ಕಂದಾಯ ಸಚಿವರೇ ರೈತರ ಸಮಸ್ಯೆಗಳಿಗೆ ಸ್ಪಂದಿಸುವರೇ ಇದು ಜನಧ್ವನಿ ಡಿಜಿಟಲ್ ಮೀಡಿಯಾದ ಕಳ ಕಳಿ.

by | 09/10/23 | ಕೃಷಿ, ಬರ ಅಧ್ಯಯನ


ಚಳ್ಳಕೆರೆ ಜನಧ್ವನಿ ವಾರ್ತೆ ಅ.9 ಕಂದಾಯ ಸಚಿವರೇ ನಿಮ್ಮಇಲಾಖೆಯಲ್ಲಿನ ಹತ್ತು ಹಲವು ಸಮಸ್ಯೆಗಳನ್ನೊತ್ತು ಕಂದಾಯ ಇಲಾಖೆ ಕಚೇರಿಗೆ ರೈತರು ವರ್ಷಗಟ್ಟಲೆ ಅಲೆದಾಡಿದರೂ ಸಮಸ್ಯೆಗೆ ಪರಿಹಾರ ಕಾಣದೆ, ಬಡವರು ಕಂಗಾಲಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಗೆ ಮಂಗಳವಾರ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿರುವ ಕಂದಾಯ ಸಚಿವರು ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುವ ಜತೆಗೆ ಪೌತಿ ಖಾತೆ, ಪೋಡಿ ದುರಸ್ತಿ, ಹೊಲಗಳಿಗೆ ಹೋಗುವ ರಸ್ತೆಗಳ ಸಮಸ್ಯೆ ಬಗೆಹರಿಸುವ ಕಡೆ ಗಮನಹರಿಸಬೇಕಿದೆ. ಬಡವರಿಗೆ ಸರ್ಕಾರದಿಂದ ವಿತರಿಸಿದ ಬಗರ್ ಹುಕುಂ ಸಾಗುವಳಿ ಭೂಮಿ ಮಂಜುರಾತಿ ಮಾಡಿ ಸುಮಾರು 50 ವರ್ಷಗಳು ಕಳೆದರೂ ರೈತರ ಹೆಸರಿಗೆ ಪಹಣಿ ಬಂದರೂ ಪೋಡಿ ದುರಸ್ತಿಯಾಗದೆ ಬಹುಮಾಲೀಕತ್ವ ಹೊಂದಿರುವುದರಿಂದ ರೈತರು, ಪ್ರತ್ಯೇಕ ಸರ್ವೇ ನಂಬರ್ ಮತ್ತು ಪಹಣಿ ನೀಡದಿರುವುದು ಬೆಳೆವಿಮೆ, ಬೆಳೆ ಪರಿಹಾರ, ಸೇರಿದಂತೆ ಸರ್ಕಾರದ ಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ.
ಪೌತಿ ಖಾತೆಗಾಗಿ ಹೈರಾಣು. ಸರಕಾರಿ ಸೌಲಭ್ಯಗಳಿಂದ ವಂಚನೆ.
ತಾತ-ಮುತ್ತಾತರಹೆಸರಿಗಿದ್ದು, ಅವರು ಮೃತಪಟ್ಟು ಸುಮಾರು 60 ವರ್ಷಗಳು ಕಳೆದರೂ ಅವರ ಕುಟುಂಬಸ್ಥರ ಹೆಸರಿಗೆ ಪೌತಿ ಖಾತೆಯಾಗಿದೆ. ಆಸ್ತಿ ಹಂಚಿಕೆ ವಿಚಾರದಲ್ಲಿ ಕುಟುಂಬಸ್ಥರು ಹೊಡೆದಾಡಿ, ಕಡಿದಾಡಿಕೊಂಡು ಪೋಲಿಸ್ ಠಾಣೆ ಹಾಗೂ ನ್ಯಾಯಾಲಯದ ಮೊರೆ ಹೋಗಿ ಕುಟುಂಬದಲ್ಲಿ ನಮ್ಮದಿ ಕಳೆದುಕೊಂಡು ಜೀವನ ಸಾಗಿಸುತ್ತಿದ್ದಾರೆ.

ರೈತರ ಜಮೀನುಗಳಿಗೆ ಹೋಗುವ ದಾರಿಯ ಪ್ರಕರಣಗಳು ಕೂಡ ಹೆಚ್ಚಾಗಿ ದಾರಿ ಬಿಡಿಸುವಂತೆ ತಾಲೂಕುಕಚೇರಿ ಅಲೆದಾಡಿ ಕೊನೆಗೆ ನ್ಯಾಯಾಲಯದ ಮೆಟ್ಟಿಲೇರಿರುವ ಉದಾಹರಣೆಗಳು ಸಾಕಷ್ಟಿವೆ. ಸರ್ಕಾರ ಮಂಜೂರಾತಿ ಹಕ್ಕುಪತ್ರ ನೀಡಿರುವದಾಖಲೆ ಪಜೀತಿ ತಾತಾ ಮುತ್ತಾತರ ಹೆಸರಿನಲ್ಲಿರುವ ಜಮೀನು ಕುಟುಂಬಸ್ಥರ ಹೆಸರಿಗೆ ಮಾಡಿಸಿಕೊಳ್ಳಲು ವಂಶವೃಕ್ಷ, ಆಧಾರ್, ಮರಣ ಪ್ರಮಾಣಪತ್ರ ಸೇರಿದಂತೆ ಇತರೆ ದಾಖಲೆ ಕೇಳುತ್ತಿದ್ದು, ಸುಮಾರು 50 ವರ್ಷಗಳ ಹಿಂದೆ ಜನನ- ಮರಣ ಬರೆಸುವುದಾಗಲಿ, ಆಧಾರ್ ನೋಂದಣಿಯಾಗಲಿ ಇರಲಿಲ್ಲ. ಅನಕ್ಷರಸ್ಥರ ಕಾಲವಾಗಿತ್ತು. ಸುಮಾರು 50 ರಿಂದ 80 ವರ್ಷಗಳಿಂದ ಮೃತಪಟ್ಟ ನಮ್ಮ ತಾತ್ತರ ಹೆಸರಿಗಿರುವ ಜಮೀನು ಹೆಸರಿಗೆ ಮಾಡಿಸಿಕೊಳ್ಳಲು ಅಧಿಕಾರಿಗಳು ಕೇಳುವ ದಾಖಲೆಗಳು ಲಭ್ಯವಿಲ್ಲದ ಕಾರಣ ಪವತಿ ಖಾತೆ ಮಾಡಿಸಲು ತಾಲೂಕು ಕಚೇರಿಗೆ
ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರಿ ನಿಮಯ ಸಡಿಲಗೊಳಿಸಿ ಷೋಡಿ ದುರಸ್ತಿ, ಪೌತಿ ಖಾತೆ ಆಂದೋಲನ ಮೂಲಕ
ಅಧಿಕಾರಿಗಳು ಗ್ರಾಮ ಮಹಜರ್, ಸ್ಥಳ ಪರಿಶೀಲನೆ ನಡೆಸಿ ದುರಸ್ತಿಗೆ ಪರಿಹಾರ ದೊರಕಿಸುವಂತೆ ರೈತರು ಕಂದಾಯ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಜಮೀನುಗಳು ರೈತರ ಸ್ವಾಧೀನದಲ್ಲಿರುವ ಭೂಮಿ ಅಳತೆ ಮಾಡಿ ನಕ್ಷೆ ತಯಾರಿಸಿ ಪ್ರತ್ಯೇಕ ಪಹಣಿ ನಂಬರ್ ಕೊಟ್ಟು ಅಧಿಕೃತ ಮಾಡಿಕೊಡಲು ಪೋಡಿ ದುರಸ್ತಿ ಮಾಡಬೇಕು ಎಂದು ರೈತರ ಒತ್ತಾಯ.
ಈಗಲಾದರೂ ಕಂದಾಯ ಸಚಿವರು ರೈತರ ಸಮಸ್ಯೆಗೆ ಸ್ಪಂದಿಸುವರೇ ಕಾದು ನೋಡ ಬೇಕಿದೆ.
.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page