“ಒಂಟಿಸಲಗ. ”
ಅಭಿಮಾನ್ಯು ಪಿತನ ಹತಗೈದವನು
ದಟ್ಟಾರಣ್ಯದಲಿ ಅಡಗಿರಲಿ l
ಮಡುವಿನಲಿ ಮಲಗಿರಲಿ l
ಬೆಂಬಿಡದೆ ಹೆಡೆಮುರಿ ಕಟ್ಟು l
ವಿನು ಸಲಗವ ವಿನಯದಿ ಪಳಗಿಸಿ
ದಶಮಿಯಂದು ಅಂಭಾರಿ ಕಟ್ಟು l
*
ನಾಡದೇವಿ ನಾಡಜನರ ಅಭಯ
ನಿನ್ನ ಮೇಲಿರಲು ಚಿಂತಿಸುವೇಕೆ?
ಅಂಜುವೇಕೆ? ವಿನು ಏಳು ಮೇಲೇಳು
ಅಭಿಮಾನ್ಯು ಜೊತೆಗೂಡಿ ಕದಳಿವನಕ್ಕೆ
ಕರಿ ಹೊಕ್ಕಂತೆ l ಕಾನನಕ್ಕೆ ನುಗ್ಗಿ
ಮಧಗಜವ ಮಧವಡಗಿಸಿ ಎಳೆದು
ತಾ ವಿನು ನಾಡಿಗೆ l
*
ಒಂಟಿಸಲಗನ ಮೇಲೆ ನಾಡದೇವಿಯ
ಕೂರಿಸಿ ಮೆರಸು ವಿಜಯದಶಮಿಯಂದು l
ನಾಡಿಗೆ ಆಗ ಕೂಗಿ ಕೂಗಿ ಹೇಳು
ಅರ್ಜುನನ ಹಂತಕ ಇವನೆಂದು l
*
ಹೇ ಮಧವೇರಿದ ಮಧಗಜನೇ
ಚಾಮುಂಡಿಯ ಸುತ ಅರ್ಜುನನ ಹಂತಕನೇ
ಮಾವುತ ವಿನುಗೆ ಶರಣಾಗಿ l
ನಾಡದೇವಿಯ ಹೊತ್ತು ಪಾವನನಾಗು ಬಾ
ಕಾಡಿಂದ ನಾಡಿಗೆ l
*
ಪಣತೊಡು ವಿನು ಪಣತೊಡು
ಮಧವೇರಿದ ಮಧಗಜವ ಮಧವಡಗಿಸಿ
ಮಹಿಷಿ ಮರ್ದಿನಿಯ ಕೂರಿಸಿ
ಅರ್ಜುನನ ಹತಗೈದವನು ಇವನೆಂದು
ಹೇಳುವ ಪಣತೊಡು ವಿನು l
ಕೆ. ತಿಪ್ಪೇಸ್ವಾಮಿ, ಮಣೆಗಾರ.
K S R T C.
ಚಳ್ಳಕೆರೆ ಘಟಕ.
0 Comments