ಚಿತ್ರದುರ್ಗ ಜನಧ್ವನಿ ವಾರ್ತೆ ಫೆ27.ಚಿತ್ರದುರ್ಗ ಹೊರವಲಯದ ಕ್ಯಾದಿಗೆರೆ ಸಮೀಪ ರಾ.ಹೆ 4ರ ಸರ್ವಿಸ್ ರಸ್ತೆ ಪಕ್ಕದಲ್ಲಿ ಜಿ.ರಘು ಆಚಾರ್
ಅವರು ನೂತನವಾಗಿ ನಿರ್ಮಾಣ ಮಾಡಿರುವ “ಪ್ರಕೃತಿ” ಗೃಹ ಪ್ರವೇಶ 2023ರ ಮಾರ್ಚ್ 10ರಂದು
ನೆರವೇರಲಿದ್ದು ಅದೇ ದಿನದಂದು ಸಾಮೂಹಿಕ ಕಲ್ಯಾಣ ಹಮ್ಮಿಕೊಳ್ಳಲಾಗಿದ್ದು ಉಚಿತ ಸಾಮೂಹಿಕ ಕಾರ್ಕ್ರಕ್ಕೆ ಹೆಚ್ಚಿನಸಂಖ್ಯೆಯಲ್ಲಿ ವಧು ವರರು ನೋಂದಣೆ ಮಾಡಿಕೊಳ್ಳುವಂತೆ ರಘು ಆಚಾರ್ಯ ತಿಳಿಸಿದ್ದಾರೆ
ಬರಗಾಲ, ಅಕಾಲಿಕ ಮಳೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದು, ಕರೋನಾ ಮಹಾಮಾರಿಯಿಂದಾಗಿ ಜನರ
ಜೀವನ ಅಸ್ತವ್ಯಸ್ಥವಾಗಿದೆ. ಅನೇಕ ಜನರು ತಮ್ಮ ಮಕ್ಕಳಿಗೆ ಮದುವೆ ಮಾಡಲು ಹರಸಾಹಸ ಪಡುತ್ತಿದ್ದಾರೆ.
ಇದನ್ನು ಮನಗಂಡು ಜನರ ಸಂಕಷ್ಟಗಳಿಗೆ ಸ್ಪಂಧಿಸುವ ಸಲುವಾಗಿ ರಘು ಆಚಾರ್ ಅವರು ಉಚಿತವಾಗಿ
ಸಾಮೂಹಿಕ ವಿವಾಹ ಏರ್ಪಡಿಸಲು ಮುಂದಾಗಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ
ಪಡಿಸಿಕೊಳ್ಳಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ.
ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಲು ಇಚ್ಚಿಸುವ ವಧು-ವರರಿಗೆ ಭಾರತೀಯ ವಿವಾಹ
ಕಾಯ್ದೆಯ ನಿಯಮದಂತೆ ಹೆಣ್ಣಿನ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು, ಗಂಡು 21 ವರ್ಷ
ಪೂರೈಸಿರಬೇಕು, ವಧು-ವರರು ಆಧಾರ್ ಕಾರ್ಡ್, ವಯಸ್ಸಿನ ಧೃಡೀಕರಣ ಪತ್ರ, ಪಾಸ್ ಪೋರ್ಟ್
ಅಳತೆಯ ಎರಡು ಭಾವಚಿತ್ರ ಹಾಗು ಪೋಷಕರ ಒಪ್ಪಿಗೆ ಪತ್ರದೊಂದಿಗೆ ಮಾರ್ಚ್ 05ರ ಸಂಜೆ
6ಗಂಟೆಯೊಳಗೆ ನೊಂದಣಿ ಮಾಡಿಸಬೇಕು.
ಸಾಮೂಹಿಕ ವಿವಾಹದಲ್ಲಿ ಸಾಂಸಾರಿಕ ಜೀವನಕ್ಕೆ ಕಾಲಿರಿಸುವ ಜೋಡಿಗಳಿಗೆ ಚಿನ್ನದ ಮಾಂಗಲ್ಯ,
ಕಾಲುಂಗುರ, ವಧು-ವರರಿಗೆ ಸೀರೆ, ಶರ್ಟು, ಪಂಚೆ, ಶಲ್ಯ ಹಾಗು ನೂತನ ತಂತ್ರಜ್ಞಾನದ ಮಾರ್ಪಾಡು
ಹೊಂದಿರುವ ಹೊಲಿಗೆ ಯಂತ್ರವನ್ನು ಉಚಿತವಾಗಿ ನೀಡಲಾಗುವುದು.
ನೊಂದಣಿಗಾಗಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: 9036832467/ 9844432644/ 9880121005/
9663887496ಗೆ ಕರೆಮಾಡಬೇಕಾಗಿ ಮನವಿ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments