ಹಿರಿಯೂರು :
ಎರಡನೇ ಮಹಾಯುದ್ಧದಲ್ಲಾದ ಸಾವು-ನೋವುಗಳ ಪರಿಣಾಮವನ್ನು ನೋಡಿದ ನಂತರ ಎಲ್ಲಾ ರಾಷ್ಟ್ರಗಳು ಮಾನವ ಹಕ್ಕುಗಳ ಪರಿರಕ್ಷಣೆಯ ಅಗತ್ಯತೆಯನ್ನು ಮನಗಂಡವು ಎಂಬುದಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷರಾದ ವಿ.ಎಂ.ನಾಗೇಶ್ ಹೇಳಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿಯ ತಾಲ್ಲೂಕು ಘಟಕ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಜಾತಿ, ಧರ್ಮ, ಪ್ರಾಂತಗಳ ಭೇದಭಾವ ಇಲ್ಲದೆ ಎಲ್ಲಾ ನಾಗರೀಕರ ಸಮಾನತೆಯ ಇನ್ನೊಂದು ಮುಖವೇ ಮಾನವ ಹಕ್ಕುಗಳ ಪರಿರಕ್ಷಣೆಯಾಗಿದೆ, ಈ ನಿಟ್ಟಿನಲ್ಲಿ ಪ್ರತಿಯೊಂದು ರಾಷ್ಟ್ರಗಳು ಮಾನವ ಹಕ್ಕುಗಳ ರಕ್ಷಣೆಗೆ ಮುಂದಾಗಿವೆ ಎಂಬುದಾಗಿ ಹೇಳಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷರಾದ ಸಿ.ದೀಪಕ್ ಮಾತನಾಡಿ, ತಾಲ್ಲೂಕು ಘಟಕದ ಚಟುವಟಿಕೆಗಳನ್ನು ಪರಿಗಣನೆಯ ಆಧಾರದ ಮೇಲೆ ತಾಲ್ಲೂಕು ಘಟಕ ರಾಜ್ಯದಲ್ಲಿ ತೃತೀಯ ಸ್ಥಾನಮಾನ ಪಡೆದಿದೆ ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಸ್ಥಾನಮಾನ ಘೋಷಿಸಿದ ರಾಜ್ಯ ಘಟಕದ ಅಧ್ಯಕ್ಷರಾದ ರಘುಕುಮಾರ್ ಹಾಗು ಜಿಲ್ಲಾ ಘಟಕದ ಅಧ್ಯಕ್ಷರಾದ ನಾಗರಾಜ್ ರವರಿಗೆ ಸಭೆಯಲ್ಲಿ ಧನ್ಯವಾದಗಳನ್ನು ತಿಳಿಸಲಾಯಿತು.
ಈ ವೇದಿಕೆಯಲ್ಲಿ ನಗರಸಭೆ ಸದಸ್ಯರಾದ ಶ್ರೀಮತಿ ಮಮತ, ತಾಲೂಕು ಘಟಕದ ಪದಾಧಿಕಾರಿಗಳಾದ ವೇಲುಸ್ವಾಮಿ ನಾಯಿಡು ಹಾಗೂ ಪ್ರಭಾಕರ್ ರೆಡ್ಡಿ ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments