ಚಳ್ಳಕೆರೆ ಫೆ.4 ಗ್ರಾಮ ಪಂಚಾಯಿತಿ ಮೂಲ ಪಿಡಿಒಗೆ ಸದಸ್ಯರು ವಿರೋಧ ಮಾಡುವುದರಿಂದ ಪ್ರಭಾರ ಪಿಡಿಒ ಕರ್ತವ್ಯ ಬಿಡದೆ ಇರುವುದರಿಂದ ಇಬ್ಬರು ಪಿಡಿಒಗಳು ಹಾಜರಾತಿಗೆ ಸಹಿ ಹಾಕಲಾಗುತ್ತಿದೆ. ಇದು ಜಿಲ್ಲಾಹಾಗೂ ತಾಲೂಕು ಮಟ್ಟದ ಅಧಿಕಾರಿಗಳಲ್ಲಿ ಇಂತಹ ಪ್ರಕರಗಳನ್ನು ನೋಡಿದ್ದೇವೆ ಕೇಳಿದ್ದೇವೆ ಈಗ ಗ್ರಾಮಪಂಚಾಯಿತಿಗೂ ಹಬ್ಬಿರುವುದು ವಿಪರ್ಯಾಸವಾಗಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ಆಂದ್ರಗಡಿಭಾಗಕ್ಕೆ ಹೊಂದಿಕೊಂಡ ಸಿದ್ದೇಶ್ವರನ ದುರ್ಗ ಗ್ರಾಮಪಂಚಾಯಿತಿ ಪಿ.ಡಿ.ಒ ಮಾಲತೇಶ್ ಮೂಲ ಸ್ಥಾನವಾಗಿದ್ದು ಕರ್ತವ್ಯಕ್ಕೆ ಹಾಜರಿಯಾಗುವಂತೆ ಪಿಡಿಒ ಮಾಲತೇಶ್ ಗೆ ಆದೇಶ ನೀಡಲಾಗಿದೆ ಎನ್ನಲಾಗಿದೆ. ಗೌರಸಮುದ್ರ ಗ್ರಾಪಂ ಪಿ ಡಿ ಒ ಹನುಮಂತರಾಗೆ ಹೆಚ್ಚುವರಿಯಾಗಿ ಸಿದ್ದೇಶ್ವರನದುರ್ಗ ಗ್ರಾಪಂ ನೀಡಲಾಗಿತ್ತು .ಈಗ ಮೂಲ ಪಿಡಿಒ ಮಾಲತೇಶ್ ಕರ್ತವ್ಯಕ್ಕೆ ಹಾಜರಿಯಾದರೂ ಚಾರ್ಜ್ ನೀಡದೆ ಇರುವುದರಿಂದ ಗ್ರಾಪಂ ಕಚೇರುಗೆ ಹಾಜರಿಯಾಗಿ ಸಿಬ್ಬಂದಿ ಹಾಜರಾತಿ ಪುಸ್ತಕಕ್ಕೆ ಸಹಿಹಾಕಿ ಕಚೇರಿಯಲ್ಲಿ ಕುಳಿತು ಕೊಂಡು ಮರಳಿ ಬರುತ್ತಾರೆ ಎನ್ನಲಾಗಿದೆ.
ಮೂಲ ಪಿಡಿಒ ಮಾಲತೇಶ್ ಇವರು ಸದಸ್ಯರಿಗೆ ಹೊಂದಾಣಿಕೆ ಹಾಗೂ ಸ್ಪಂದಿಸುತ್ತಿಲ್ಲ ಎಂಬ ಕಾರಣ ಸದಸ್ಯರು ಬೇಡ ಎನ್ನಲಾಗಿದೆ ಮೂಲ ಸ್ಥಾನ ಸಿದ್ದೇಶ್ವರನದುರ್ಗ ವಾಗಿರುವುದರಿಂದ ಮೂಲಸ್ಥಾನಕ್ಕೆ ಕರ್ತವ್ಯಕ್ಕೆ ಹಾಜರಾಗುವಂತೆ ಮೇಲಾಧಿಕಾರಿಗಳ ಆದೇಶದ ಮೇರೆಗೆ ಗ್ರಾಪಂ ಕಚೇರಿಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕರ್ತವ್ಯಕ್ಕೆ ಹಾಜರಿಯಾಗಿ ಸುಮಾರು 20 ದಿನ ಕಳೆದರೂ ಪ್ರಭಾರ ಪಿಡಿಒ ಹನುಮಂತರಾಜ್ ಚಾರ್ಜು ಕೊಡದ ಕಾರಣ ಇಬ್ಬರು ಪಿಡಿಒಗಳು ಕರ್ತವ್ಯ ನಿರ್ವಹಿಸುತ್ತಿದ್ದು ಸಿಬ್ಬಂದಿಗಳ ಹಾಜರಾತಿ ಪುಸ್ತಕದಲ್ಲಿ ಸಹಿಹಾಕುತ್ತಿದ್ದಾರೆ ಎನ್ನಲಾಗಿದೆ. ಮೂಲ ಪಿಡಿಒ ಮಾಲತೇಶ್ ಲೆಕ್ಕಕ್ಕುಂಟು ಕರ್ತವ್ಯಕ್ಕಿಲ್ಲ ಎಂಬಂತಾಗಿದೆ. *ಹಳ್ಳಿ ರಾಜಕೀಯಕ್ಕೆ ಪಿಡಿಒಗಳು ಮೌನ*
ಬಹತೇಕ ಗ್ರಾಮಪಂಚಾಯಿಗಳಲ್ಲಿ ಪಿಡಿಒ ಬೇಡ. ಬೇಕು ಎಂಬ ಸದಸ್ಯರ ಬಣಗಳಿಗೆ ಸಿಲುಕಿ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಿದರೆ ಇನ್ನು ಕೆಲವು ಪಿಡಿಗಳಿಗೆ ಸ್ಥಳ ತೋರಿಸದೇ ಇರುವುದು ಹಾಗೂ ಕಾರ್ಯದರ್ಶಿಗಳಿಗೆ ಎರಡು ಪಂಚಾಯಿಗಳಿಗೆ ಪಿಡಿಒ ಸ್ಥಾನ ನೀಡಲಾಗಿದೆ ಮೂಲ ಪಿಡಿಒಗಳಿಗೆ ಸ್ಥಾನ ಸಿಗದೆ ತಾಲೂಕು ಪಂಚಾಯತ್ ಕಚೇರಿಗೆ ಅಲೆದಾಡುತ್ತಿರುವ ದೃಶ್ಯ ಕಾಣ ಬಹುದು. ಪ್ರಮುಖವಾಗಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳಲ್ಲಿ ನಡೆಯುತ್ತಿರುವ ಅಕ್ರಮಗಳು, 15 ನೇ ಹಣಕಾಸು.ವರ್ಗ-1 ಪ್ರಕೃತಿ ವಿಕೋಪ ಯೋಜನೆ. ಸೇರಿದಂತೆ ಕಾನೂನು ಬಾಹಿರ ಕೆಲಸ ನಿರ್ವಹಿಸಲು ಜನಪ್ರತಿನಿಧಿಗಳಿಂದ ಒತ್ತಡ ಮತ್ತು ನಿಗಧಿತ ಕಪ್ಪಕಾಣಿಕೆಗಳಿಗಾಗಿ ನಡೆಸುತ್ತಿರುವ ಸಭೆಗಳಿಂದಾಗಿ ಪಿ.ಡಿ.ಓ ಗಳು ಬೇಸತ್ತಿದ್ದಾರೆ.
ಪಿ.ಡಿ.ಓ ಗಳು ನೇಮಕಾತಿಯಾದ ಮೇಲೆ ಅಭಿವೃದ್ದಿ ಕುಂಠಿತವಾಗಿದೆ ಎಂದು ಅರೋಪಿಸುವ ಉನ್ನತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರದ ಜೊತೆಗೆ ಹೊಂದಿಕೊಂಡು ಹೋಗದಿದ್ದರೆ ಪಿ ಡಿ ಒ ಬೇಡ ಸರಿಯಿಲ್ಲ. ಎಂದು ತಪ್ಪು ಮಾಡಿಸಿ ಮೇಲಾಧಿಕಾರಿಗಳಿಗೆ ದೂರು ನೀಡಿ ಅಮಾನತು ಮಾಡಿಸುತ್ತಾರೆ .
ಕಮೀಷನ್ ವ್ಯವಹಾರ, ತುಂಡು ಗುತ್ತಿಗೆ ಕಾಮಗಾರಿಗಳನ್ನು ಮತ್ತು ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಕಾನೂನು ಬಾಹಿರವಾಗಿ ಜನಪ್ರತಿನಿಧಿಗಳು ನಿರ್ವಹಿಸುತ್ತಿರುವುದು ಮತ್ತು ಗ್ರಾಮ ಠಾಣಾ ಅಸ್ತಿಗಳ ಖಾತೆ ವಿಚಾರವಾಗಿ ಕಾನೂನಿನಲ್ಲಿರುವ ಗೂಂದಲಗಳು ಭ್ರಷ್ಟಚಾರದ ಮೂಲಗಳಾಗಿದ್ದು, ಈ ವಿಚಾರದಲ್ಲಿ ಯಾರ ಮೇಲು ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಅಸಾಧ್ಯವಾಗಿದೆ. ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳನ್ನು ದೇವರೆ ಕಾಪಾಡಬೇಕಾಗಿದೆ.
0 Comments