ಚಳ್ಳಕೆರೆ ಜನಧ್ವನಿ ವಾರ್ತೆ ಮಾ.10 ಕಚೇರಿಗೆ ಒಳಗೆ ಬರುವ ಮುನ್ನ ಎಚ್ಚರ ಸ್ವಲ್ಪ ಯ್ಯಾಮಾರಿದರೂ ಕೈಕಾಲು ಅಥವಾ ದೇಹದ ಯಾವುದೇ ಭಾಗಕ್ಕೆ ಪೆಟ್ಟಾಗುವ ಸಾಧ್ಯತೆ ಅಪಾಯ ಕಟ್ಟಿಟ್ಟ ಬುತ್ತಿ.
ಹೌದು ಇದು ಚಳ್ಳಕೆರೆ ನಗರದ ಹಳೆ ತಾಲೂಕು ಕಚೇರಿ ದುರಸ್ಥಿ ಕಾರ್ಯ ಭರದಿಂದ ಸಿದ್ದತೆ ಗೊಂಡು ಒಂದೇ ಸೂರಿನಡಿ ವಿವಿಧ ಕಚೇರಿಗಳ ಸೌಲಭ್ಯ ನಾಗರೀಕರಿಗೆ ದೊರೆಯ ಬೇಕು ಎಂಬ ಉದ್ದೇಶದಿಂದ ಶಿಥಿಲಗೊಂಡ ಕಚೇರಿ ದುರಸ್ಥಿಯಾಗುತ್ತಿದ್ದು ಕಚೇರಿಗೆ ಹೋಗುವ ಇಳಿಚಾರು ಮಟ್ಟಿಲಿನಿಂದ ಹೊಳಗೆ ಹೋಗುವ ದಾರಿಯ ನೆಲಕ್ಕೆ ನುಣುಪಾದ ಹಾಸು ಬಂಡೆ ಹಾಕಿರುವುದರಿಂದ ಜನರು ಜಾರಿ ಬೀಳುತ್ತಿದ್ದಾರೆ.
ಉಪನೊಂದಣಾಧಿಕಾರಿಗಳ ಕಚೇರಿಗೆ ವೃದ್ದರು, ವಿಕಲಚೇತನರು, ಸೇರಿದಂತೆ ನಿವೇಶಮ , ಜಮೀನು ಸೇರಿದಂತೆ ಖರೀದಿ ಹಾಗೂ ಮಾರಾಟ ಮಾಡಲು ನೊಂದಣೆ ಮಾಡಿಸಿಕೊಳ್ಳಲು ಬರುತ್ತಾರೆ ನೆಲಹಾಸು ನುಣುಪಾಗಿರುವುದರಿಂದ ಗ್ರೀಪ್ ಸಿಗದೆ ಜಾರಿ ಬೀಳುವಂತಾಗಿದೆ. ಮಳೆ ಗಾಲದಲ್ಲಿ ಇನ್ನು ಕಷ್ಟವಾಗುತ್ತಿದೆ ಇಲ್ಲಿ ಅವೈಜ್ಞಾನಿಕ ವಾಗಿ ನುಣುಪಾದ ನೆಲಸಹಾಸು ಹಾಕಿರುವುದನ್ನು ಸಾರ್ವಜನಿಕರು ವಿರೋಧಿಸಿದ್ದಾರೆ.
ನಗರಸಭೆ ಸದಸ್ಯ ಮಲ್ಲಿಕಾರ್ಜುನ ಮಾತನಾಡಿ ನನ್ನ ಎದುರಲ್ಲೇ ಒಬ್ಬ ವೃದ್ದರು ಜಾರಿ ಬಿದ್ದರು ನಾನೂ ಸಹ ಬೀಳ ಬೇಕಿತ್ತು ಇಲ್ಲಿ ನೆಲ ಹಾಸು ಬಂಡೆಗಳನ್ನು ಹಾಕಿ ಇನ್ನು ಒಂದು ತಿಂಗಳು ಕಳೆದಿಲ್ಲ ಆಗದೆ ಸುಮಾರು ಐದಾರು ಜನರು ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ ಕೂಡಲೆ ಇನನು ಅನೇಕ ಜನರು ಬಿದ್ದು ಅಂಗಾAಗಳನ್ನು ಕಳೆದು ಕೊಳ್ಳುವ ಮುನ್ನವೇ ನುಣುಪಾದ ಬಂಡೆಗಳನ್ನು ಕೂಡಲೆ ಬದಲಾಯಿಸಿ ಬೇರೆ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments