ಹಿರಿಯೂರು:
ಉಪ್ಪಾರ ಸಮುದಾಯದ ಪೋಷಕರು ತಮ್ಮ ಮಕ್ಕಳನ್ನು ಹೆಚ್ಚೆಚ್ಚು ವಿದ್ಯಾವಂತರನ್ನಾಗಿಸುವತ್ತ ಗಮನ ಕೊಡಬೇಕು ಎಂಬುದಾಗಿ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಮಸ್ಕಲ್ ಗ್ರಾಮದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಭಗೀರಥ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಉಪ್ಪಾರ ಸಮುದಾಯ ಶ್ರೇಷ್ಠ ಹಿನ್ನಲೆಯಿರುವ ಸಮುದಾಯವಾಗಿದ್ದು ಸಮುದಾಯವು ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಪ್ರಗತಿಯತ್ತ ಸಾಗಬೇಕಿದೆ. ಮುಖ್ಯವಾಗಿ ಪೋಷಕರು ತಮ್ಮ ಮಕ್ಕಳನ್ನು ಆದಷ್ಟು ವಿದ್ಯಾಭ್ಯಾಸ ಮಾಡಿಸುವತ್ತ ದಿಟ್ಟ ಹೆಜ್ಜೆ ಇಡಬೇಕಿದೆ. ಶಿಕ್ಷಣ ಪ್ರಗತಿಯ ಸಂಕೇತವಾಗಿದ್ದು, ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ದಾರಿದೀಪವಾಗಿದೆ.
ಈಗಾಗಲೇ ಹೊಸದುರ್ಗದ ಭಗೀರಥ ಗುರುಪೀಠದಲ್ಲಿ 60 ಅಡಿ ಏಕಶಿಲೆಯ ಭಗೀರಥ ಪ್ರತಿಮೆ ನಿರ್ಮಾಣಕ್ಕೆ ತಯಾರಿ ನಡೆಸಲಾಗಿದೆ. ಮಸ್ಕಲ್ ಗ್ರಾಮಕ್ಕೂ ಪುತ್ತಳಿಗೆ ವಿನಂತಿಸಲಾಗಿದ್ದು ಪುತ್ತಳಿ ಕೊಡಿಸಲಾಗುವುದು.
ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದುವರೆಯುವುದೇ ಜನಾಂಗದ ಅಭಿವೃದ್ಧಿಯಾಗಿದ್ದು, ಯಾರು ಸಹ ಯಾವುದೇ ದ್ವೇಷ,ಅಸೂಯೆಗಳನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದೆ ಪ್ರಗತಿಯತ್ತ ಮುನ್ನೆಡೆಯಿರಿ ಎಂಬುದಾಗಿ ಅವರು ತಿಳಿಸಿದರು. ಭಗೀರಥ ಜಯಂತಿ ಪ್ರಯುಕ್ತ ಗ್ರಾಮದಲ್ಲಿ ಭಗೀರಥರ ಭಾವಚಿತ್ರ ಮೆರವಣಿಗೆ ನಡೆಯಿತು. ಮಹಿಳೆಯರು ಕುಂಭ , ಕಳಸ ಹೊತ್ತು ಸಾಗಿ ಮೆರವಣಿಗೆಗೆ ಕಳೆ ತಂದರು.
ಈ ಸಂದರ್ಭದಲ್ಲಿ ಉಪ್ಪಾರ ಸಂಘದತಾಲ್ಲೂಕು ಅಧ್ಯಕ್ಷ ಆಲೂರು ರಾಮಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಉಪ್ಪಾರ ಸಂಘದ ಉಪಾಧ್ಯಕ್ಷ ವಿ.ಎಲ್. ಗೌಡ, ಗುಣಾರಹಳ್ಳಿ ಶೇಖರಪ್ಪ, ಮೈಲಾರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೊಲ್ಲಮ್ಮ, ಮಂಜುಳಾ ವೀರೇಶ್, ಕಲಾವತಿ, ತಿಪ್ಪೇಸ್ವಾಮಿ, ವೈ. ನಾಗರಾಜ್, ಧನಂಜಯ, ವೀರೇಶ್, ದಯಾಸಾಗರ್, ಕೋಟಿ, ಬಾಲು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments