ಚಳ್ಳಕೆರೆ:ಕನಕದಾಸರು ಒಂದು ಜಾತಿಗೆ ಸೀಮಿತವಲ್ಲ. ಅವರು ಕೀರ್ತನೆಗಳ ಮೂಲಕ ಸಮಾಜದಲ್ಲಿನ ಮೇಲು ಕೀಳನ್ನು ತೊರೆದು ಸರ್ವರಲ್ಲಿ ಆದ್ಯಾತ್ಮಿಕ ಭಾವನಾತ್ಮಕ ನೆಮ್ಮದಿಗೆ ತಳಪಾಯ ಹಾಕಿದ ಮಾನವತಾವಾದಿ ಅವರ ಆದರ್ಶಗಳನ್ನು ಎಲ್ಲರು ಬೆಳೆಸಿಕೊಳ್ಳಬೇಕೆಂದು ಶಾಸಕ ಟಿ ರಘುಮೂರ್ತಿ ಹೇಳಿದರು.
ತಾಲೂಕಿನ ಗೊರಲತ್ತು ಗ್ರಾಮದಲ್ಲಿ ಕನಕ ಗುರು ಪೀಠದ ಶ್ರೀ ಈಶ್ವರಾನಂದ ಸ್ವಾಮೀಜಿ ರವರ ದಿವ್ಯ ಸಾನಿಧ್ಯದಲ್ಲಿ ನಡೆದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು ಸಮಾಜದ ಏಳಿಗೆಯ ಕಾರ್ಯಗಳಿಗೆ ಜೀವನ ಮುಡಿಪಿಟ್ಟು ಆದ್ಯಾತ್ಮಿಕ ಸಮಾಜಿಕ, ಭಾವನಾತ್ಮಕ ಅಸೃಶ್ಯತೆಯನ್ನು ತೊಲಗಿಸುವ ನಿಟ್ಟಿನಲ್ಲಿ ಕುಲಕುಲ ಕುಲವೆಂದು ಹೊಡೆದಾಡದಿರಿ, ನಿನ್ನ ಕುಲದ ನೆಲೆಯನೇನಾದರೂ ಬಲ್ಲಿರ, ಎಂದು ಜನ ಸಾಮಾನ್ಯರಲ್ಲಿನ ಜಾತಿ ದರ್ಮಗಳ ಮೇಲು ಕೀಲು ಭಾವನೆಗಳನ್ನು ತೊಲಗಿಸಲು ತ್ಯಾಗ ಜೀವನ ಮಾಡಿದ ಮಾನವತಾವಾದಿಗಳಾಗಿದ್ದರು ಇಂತಹ ಮಹಾನ್ ಪುರುಷರ ತತ್ವ ಆದರ್ಶಗಳನ್ನು ಎಲ್ಲಾ ಜಾತಿ ಜನಾಂಗದ ಜನರು ಪಾಲಿಸುವುದು ಇಂದಿನ ಕಾಲಕ್ಕೆ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
![](https://janadhwani.in/wp-content/uploads/2023/12/IMG-20231230-WA0077.jpg)
ಕನಕ ಗುರುಪೀಠದ ಈಶ್ವರಾನಂದ ಸ್ವಾಮೀಜಿ ಮಾತನಾಡಿ ಕನಕದಾಸರು ಜಾತಿ ಮತಗಳ ಮೀರಿ ಸಾಮಾಜಿಕ ಮೌಡ್ಯತೆ ಶೈಕ್ಷಣ ಕ ಪ್ರಗತಿ ಆರ್ಥಿಕವಾಗಿ ಭೌಧಿಕವಾಗಿ ಹಿಂದುಳಿದವರು ಮುನ್ನೆಲೆಗೆ ಬರಬೇಕೆಂದು ಸಮಾಜದ ಉದ್ಧಾರಕ್ಕಾಗಿ ದುಡಿದು ಸಮಾಜದ ಸರ್ವ ಜನಾಂಗದ ಕಲ್ಯಾಣಕ್ಕಾಗಿ ಆಧ್ಯಾತ್ಮಿಕ ಹಿತ ಚಿಂತಕರಾಗಿದ್ದರು ಕುರುಬ ಸಮಾಜದಲ್ಲಿ ದಾಸರು ಜನಿಸಿದ್ದರೂ ಸಹ ಅವರು ಯಾವತ್ತು ಆ ಸಮಾಜಕ್ಕೆ ಗಂಟು ಬಿದ್ದಿರಲ್ಲಿಲ್ಲ ಕೀರ್ತನೆ ಮತ್ತು ವಚನ ಸಾಹಿತ್ಯದ ಮೂಲಕ ಸಾಮಾಜಿಕ ಅನಕ್ಷರತೆ ದೂರ ಮಾಡುವ ಮೂಲಕ ಸಮಾಜಕ್ಕೆ ಸಾಹಿತ್ಯ ದೃಷ್ಟಿಕೋನ ನೀಡಿದ ಮಹಾನ್ ಮಾನವತಾವಾದಿ ಎಂದು ಸ್ಮರಿಸಿದರು.
![](https://janadhwani.in/wp-content/uploads/2023/12/IMG-20231230-WA0076.jpg)
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಸುರೇಶ್ ಬಾಬು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಘವೇಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಮುಖಂಡರಾದ ಮಹಾಲಿಂಗಪ್ಪ, ಕಾಡಪ್ಪ, ಮಲ್ಲೇಶಪ್ಪ, ಶಿವಲಿಂಗಪ್ಪ, ರಾಜಣ್ಣ, ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಹಾಗೂ ಸಮುದಾಯದವರು ಉಪಸ್ಥಿತರಿದ್ದರು.
0 Comments