ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಫಲಶೃತಿ.
ಚಳ್ಳಕೆರೆ ಸೆ.7 ಐದು ವರ್ಷಗಳು ಕಳೆದರೂ ನಿಂತಲ್ಲೇ ನಿಂತ ನಿರಂತರಜ್ಯೋತಿ ಯೋಜನೆ ವಂಚಿತ ಓಬಯ್ಯನಟ್ಟಿ ಎಂಬ ತಲೆಬರಹದಡಿಯಲ್ಲಿ ಸೆ.1 ರಂದು ವರದಿ ಬೆಳಕುಚೆಲ್ಲಿದ ಬೆನ್ನಲ್ಲೆ ಬೆಸ್ಕಾಂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ವಿದ್ಯುತ್ ಪರಿವರ್ತಕ್ಕೆ ಹಬ್ಬಿದ ಬಳ್ಳಿ ಗಿಡಗೆಂಟೆಗಳನ್ನು ತೆರವುಗೊಳಿಸಿ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.
ಚಳ್ಳಕೆರೆ ತಾಲೂಕಿನ ತಿಮ್ಮಪ್ಪಯ್ಯನಹಳ್ಳಿ ಗ್ರಾಪಂ ವ್ಯಾಪ್ತಿಯ
ಓಬಯ್ಯನಹಟ್ಟಿ ಸಮೀಪದ ಮ್ಯಾಕಮಲ್ಲಯ್ಯನ ತೋಟದ ಬಳಿರುವ ಸುಮಾರು 25 ಮನೆಯವರು ಸುಮಾರು 5 ವರ್ಷಗಳಿಂದು ನಿರಂತರ ಜ್ಯೋತಿ ವಿದ್ಯತ್ ಸೌಲಭ್ಯದಿಂದ ವಂಚಿತರಾಗಿದ್ದಾರು. ಜನಧ್ವನಿ ಮೀಡಿಯಾ ಐದು ವರ್ಷಗಳಿಂದ ನಿಂತಲ್ಲೇ ನಿಂತಿದ್ದು, ಪ್ರಗತಿ ಕಾಣದೆ ಗ್ರಾಮೀಣ ಜನರು ನಿರಂತರ ಜ್ಯೋತಿಯಿಂದ ವಂಚನೆಯಾಗಿದ್ದಾರೆ.
. ಹೆಸರಿಗಷ್ಟೇ ನಿರಂತರ ಜ್ಯೋತಿ ಐದು ವರ್ಷಗಳಿಂದ ಕರೆಂಟೇ ಇಲ್ಲ!
ನಿರಂತರ ಜ್ಯೋತಿ ಯೋಜನೆಯಡಿ ಕುಡಿಯುವ ನೀರು ಹಾಗೂ ವಸತಿ ಮನೆಗಳಿಗೆ ಗ್ರಾಮೀಣ ಭಾಗದ ಜನವಸತಿ ಪ್ರದೇಶದ ಪ್ರತಿ ಹಳ್ಳಿಗಳಿಗೂ ದಿನದ 24 ತಾಸು ವಿದ್ಯುತ್ ಸರಬರಾಜು ಉದ್ದೇಶವಿರುವ ‘ನಿರಂತರ ಜ್ಯೋತಿ’ ಯೋಜನೆಯಿಂದ ವಿದ್ಯುತ್ ಪರಿವರ್ತಕ .ಕಂಬ. ಲೈನ್ ಎಳೆದು ಸುಮಾರು ಐದು ವರ್ಷಗಳು ಕಳೆದರೂ ವಿದ್ಯುತ್ ಸಂಪರ್ಕ ನೀಡದೆ ಇರುವುದರಿಂದ ನಿರಂತರ ಜ್ಯೋತಿ ಯಿಂದ ವಂಚಿತರಾಗಿದ್ದಾರೆ ಎಂದು ವರದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಬೆಸ್ಕಾಂ ಅಧಿಕಾರಿಗಳು ನಿರಂತರ ಜ್ಯೊತಿ ವಿದ್ಯುತ್ ಸಂಪರ್ಕ ಕಲ್ಲಿಸಿದ್ದಾರೆ ಗ್ರಾಮಸ್ಥರು ಬೆಸ್ಕಾಂ ಇಲಾಖೆ ಹಾಗೂ ಜನಧ್ವನಿ ಮೀಡಿಯಾ ಗೆ ಅಭಿನಂದನೆ ಸಲ್ಲಿಸಿದ್ದಾರೆ. ಗ್ರಾಮಸ್ಥರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments