ಒಂಟಿಸಲಗ. ಸಾರಿಗೆ ಬಸ್ ನಿರ್ವಾಹಕ ಬರೆದ ಕವಿತೆ.

by | 23/12/23 | ಕಥೆ – ಕವನ

“ಒಂಟಿಸಲಗ. ”
ಅಭಿಮಾನ್ಯು ಪಿತನ ಹತಗೈದವನು
ದಟ್ಟಾರಣ್ಯದಲಿ ಅಡಗಿರಲಿ l
ಮಡುವಿನಲಿ ಮಲಗಿರಲಿ l
ಬೆಂಬಿಡದೆ ಹೆಡೆಮುರಿ ಕಟ್ಟು l
ವಿನು ಸಲಗವ ವಿನಯದಿ ಪಳಗಿಸಿ
ದಶಮಿಯಂದು ಅಂಭಾರಿ ಕಟ್ಟು l
*
ನಾಡದೇವಿ ನಾಡಜನರ ಅಭಯ
ನಿನ್ನ ಮೇಲಿರಲು ಚಿಂತಿಸುವೇಕೆ?
ಅಂಜುವೇಕೆ? ವಿನು ಏಳು ಮೇಲೇಳು
ಅಭಿಮಾನ್ಯು ಜೊತೆಗೂಡಿ ಕದಳಿವನಕ್ಕೆ
ಕರಿ ಹೊಕ್ಕಂತೆ l ಕಾನನಕ್ಕೆ ನುಗ್ಗಿ
ಮಧಗಜವ ಮಧವಡಗಿಸಿ ಎಳೆದು
ತಾ ವಿನು ನಾಡಿಗೆ l
*
ಒಂಟಿಸಲಗನ ಮೇಲೆ ನಾಡದೇವಿಯ
ಕೂರಿಸಿ ಮೆರಸು ವಿಜಯದಶಮಿಯಂದು l
ನಾಡಿಗೆ ಆಗ ಕೂಗಿ ಕೂಗಿ ಹೇಳು
ಅರ್ಜುನನ ಹಂತಕ ಇವನೆಂದು l
*
ಹೇ ಮಧವೇರಿದ ಮಧಗಜನೇ
ಚಾಮುಂಡಿಯ ಸುತ ಅರ್ಜುನನ ಹಂತಕನೇ
ಮಾವುತ ವಿನುಗೆ ಶರಣಾಗಿ l
ನಾಡದೇವಿಯ ಹೊತ್ತು ಪಾವನನಾಗು ಬಾ
ಕಾಡಿಂದ ನಾಡಿಗೆ l
*
ಪಣತೊಡು ವಿನು ಪಣತೊಡು
ಮಧವೇರಿದ ಮಧಗಜವ ಮಧವಡಗಿಸಿ
ಮಹಿಷಿ ಮರ್ದಿನಿಯ ಕೂರಿಸಿ
ಅರ್ಜುನನ ಹತಗೈದವನು ಇವನೆಂದು
ಹೇಳುವ ಪಣತೊಡು ವಿನು l

ಕೆ. ತಿಪ್ಪೇಸ್ವಾಮಿ, ಮಣೆಗಾರ.
K S R T C.
ಚಳ್ಳಕೆರೆ ಘಟಕ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page