ನಾಯಕನಹಟ್ಟಿ:: ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಓಬಯ್ಯನಹಟ್ಟಿ ಗ್ರಾಮದಲ್ಲಿ ಜಾನಪದ ಶೈಲಿಯ ವೀರಗಾಸೆ ತಮಟೆ ಉರುಮೆ ನಂದಿಕೋಲು ಕೋಲಾಟ ಸೇರಿದಂತೆ ಶನಿವಾರ ಕಾರ್ತಿಕೋತ್ಸವದ ಅಂಗವಾಗಿ ಅದ್ದೂರಿಯಾಗಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಇದೆ ವೇಳೆ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿಯ ಮುಕ್ತಿ ಬಾವುಟ ಹಾರಾಜು ಪ್ರಕ್ರಿಯೆ ನಡೆಯಿತು.
ಮುಕ್ತಿ ಬಾವುಟವನ್ನು
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಂಡೆ ಕಪಿಲೆ ಓಬಣ್ಣ, ರವರು ಒಂದು ಲಕ್ಷದ 1, 101 ರೂಪಾಯಿ ಗಳಿಗೆ ಮುಕ್ತಿ ಬಾವುಟವನ್ನು ಪಡೆದುಕೊಂಡಿರು.
ಗ್ರಾಮದ ಪ್ರಮುಖ ಬೀದಿಯಲ್ಲಿ ನೂರಾರು ಭಕ್ತರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವಕ್ಕೆ ಗ್ರಾಮಸ್ಥರು ಅದ್ದೂರಿಯಾಗಿ ಪೂಜಾ ಕೈ ಕಾರ್ಯಗಳನ್ನು ನೆರವೇರಿಸಿ ಮಹಾ ಮಂಗಳಾರತಿ ನಂತರ ಶ್ರೀ ಆಂಜನೇಯ ಸ್ವಾಮಿ ರಥೋತ್ಸವಕ್ಕೆ ಗ್ರಾಮಸ್ಥರು ಚಾಲನೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಶ್ರೀ ಶ್ರೀ ಪೂಜ್ಯ ಕನ್ನೇಶ್ವರ ಮಠದ ಮಲ್ಲಪ್ಪ ಸ್ವಾಮೀಜಿ ,ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಂಡೆ ಕಪಿಲೆ ಓಬಣ್ಣ, ಉಪಾಧ್ಯಕ್ಷೆ ಲಕ್ಷ್ಮೀದೇವಿ ಮಹಾದೇವಪ್ಪ, ಸದಸ್ಯರಾದ ಗೀತಮ್ಮ ಕುಮಾರ್, ಸೋಮಶೇಖರ್, ಬಿಜೆಪಿ ಹಿರೇಹಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಡಿ ಎಚ್ ಪರಮೇಶ್ವರಪ್ಪ, ಡಿ ಟಿ ಕಾಮರಾಜ್, ಪಿ ಎಂ ಮಹಾದೇವಣ್ಣ, ದಳವಾಯಪ್ಪ, ಕೆ ಬಿ ಕುಮಾರ್, ಮೊಳಕಾಲ್ಮೂರು ತಾಲೂಕು ಘಟಕದ 108 ನೌಕರ ಸಂಘದ ಅಧ್ಯಕ್ಷ ಓ.ಎಂ. ಚಿನ್ನಮಲ್ಲಯ್ಯ, ನಿವೃತ್ತ ಕೃಷಿ ಅಧಿಕಾರಿ ಮಹದೇವಪ್ಪ, ಗಣೇಶ್ ಬೋರಯ್ಯ, ಮ್ಯಾಕಲಮಲ್ಲಯ್ಯ, ಎಲ್ಐಸಿ ಓಬಣ್ಣ, ಶಿವಲಿಂಗಪ್ಪ, ಸರ್ವೆ ಮಲ್ಲಯ್ಯ, ನಾಗಭೂಷಣ್, ಮರಡಿ ಬೋರಯ್ಯ, ಶ್ರೀನಿವಾಸ್ ಗೊಂಚಿ ಸಣ್ಣ ಬೋರಯ್ಯ, ಪರ್ವತಯ್ಯ,
ಸೇರಿದಂತೆ ಓಬಯ್ಯನಹಟ್ಟಿ ಗ್ರಾಮದ ಸಮಸ್ತ ಊರಿನ ಗ್ರಾಮಸ್ಥರು ಸುತ್ತಮುತ್ತಲಿನ ಹಳ್ಳಿಯ ಗ್ರಾಮಸ್ಥರು ಇದ್ದರು
0 Comments