ಎನ್ ದೇವರಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ನೆರವೇರಿದ ಶ್ರೀ ಕಂಚಿಹೋಬಳಿ ಸ್ವಾಮಿ ಜಾತ್ರೋತ್ಸವ.

by | 02/06/24 | ಸುದ್ದಿ


ನಾಯಕನಹಟ್ಟಿ ::ಜೂನ್ 2. ಎನ್ ದೇವರಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ನೆರವೇರಿದ ಶ್ರೀ ಕಂಚಿ ಹೋಬಳಿ ಸ್ವಾಮಿ ಜಾತ್ರೋತ್ಸವ

ಹೋಬಳಿ ಬುಡಕಟ್ಟು ಸಂಪ್ರದಾಯ ಗ್ರಾಮದ ಆರಾಧ್ಯ ದೈವ ಶ್ರೀ ಕಂಚಿ ಹೋಬಳಿ ಸ್ವಾಮಿ ದೇವರ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಮತ್ತು ಭಾನುವಾರ ಅದ್ದೂರಿಯಾಗಿ ಜರುಗಿತು.


ಶ್ರೀ ಕಂಚಿ ಹೋಬಳಿ ಸ್ವಾಮಿ ಮಹಾಸಂಸ್ಥಾನ ಎನ್ ದೇವರಹಳ್ಳಿ 500 ವರ್ಷಗಳ ಇತಿಹಾಸ ಇರುವಂತ ಈ ಮಹಾ ಸಂಸ್ಥಾನದಲ್ಲಿ ಬುಡಕಟ್ಟು ಸಂಸ್ಕೃತಿಯ ಆಚರಣೆಯ ಶ್ರೀ ಕಂಚಿಹೋಬಳಿ ಸ್ವಾಮಿ ಮೂರು ಗುಡಿಕಟ್ಟಿನ ಅಜ್ಜನ ಅಣ್ಣ-ತಮ್ಮಂದಿರು ಮೊದಲನೇದಾಗಿ ಯಜಮಾನ ವಂಶಸ್ಥರು ದಾಸಯ್ಯನ ವಂಶಸ್ಥರು ಪೂಜಾರಿ ವಂಶಸ್ಥರು ಅವರ ರವರ ಬಿರುದ್ಧಾವಳಿಯ ಬಾಪ್ತುಗಳಂತೆ ಶ್ರೀ ಕಂಚಿ ಹೋಬಳೇಶ್ವರ ಸ್ವಾಮಿ ದೇವರನ್ನು ಆರಾಧನೆ ಮಾಡಿಕೊಂಡು ಬಂದಿದ್ದಾರೆ.
ಕಳೆದ ಸುಮಾರು ವರ್ಷಗಳಿಂದ ಪಾಪಿಮುತ್ತೆ ಹೊಳೆಯಲ್ಲಿ ಶ್ರೀಕಂಚಿಹೋಬಳಿ ಸ್ವಾಮಿ ಗಂಗಾ ಪೂಜೆ ಹೋಮ ಹವನ ಪೂಜೆ ಕೈಂಕಾರ್ಯಗಳನ್ನು ನೆರವೇರಿಸಿ ಅದ್ದೂರಿ ಮೆರವಣಿಗೆ ಮೂಲಕ ಗ್ರಾಮಕ್ಕೆ ಕರೆದೊಯ್ದು ಗುಡಿ ತುಂಬಿಸಲಾಗುತ್ತದೆ.


ಬಹಳಷ್ಟು ಕೋಮಿನ ಅಣ್ಣತಮ್ಮಂದಿರು ಶ್ರೀದೇವರ ಆರಾಧನೆ ಮಾಡುತ್ತಿದ್ದಾರೆ. ಮೊನ್ನೆ ಗುರುವಾರ ಶಾಸ್ತ್ರವಾಗಿ ನಮ್ಮ ಮಹಾಸ್ವಾಮಿಗಳ ಅಪ್ಪಣೆಯಂತೆ ಶ್ರೀ ಪೆನ್ನುಬಳಿ ದೇವಸ್ಥಾನಕ್ಕೆ ಹೋಗಿ ಅಲ್ಲಿ ನೂತನ ಪೂಜಾರಿ ಮತ್ತು ದಾಸಯ್ಯನ ಮುದ್ರಿಕೆ ಮಾಡಿಸುವ ಮುಖಾಂತರ ಇಂದು ಅಧಿಕೃತವಾಗಿ ನೂತನ ಪೂಜಾರಿ ದಾಸಯ್ಯ ಪಟ್ಟಾಭಿಷೇಕವನ್ನು ಮಾಡಲಾಗಿದೆ.

ಶ್ರೀ ಕಂಚಿ ಹೋಳೇಶ್ವರ ಸ್ವಾಮಿಯ ದೇವರಿಗೆ ಸಾಕಷ್ಟು ದಾನಿಗಳು ಮತ್ತು ಗುಡಿಕಟ್ಟಿನ ಅಣ್ಣ-ತಮ್ಮಂದಿರು ದೇವರ ತೂಗು ತೊಟ್ಟಿಲು ಛತ್ರಿ ಗರ್ಭಗುಡಿಗೆ ಕಂಚಿನ ಪದಕ ದಾಸೋಹ ಸೇರಿದಂತೆ ಅನೇಕ ದಾನಿಗಳು ಶ್ರೀ ಸ್ವಾಮಿಗೆ ಭಕ್ತಿಯನ್ನು ಸಮರ್ಪಿಸಿದ್ದಾರೆ ಎಂದು ಕುದಾಪುರ ಎಸ್ ಬಿ ತಿಪ್ಪೇಸ್ವಾಮಿ ದಾವಣಗೆರೆ ಪಬ್ಲಿಕ್ ಬಾಯ್ಸ್ ಪತ್ರಿಕೆಯೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇನ್ನೂ ಭಾನುವಾರ ಬೆಳಿಗ್ಗೆ ಶ್ರೀ ಕಂಚಿ ಹೋಬಳಿ ಸ್ವಾಮಿಗೆ ಅದ್ದೂರಿಯಾಗಿ ಸಂಭ್ರಮ ಸಡಗರದಿಂದ ಪೂಜಾ ಕೈಂಕಾರ್ಯಗಳನ್ನು ನೆರವೇರಿಸಿ ನಂತರ ಮಣೇವು ಕಾರ್ಯ ನಡೆಯಿತು . ದಾಸೋಹದ ನಂತರ ಜಾತ್ರೆಗೆ ತೆರೆ ಬಿತ್ತು

ಇದೇ ಸಂದರ್ಭದಲ್ಲಿ ಶ್ರೀ ಕಂಚಿಹೋಬಳಿ ಸ್ವಾಮಿಯ ಗುಡಿಕಟ್ಟಿನ ಯಜಮಾನ ವಂಶಸ್ಥರು ಪೂಜಾರಿ ವಂಶಸ್ಥರು ದಾಸಯ್ಯನ ವಂಶಸ್ಥರು ಹಾಗೂ ನೆಂಟರು ಸಮಸ್ತ ಎನ್ ದೇವರಹಳ್ಳಿ ಗ್ರಾಮಸ್ಥರು ಇದ್ದರು

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page