪ್ರತಿಯೊಬ್ಬರು ಅಳವಡಿಸಿಕೊಂಡಾಗ ಮಾತ್ರ ಮಹಾಪುರುಷರ ಜಯಂತಿಗಳ ಆಚರಣೆಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.
ತಹಶೀಲ್ದಾರ್ ರೇಹಾನ್ ಪಾಷ , ಎಂ.ಮಲ್ಲೇಶಪ್ಪ ಇತರರು ಮಾತನಾಡಿದರು, ಕಾರ್ಯಕ್ರಮದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸದಸ್ಯರಾದ ವೀರಭದ್ರಪ್ಪ, ರಮೇಶ್ ಗೌಡ, ಸಮಾಜದ ಮುಖಂಡರಾದ ಪರಸಪ್ಪ, ಜಗದೀಶ್, ಸದಾಶಿವಯ್ಯ, ರುದ್ರಮುನಿ, ಹನುಮಂತರಾಯ, ಮಹಾಂತಪ್ಪ ಹಾಗೂ ಸಮಾಜದ ಮುಖಂಡರ, ತಾಪಂ ಇಒ ಶಶಿಶರ್, ಬಿಇಒ ಸುರೇಶ್ , ಸಮಾಜಕಲ್ಯಾಣ ಮಂಜಪ್ಪ, ಎಸ್ಟಿ ಇಲಾಖೆ ಶಿವರಾಜ್ , ಸಿಡಿಪಿಒ ಹರಿಪ್ರಸಾದ್, ಪಶುಸಂಗೋಪನೆ ಡಾ.ರೇವಣ್ಣ, ಅಕ್ಷರದಾಸೋಹ ತಿಪ್ಪೇಸ್ವಾಮಿ, ಡಿವೈಎಸ್ಪಿ, ರಾಜಣ್ಣ, ಪಿಎಸ್ ಐ ಸತೀಶ್ ನಾಯ್ಕ. ಅರಣ್ಯ ಇಲಾಖೆ ಬಹುಗುಣ, ಕಸಬಾ ಕಂದಾಯ ನಿರೀಕ್ಷ ಲಿಂಗೇಗೌಡ, ಶಿರಸ್ತೆದಾರ್ ಗಿರೀಶ್, ಗ್ರಾಮಲೆಕ್ಕಾಧಿಕಾರಿ ಪ್ರಕಾಶ್,ಬಿಸಿಎಂ ಅಧಿಕಾರಿ ದಿವಾಕರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಕಚೇರಿ ಹಾಗೂ ತಾಲೂಕು ಪಂಚಾಯತ್ ಕಚೇರಿಗಳಲ್ಲಿ ಸರಳವಾಗಿ ಕನಕ ಜಯಂತಿ ಆಚರಣೆ ಮಾಡಿ ಕನಕದಾಸರ ಭಾವ ಚಿತ್ರಕ್ಕೆಪುಸ್ಪಾರ್ಚನೆ ನೆರವೇರಿಲಾಗಿತ್ತು.
ರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಮಂಭಾಗದಿಂದ ಕನಕದಾಸರ ಸಾರೋಟ ಮೆರವಣಿಗೆಗೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು .ವಿವಿಧ ಕಲಾ ತಂಡಗಳೊಂದಿಗೆ ಪ್ರಮುಖ ರಸ್ತೆಯಲ್ಲಿ ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ್ತ, ನೆಹರು ವೃತ್ತದ ಮೂಲಕ ಮೆರವಣಿಗೆ ಸಾಗಿ ವೇಧಿಯತ್ತ ಬಂದಾಗ ವೇಧಿಕೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
![](https://janadhwani.in/wp-content/uploads/2023/11/FB_IMG_1701339437533-1.jpg)
0 Comments