ಚಳ್ಳಕೆರೆ ಜನಧ್ವನಿ ವಾರ್ತೆ ಜೂ9 ದಲಿತ ಚಳುವಳಿಯ ಧೀಮಂತ ನಾಯಕ ಪ್ರೊಫೆಸರ್ ಬಿ ಕೃಷ್ಣಪ್ಪಜಿಯವರ ನುಡಿ ನಮನ ಕಾರ್ಯಕ್ರಮ….
ಇಂದು ದಲಿತ ಚಳುವಳಿಯ ರೂವಾರಿ, ದಲಿತರ ಧ್ವನಿ, ಈ ನಾಡು ಕಂಡಂತಹ ಶ್ರೇಷ್ಠ ಹೋರಾಟಗಾರ ಪ್ರೊಫೆಸರ್ ಬಿ ಕೃಷ್ಣಪ್ಪ ಜಿ ರವರ ಜಯಂತಿ ಕಾರ್ಯಕ್ರಮದಲ್ಲಿ ಪ್ರೊಫೆಸರ್ ಬಿ, ಕೃಷ್ಣಪ್ಪಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮ ಉದ್ದೇಶಸಿ ಮಾತನಾಡಿದ ಟಿ ವಿಜಯ್ ಕುಮಾರ್ ಈ ನಾಡು ಕಂಡ ಮಹಾ ಹೋರಾಟಗಾರ, ದಲಿತ ಚಳುವಳಿಯ ರೂವಾರಿ ಬಹುಜನರ ಕಣ್ಮಣಿ ಹೋರಾಟದಿಂದ ಇಂದು ನಾವು ಬದುಕುತ್ತಿದ್ದೇವೆ ಇಂಥವರು ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ ಎಂದರು.
ಮತ್ತೊಬ್ಬ ದಲಿತ ಮುಖಂಡ ಚೆನ್ನಿಗ ರಾಮಯ್ಯ ದಲಿತರ ಬದುಕಿಗೆ ದಾರಿ ತೋರಿಸಿಕೊಟ್ಟ ಧೀಮಂತ ನಾಯಕ ಪ್ರೊಫೆಸರ್ ಬಿ ಕೃಷ್ಣಪ್ಪ ಇವರು ಬದುಕಿನದ್ದಕ್ಕೂ ನೊಂದವರ ಧ್ವನಿಯಾಗಿ ಹೋರಾಟ ಮಾಡುತ್ತಲೇ ತಮ್ಮ ಬದುಕನ್ನು ಕಳೆದರು ಇವರು ಈ ನಾಡಿನ ಶಕ್ತಿ ಎಂದು ಹೇಳಿದರು ಈ ಕಾರ್ಯಕ್ರಮದಲ್ಲಿ ಡಿ ತಿಪ್ಪೇಸ್ವಾಮಿ, ಪಿ ಗಂಗಾಧರ, ರುದ್ರಮುನಿ, ಗಿರಿ ಮಲ್ಲಿಗೆ ತಿಪ್ಪೇಸ್ವಾಮಿ, ನನ್ನಿವಾಳ ಮಾಂತೇಶ್, ಜಾಲಿ ಮಂಜು, ಭೀಮಣ್ಣ, ಶ್ರೀನಿವಾಸ್, ನಾಗರಾಜ್, ಆರ್ ವೀರಭದ್ರಿ ಇತರರು ಇದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments