ಚಳ್ಳಕೆರೆ ಜನಧ್ವನಿ ವಾರ್ತೆ ಅ.9 ಕಂದಾಯ ಸಚಿವರೇ ನಿಮ್ಮಇಲಾಖೆಯಲ್ಲಿನ ಹತ್ತು ಹಲವು ಸಮಸ್ಯೆಗಳನ್ನೊತ್ತು ಕಂದಾಯ ಇಲಾಖೆ ಕಚೇರಿಗೆ ರೈತರು ವರ್ಷಗಟ್ಟಲೆ ಅಲೆದಾಡಿದರೂ ಸಮಸ್ಯೆಗೆ ಪರಿಹಾರ ಕಾಣದೆ, ಬಡವರು ಕಂಗಾಲಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಗೆ ಮಂಗಳವಾರ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿರುವ ಕಂದಾಯ ಸಚಿವರು ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುವ ಜತೆಗೆ ಪೌತಿ ಖಾತೆ, ಪೋಡಿ ದುರಸ್ತಿ, ಹೊಲಗಳಿಗೆ ಹೋಗುವ ರಸ್ತೆಗಳ ಸಮಸ್ಯೆ ಬಗೆಹರಿಸುವ ಕಡೆ ಗಮನಹರಿಸಬೇಕಿದೆ. ಬಡವರಿಗೆ ಸರ್ಕಾರದಿಂದ ವಿತರಿಸಿದ ಬಗರ್ ಹುಕುಂ ಸಾಗುವಳಿ ಭೂಮಿ ಮಂಜುರಾತಿ ಮಾಡಿ ಸುಮಾರು 50 ವರ್ಷಗಳು ಕಳೆದರೂ ರೈತರ ಹೆಸರಿಗೆ ಪಹಣಿ ಬಂದರೂ ಪೋಡಿ ದುರಸ್ತಿಯಾಗದೆ ಬಹುಮಾಲೀಕತ್ವ ಹೊಂದಿರುವುದರಿಂದ ರೈತರು, ಪ್ರತ್ಯೇಕ ಸರ್ವೇ ನಂಬರ್ ಮತ್ತು ಪಹಣಿ ನೀಡದಿರುವುದು ಬೆಳೆವಿಮೆ, ಬೆಳೆ ಪರಿಹಾರ, ಸೇರಿದಂತೆ ಸರ್ಕಾರದ ಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ.
ಪೌತಿ ಖಾತೆಗಾಗಿ ಹೈರಾಣು. ಸರಕಾರಿ ಸೌಲಭ್ಯಗಳಿಂದ ವಂಚನೆ.
ತಾತ-ಮುತ್ತಾತರಹೆಸರಿಗಿದ್ದು, ಅವರು ಮೃತಪಟ್ಟು ಸುಮಾರು 60 ವರ್ಷಗಳು ಕಳೆದರೂ ಅವರ ಕುಟುಂಬಸ್ಥರ ಹೆಸರಿಗೆ ಪೌತಿ ಖಾತೆಯಾಗಿದೆ. ಆಸ್ತಿ ಹಂಚಿಕೆ ವಿಚಾರದಲ್ಲಿ ಕುಟುಂಬಸ್ಥರು ಹೊಡೆದಾಡಿ, ಕಡಿದಾಡಿಕೊಂಡು ಪೋಲಿಸ್ ಠಾಣೆ ಹಾಗೂ ನ್ಯಾಯಾಲಯದ ಮೊರೆ ಹೋಗಿ ಕುಟುಂಬದಲ್ಲಿ ನಮ್ಮದಿ ಕಳೆದುಕೊಂಡು ಜೀವನ ಸಾಗಿಸುತ್ತಿದ್ದಾರೆ.
ರೈತರ ಜಮೀನುಗಳಿಗೆ ಹೋಗುವ ದಾರಿಯ ಪ್ರಕರಣಗಳು ಕೂಡ ಹೆಚ್ಚಾಗಿ ದಾರಿ ಬಿಡಿಸುವಂತೆ ತಾಲೂಕುಕಚೇರಿ ಅಲೆದಾಡಿ ಕೊನೆಗೆ ನ್ಯಾಯಾಲಯದ ಮೆಟ್ಟಿಲೇರಿರುವ ಉದಾಹರಣೆಗಳು ಸಾಕಷ್ಟಿವೆ. ಸರ್ಕಾರ ಮಂಜೂರಾತಿ ಹಕ್ಕುಪತ್ರ ನೀಡಿರುವದಾಖಲೆ ಪಜೀತಿ ತಾತಾ ಮುತ್ತಾತರ ಹೆಸರಿನಲ್ಲಿರುವ ಜಮೀನು ಕುಟುಂಬಸ್ಥರ ಹೆಸರಿಗೆ ಮಾಡಿಸಿಕೊಳ್ಳಲು ವಂಶವೃಕ್ಷ, ಆಧಾರ್, ಮರಣ ಪ್ರಮಾಣಪತ್ರ ಸೇರಿದಂತೆ ಇತರೆ ದಾಖಲೆ ಕೇಳುತ್ತಿದ್ದು, ಸುಮಾರು 50 ವರ್ಷಗಳ ಹಿಂದೆ ಜನನ- ಮರಣ ಬರೆಸುವುದಾಗಲಿ, ಆಧಾರ್ ನೋಂದಣಿಯಾಗಲಿ ಇರಲಿಲ್ಲ. ಅನಕ್ಷರಸ್ಥರ ಕಾಲವಾಗಿತ್ತು. ಸುಮಾರು 50 ರಿಂದ 80 ವರ್ಷಗಳಿಂದ ಮೃತಪಟ್ಟ ನಮ್ಮ ತಾತ್ತರ ಹೆಸರಿಗಿರುವ ಜಮೀನು ಹೆಸರಿಗೆ ಮಾಡಿಸಿಕೊಳ್ಳಲು ಅಧಿಕಾರಿಗಳು ಕೇಳುವ ದಾಖಲೆಗಳು ಲಭ್ಯವಿಲ್ಲದ ಕಾರಣ ಪವತಿ ಖಾತೆ ಮಾಡಿಸಲು ತಾಲೂಕು ಕಚೇರಿಗೆ
ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರಿ ನಿಮಯ ಸಡಿಲಗೊಳಿಸಿ ಷೋಡಿ ದುರಸ್ತಿ, ಪೌತಿ ಖಾತೆ ಆಂದೋಲನ ಮೂಲಕ
ಅಧಿಕಾರಿಗಳು ಗ್ರಾಮ ಮಹಜರ್, ಸ್ಥಳ ಪರಿಶೀಲನೆ ನಡೆಸಿ ದುರಸ್ತಿಗೆ ಪರಿಹಾರ ದೊರಕಿಸುವಂತೆ ರೈತರು ಕಂದಾಯ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಜಮೀನುಗಳು ರೈತರ ಸ್ವಾಧೀನದಲ್ಲಿರುವ ಭೂಮಿ ಅಳತೆ ಮಾಡಿ ನಕ್ಷೆ ತಯಾರಿಸಿ ಪ್ರತ್ಯೇಕ ಪಹಣಿ ನಂಬರ್ ಕೊಟ್ಟು ಅಧಿಕೃತ ಮಾಡಿಕೊಡಲು ಪೋಡಿ ದುರಸ್ತಿ ಮಾಡಬೇಕು ಎಂದು ರೈತರ ಒತ್ತಾಯ.
ಈಗಲಾದರೂ ಕಂದಾಯ ಸಚಿವರು ರೈತರ ಸಮಸ್ಯೆಗೆ ಸ್ಪಂದಿಸುವರೇ ಕಾದು ನೋಡ ಬೇಕಿದೆ.
.
ಕಂದಾಯ ಸಚಿವರೇ ರೈತರ ಸಮಸ್ಯೆಗಳಿಗೆ ಸ್ಪಂದಿಸುವರೇ ಇದು ಜನಧ್ವನಿ ಡಿಜಿಟಲ್ ಮೀಡಿಯಾದ ಕಳ ಕಳಿ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments