ಚಳ್ಳಕೆರೆ ಜನಧ್ವನಿ ಮಾ.26.ಚಳ್ಳಕೆರೆ :ತಾಲೂಕಿನ ಸೋಮಗುದ್ದು ಗ್ರಾಮಪಂಚಾಯಿತಿ ವ್ಯಾಪ್ತಿಯ ಗಂಜಿಗುಂಟೆ ಗ್ರಾಮದಲ್ಲಿ ನಿವೇಶಕ್ಕಾಗಿ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಪ್ರತಿಭಟನಾ ಸ್ಥಳಕ್ಕೆ ಗ್ರಾಪಂ ಪಿಡಿಒ ಗೌತಮಿ ದೌಢಾಯಿಸಿ ಪ್ರತಿಭಟನಾ ಕರಾರರನ್ನು ಮನವೊಲಿಸಲು ಮುಂದಾದರೂ ವಿಫಲವಾಗಿದ್ದು ಪಿಡಿಒ ಗೌತಮಿಗೆ ಮುತ್ತಿಗೆ ಹಾಕಿ ಗಂಜಿಗುಂಟೆ ಸರ್ಕಾರಿ ಗೋಮಾಳವನ್ನು ಪ್ರಭಾವಿಗಳು ಅಕ್ರಮಿಸಿಕೊಂಡಿರುವುದನ್ನು ತೆರವು ಮಾಡಿಸಿ, ನಿವೇಶನಗಳಿಲ್ಲದ ಬಡಜನರಿಗೆ ಗೋಮಾಳದಲ್ಲಿ ಖಾಲಿ ನಿವೇಶನ ನೀಡಬೇಕೆಂದು ಗ್ರಾಮದ ಮಹಿಳೆಯರು ಗ್ರಾಮದ ರಸ್ತೆಗೆ ಮುಳ್ಳಿನ ಕಳ್ಳೆ ಅಡ್ಡಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪಿಡಿಒ ಗೌತಮಿ ಮಾತನಾಡಿ ಈಗ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ ನಾಯಕಟ್ಟಿ ಜಾತ್ರೆ ಇರುವುದರಿಂದ ಇನ್ನು ಎರಡು ದಿನ ಅಧಿಕಾರಿಗಳುಜಾತ್ರೆ ಚುನಾವಣೆ ಕರ್ತವ್ಯದಲ್ಲಿ ನಿರತರಾಗಿದ್ದು ಅಧಿಕಾರಿಗಳ ಗಮನ ಸೆಳೆದ ನಂತರ ಅವರ ಆದೇಶವನ್ನು ಪಾಲನೆ ಮಾಡಲಾಗುದು ಅಲ್ಲಿಯವರೆಗೆ ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸಿದರೂ ಸಹ ನಮಗೆ ನ್ಯಾಯ ದೊರೆಯುವ ತನಕ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ.
ಗಂಜಿಗುಂಟೆ ಗ್ರಾಮದ ಸರ್ಕಾರಿ ಗೋಮಾಳವನ್ನು ಒಂದೇ ಸಮಾಜದವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಬೇಲಿ ಹಾಕಿಕೊಂಡಿದ್ದಾರೆ, ಉಳಿದ ಸಮಾಜದಲ್ಲಿ ನಿವೇಶಗಳಿಲ್ಲದ ಬಡಜನರು ಇದ್ದಾರೆ, ಇವರು ಎಲ್ಲಿಗೆ ಹೋಗಬೇಕು. ನಿವೇಶನ ಇದ್ದವರೆ ಸರ್ಕಾರಿ ಗೋಮಾಳವನ್ನು ಒತ್ತುವರಿ ಮಾಡಿಕೊಂಡಿದ್ದಾರೆ, ಸ್ಥಳಕ್ಕೆ ತಹಶೀಲ್ದಾರ್ ಭೇಟಿ ಒತ್ತುವರಿ ಮಾಡಿಕೊಂಡಿರುವ ಗೋಮಾಳವನ್ನು ತೆರವು ಮಾಡಿಸಿ, ನಿವೇಶನದ ಇಲ್ಲದ ಬಡಜನರಿಗೆ ಗೋಮಾಳದಲ್ಲಿ ಖಾಲಿ ನಿವೇಶನ ನೀಡಬೇಕು ಎಂದು ಗ್ರಾಮಸ್ಥರಾದ ರಂಗಸ್ವಾಮಿ, ರಮೇಶ್, ಕೆಂಚಮ್ಮ, ಕಮಲಮ್ಮ,ಹರೀಶ್ ಸೇರಿದಂತೆ ಮುಂತಾದವರು ಒತ್ತಾಯ ಮಾಡಿದ್ದಾರೆ.
ಗಂಜಿಗುಂಟೆ ಗ್ರಾಮದ ಪಕ್ಕದಲ್ಲಿ ಸುಮಾರು ಐದು ಎಕರೆ ಸರ್ಕಾರಿ ಗೋಮಾಳವಿದೆ, ಈ ಜಾಗದಲ್ಲಿ 20 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸರ್ಕಾರ ಖಾಲಿನಿವೇಶನದ ಹಕ್ಕು ಪತ್ರ ನೀಡಿತ್ತು, ಅವರು ಮನೆಗಳು ಕಟ್ಟಿಕೊಂಡಿದ್ದಾರೆ, ಅದಕ್ಕೆ ನಮ್ಮದು ಯಾವುದೇ ಅಡ್ಡಿಯಿಲ್ಲದೆ, ಆದರೆ ಗ್ರಾಮದಲ್ಲಿ ಎರಡೆರಡು ಮನೆಯಿದ್ದರು, ಗೋಮಾಳವನ್ನು ಅಕ್ರಮಿಸಿಕೊಂಡರೆ ನಿವೇಶನವಿಲ್ಲದವರು ಎಲ್ಲಿಗೆ ಹೋಗಬೇಕು, ಜಾನುವಾರುಗಳು ಮೇಯಲು, ಮಕ್ಕಳು ಆಟವಾಡಲು ಜಾಗವಿಲ್ಲದಂತೆ ಪ್ರಭಾವಿಗಳು ಸರ್ಕಾರಿ ಗೋಮಾಳದಲ್ಲಿ ಗುಡಿಸಲು, ಕುರಿದೊಡ್ಡಿ, ಮೇವಿನ ಬಣಿವೆಗಳು ಹಾಕಿಕೊಂಡು ಒಬ್ಬರು ಒಂದು-ಒಂದು ಎಕರೆ ಅಕ್ರಮಿಸಿಕೊಂಡಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಸರ್ಕಾರಿ ಜಾಗವಿಲ್ಲದೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ತುಂಬ ತೊಂದರೆಯಾಗುತ್ತದೆ. ಆದ್ದರಿಂದ ಗೋಮಾಳ ಒತ್ತುವರಿ ತೆರವು ಮಾಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.
0 Comments