ಚಳ್ಳಕೆರೆ ಜನಧ್ವನಿ ವಾರ್ತೆ ಜೂ 18
ಏನಾಪ್ಪ ಇವತ್ತು ಭಾನುವಾರ ರಜೆ ದಿನ ಗ್ರಾಮಪಂಯತ್ ಕಚೇರಿಗಳು ಬಾಗಿಲು ತೆರೆದು ಸಿಬ್ಬಂದಿಗಳು ಕಾಯುತ್ತಿದ್ದಾರೆ ಎಂಬುದು ಜನರಿಗೆ ಆಶ್ಚರ್ಯದ ಸಂಗತಿ ಮೂಡಿದೆ.
ಹೌದು ಇದು ಕಾಂಗ್ರೆಸ್ ಚುನಾವಣೆ ಮುನ್ನ ಮತದಾರರಿಗೆ ನೀಡಿದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಭಾನುವಾರ ಚಾಲನೆ ನೀಡಲಿದ್ದಾರೆ ಗೃಹಜ್ಯೋತಿ ಫಲಾನುಭವಿಗಳ ನೋಂದಣೆಗೆ ಗ್ರಾಮಪಂಚಾಯತಿ ಕಚೇರಿಗಳಲ್ಲೂ ಅವಕಾಶ ನೀಡಿರುವುದರಿಂದ ನೋಂದಣೆ ಮಾಡಿಕೊಳ್ಳಲು ಗ್ರಾಪಂ ಕಚೇರಿಯಲ್ಲಿ ಬೆಳಗ್ಗೆ 10ಗಂಟೆಯಿಂದ ಸುಮಾರು 2 ಗಂಟೆಯವರೆಗೂ ಕಾಯುತ್ತಾ ಕುಳೀತರೂ ಗೃಹಜ್ಯೋತಿ ವೆಬ್ ಸೈಟ್ ಓಪನ್ ಆಗದೆ ಸಿಬ್ಬಂದಿಗಳು ಹೈರಾಣಗಿದ್ದಾರೆ. ಇತ್ತ ಸರಕಾರದ ಸುತ್ತೋಲೆ ಮೇಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡದೆ ರಜೆ ದಿನವೂ ಸಹ ಗೃಹಜ್ಯೋತಿ ವೆಬ್ ಸೈಟ್ ಓಪನ್ ಆಗದ ಹಿನ್ನಲೆಯಲ್ಲಿ ಸೇವಾ ಸಿಂಧೂ ಪೋರ್ಟಲ್, ಖಾಸಗಿ ಕಂಪ್ಯೂಟ್ ಹಾಗೂ ಗ್ರಾಪಂ ಕಚೇರಿಗಳಿಗೆ ಗೃಹಜ್ಯೋತಿ ಅರ್ಜಿ ಸಲ್ಲಿಕೆ ಮುಂದಾಗಿದ್ದಾರೆ. ಹೀಗಾಗಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸ್ವೀಕರಿಸಲು ಗ್ರಾಪಂ ಅಧಿಕಾರಿಗಳು ,ಸಿಬ್ಬಂದಿ ಮುಂದಾಗಿದ್ದಾರೆ. ವೆಬ್ ಸೈಟ್ ಓಪನ್ ಆಗದ ಹಿನ್ನೆಲೆ ಜನತೆ ಬೇಸರದಿಂದ ವಾಪಸ್ ತೆರಳರಿದರೆ ಗ್ರಾಪಂ ಅಧಿಕಾರಿಗಳು ಸಿಬ್ಬಂದಿಗಳು ಮಾತ್ರ ಕಂಪ್ಯೂಟ್ ಮುಂದೆ ಜಾತಕ ಪಕ್ಷಿಯಂತೆ ಕಾಯುತ್ತಿರುವ ದೃಶ್ಯ ಸೆರೆಯಾಗಿದೆ.
ಅರ್ಜಿಸಲ್ಲಿಸಲು ದಾಖಲೆಳು.
ಫಲಾನುಭವಿಗಳಾಗಲು ತಮ್ಮ ಆಧಾರ್ ಕಾರ್ಡ್, ವಿದ್ಯುತ್ ಖಾತೆ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕಾಗಿದೆ. ಒಂದು ವೇಳೆ ನೀವು ಬಾಡಿಗೆದಾರರಾಗಿದ್ದರೆ ಬಾಡಿಗೆ ಮನೆಯ ವಾಸದ ದೃಢೀಕರಣ, ಆಧಾರ್ ಇಲ್ಲವೇ ವೋಟರ್ ಐಡಿಯನ್ನು ನೀಡಬೇಕು
ನೊಂದಣೆ ಮಾಡಿಕೊಳ್ಳಬಹುದು.
ಗೃಹಜ್ಯೋತಿ ಯೋಜನೆ ಸೌಲಭ್ಯ ಪಡೆಯಲು ನೋಂದಣಿಯನ್ನು ಎಲ್ಲಿ ಮಾಡಿಕೊಳ್ಳಬೇಕು ಎಂಬ ಮಾಹಿತಿ ಗ್ರಾಮಪಂಚಾಯತಿ ಕಚೇರಿ,ನಾಡ ಕಚೇರಿ, ಕರ್ನಾಟಕ ಒನ್, ಬೆಂಗಳೂರು ಒನ್ ಸೆಂಟರ್, ಗ್ರಾಮ ಒನ್ ಕೇಂದ್ರಗಳಲ್ಲಿ ಅಥವಾ ಯಾವುದೇ ವಿದ್ಯುತ್ ಕಚೇರಿಯಲ್ಲಿಯೂ ಕೂಡ ನೋಂದಣಿ ಮಾಡಿಕೊಳ್ಳಬಹುದು. ಯೋಜನೆಗೆ ಸಂಬAಧಿಸಿ ಕುಂದು ಕೊರತೆ ಏನಿದ್ದರೂ ವಿದ್ಯುತ್ ಕಚೇರಿಯನ್ನು ಸಂಪರ್ಕಿಸಿ ಅಥವಾ ದಿನದ 24 ಗಂಟೆಯೂ ಸೇವೆ ಸಲ್ಲಿಸುವ ಸಹಾಯವಾಣಿ 1912 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
ಆಗಸ್ಟ್ 1 ರಿಂದ ಜಾರಿ
ಗೃಹ ಜ್ಯೋತಿ ಯೋಜನೆಯು ಆಗಸ್ಟ್ 1 ರಿಂದ (ಜುಲೈನಲ್ಲಿ ವಿದ್ಯುತ್ ಬಳಕೆ ಮಾಡಿರುವ ಹಿನ್ನೆಲೆ) ಜಾರಿಗೆ ಬರಲಿದ್ದು, 200 ಯುನಿಟ್ ವಿದ್ಯುತ್ ಅಥವಾ ಅದಕ್ಕಿಂತ ಕಡಿಮೆ ಯುನಿಟ್ ಬಳಸಿದವರು ಆಗಸ್ಟ್ 1 ರಿಂದ ಶೂನ್ಯ ಬಿಲ್ ಪಡೆಯಲಿದ್ದಾರೆ. ತಿಂಗಳ ಬಳಕೆ ಗರಿಷ್ಠ 200 ಯುನಿಟ್ವರೆಗೆ, ಕಳೆದ ಹಣಕಾಸು ವರ್ಷದಲ್ಲಿ ಪ್ರತಿ ಗ್ರಾಹಕ ತಿಂಗಳ ಸರಾಸರಿ ಬಳಕೆ ಮೇಲೆ ಮತ್ತು ಅವರ ಸರಾಸರಿ ಉಪಯೋಗದ ಮೇಲೆ ಶೇ.10% ಉಚಿತ ವಿದ್ಯುತ್ ಅರ್ಹತೆಗೆ ಅರ್ಹರು.
ಕೊನೆಯ ದಿನಾಂಕವಿಲ್ಲ
ಗೃಹ ಜ್ಯೋತಿ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ನಿಗದಿಪಡಿಸಿಲ್ಲ. ವರ್ಷವಿಡೀ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಇರುತ್ತದೆ. ಅರ್ಜಿ ಸಲ್ಲಿಕೆಯೂ ಸಂಪೂರ್ಣ ಉಚಿತವಾಗಿದೆ ಎಂದು ಸರಕಾರ ತಿಳಿಸಿದೆ.
ಭಗವಂತನಲ್ಲಿ ಪ್ರೇಮಭಕ್ತಿ ಅವಶ್ಯವಾದದ್ದು:- ಸ್ವಾಮಿ ಪ್ರಕಾಶಾನಂದಜೀ ಮಹಾರಾಜ್ ಅಭಿಪ್ರಾಯ.
ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀ ಶಾರದಾಶ್ರಮದಲ್ಲಿ ಆಯೋಜಿಸಿದ್ದ ಎರಡನೇ ದಿನದ ಶ್ರೀಮದ್ ಭಾಗವತ ಸಪ್ತಾಹ...
0 Comments