ಹಿರಿಯೂರು :
ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಜನವರಿ 28 ರಂದು ಇದೇ ತಿಂಗಳು ಚಿತ್ರದುರ್ಗದಲ್ಲಿ ಶೋಷಿತರ ಜಾಗೃತಿಗಾಗಿ ರಾಜ್ಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಜಿಲ್ಲಾ ಸಂಚಾಲಕ ಬಿ.ಟಿ. ಜಗದೀಶ್ ಹೇಳಿದರು.
ನಗರದ ಸಂಗೀತ ಕಂಫರ್ಟ್ಸ್ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಹಲಿಂಗಪ್ಪ, ಕಲ್ಲಟಿ ತಿಪ್ಪೇಸ್ವಾಮಿ, ಕಾಂಗ್ರೆಸ್ ಮುಖಂಡರುಗಳಾದ ಖಾದಿರಮೇಶ್ ಗೀತಾನಾಗಕುಮಾರ್, ಚಂದ್ರಶೇಖರ್, ಅಜ್ಜಪ್ಪ, ಮಲ್ಲೇಣು, ನಾಗರಾಜು, ಅಂಜನಪ್ಪ, ಮುನೀರಮುಲ್, ನಾಗೇಂದ್ರನಾಯ್ಕ, ಕಸವನಹಳ್ಳಿ ರಮೇಶ್, ಡಿವಾಳರ್ ಸಿದ್ದೇಶ್ ಸಭೆಯಲ್ಲಿ ಕುರಿತು ಮಾತನಾಡಿದರು.
ಈ ಸಭೆಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಕಂದಿಕೆರೆಸುರೇಶಬಾಬು, ಎಂ.ಡಿ.ರವಿ, ಮಾಂತೇಶ್, ಜಿ.ಎಲ್.ಮೂರ್ತಿ, ಎಸ್.ಆರ್.ತಿಪ್ಪೇಸ್ವಾಮಿ ಬಿ.ಎನ್.ಪ್ರಕಾಶ್ನ, ಸಾದತ್, ಗೌಡಪ್ಪ, ಕಲ್ಲಹಟ್ಟಿಹರೀಶ್, ಶ್ರೀಮತಿ ಶಿವರಂಜನಿ, ಗೋಡೆತಿಪ್ಪೇಸ್ವಾಮಿ ದಯಾನಂದ್, ಸಿಟಿ ಕೃಷ್ಣಮೂರ್ತಿ, ಮಂಜಪ್ಪ ಮೂರ್ತಿ, ಪ್ರಸನ್ನ, ಪ್ರದೀಪ್, ಸೇರಿದಂತೆ ತಾಲೂಕಿನ ಅನೇಕ ಶೋಷಿತ ಸಮಾಜದ ಪ್ರಮುಖ ಮುಖಂಡರುಗಳು ಭಾಗವಹಿಸಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments