ಹಿರಿಯೂತು. ಕರ್ನಾಟಕ ರಾಜ್ಯ ಕುಂಚಿಟಿಗರ ಒಕ್ಕೂಟದ ವತಿಯಿಂದ ಡಿಸೆಂಬರ್ 24 ನೇ ಭಾನುವಾರ ಬೆಳಿಗ್ಗೆ 4-30,ಕ್ಕೆ ಹಿರಿಯೂರಿನ ಪ್ರವಾಸಿ ಮಂದಿರದಿಂದ ಇಷ್ಟಾರ್ಥ ಸಿದ್ಧಿಗಾಗಿ ಕುಂಚಿಟಿಗರ ಅಷ್ಟದೈವ ಯಾತ್ರೆ ಹೊರಡಲು ಸಕಲ ಸಿದ್ಧತೆ ಮಾಡಲಾಗಿದೆ ಎಂದು ಕುಂಚಿಟಿಗ ಕುಲಶಾಸ್ತ್ರ ಅಧ್ಯಯನಕಾರ ಎಸ್. ವಿ. ರಂಗನಾಥ್ ತಿಳಿಸಿದ್ದಾರೆ.
ಮರಡಿಗುಡ್ಡ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಗಡಿನಾಡು ಕುಂಚಿಟಿಗರ ಭಾವೈಕ್ಯತಾ ಪ್ರವಾಸಕ್ಕೆ ಚಾಲನೆ ಕೊಡಲಾಗುವುದು. ಮಾಗೋಡು ಕಂಬದ ರಂಗನಾಥಸ್ವಾಮಿ,ಮೂಗನಹಳ್ಳಿ ಅಮ್ಮಾಜಿ ಕಾವಲೇಶ್ವರಿ,ಶಿವನಗೆರೆ ಹೊನ್ನೇಶ್ವರಸ್ವಾಮಿ, ವೀರಾಪುರ ಕರಿಯಮ್ಮ,ಏಳುಮಂದೆಮ್ಮ,ಹೊಸಕೆರೆ ವೀರನಾಗಮ್ಮ,ಬೊಮ್ಮಲಿಂಗೇಶ್ವರ,ತಾಡಿ ನಾಗಮ್ಮ,ಕೊಂಡವಾಡಿ ಚೌಡೇಶ್ವರಿ,ವಡ್ಡಗೆರೆ ವೀರನಾಗಮ್ಮ,ಎಲೆರಾಂ ಪುರ ಲಕ್ಷ್ಮೀ ನರಸಿಂಹಸ್ವಾಮಿ ಮತ್ತು ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಕುಂಚಿಟಿಗರ ಜ್ವಲಂತ ಸಮಸ್ಯೆ ಕುರಿತು ಚಿಂತನ-ಮಂಥನ ಸಭೆಯೊಂದಿಗೆ ಒಂದು ದಿನದ ಪ್ರವಾಸ ಮುಕ್ತಾಯ ಮಾಡಲಾಗುವುದು ಎಂದು ತಿಳಿಸಿದರು.
ಈ ಸಭೆಯಲ್ಲಿ ಕ್ಯಾಧಿಗುಂಟೆ ಜಯರಾಮಯ್ಯ ಮಾತನಾಡಿ ಕುಂಚಿಟಿಗರ ಕೇಂದ್ರ OBC,ಪ್ರತ್ಯೇಕ ಅಭಿವೃದ್ಧಿ ನಿಗಮ,ಪ್ರವರ್ಗ 1 ರಲ್ಲಿ ಮೀಸಲಾತಿ,ರೈತಾಪಿ ಮಕ್ಕಳಿಗೆ ಕಂಕಣಭಾಗ್ಯ,ಕಾಲ ಕಾಲಕ್ಕೆ ಮಳೆ ಬೆಳೆ,ಆಯುರಾರೋಗ್ಯ ಅಷ್ಟೈಶ್ವರ್ಯ ಸಂಪತ್ ಸಮೃದ್ಧಿಯನ್ನು 101 ಕುಂಚಿಟಿಗ ಕುಲದೈವಗಳು ನೆರವೇರಸಲಿ ಎಂದು ಪ್ರಾರ್ಥಿಸಿದರು.
ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಕುಂಚಿಟಿಗರ ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿರಮೇಶ್,ಹುಲಿರಂಗನಾಥ್,ಕುಬೇರಪ್ಪ,ಶಶಿಕಲಾ,ಜಯರಾಯ್ಯ, ಗಿರಿಸ್ವಾಮಿ,ಮೈಸೂರು ಶಿವಣ್ಣ,ಅವಿನಾಶ್,ದೇವರಾಜ,ಲಕ್ಷ್ಮಣ್ ಗೌಡ್ರು,ಬಾಬು ಕಾಮಟೆ ಮತ್ತಿತರ ಕುಂಚಿಟಿಗ ಮುಖಂಡರು ಉಪಸ್ಥಿತರಿದ್ಧರು.
![](https://janadhwani.in/wp-content/uploads/2023/12/IMG-20231211-WA0215.jpg)
0 Comments