ಚಳ್ಳಕೆರೆ ಜನಧ್ವನಿ ವಾರ್ತೆ ಮಾ10.
ಇತ್ತೀಚಿನ ದಿನಗಳಲ್ಲಿ ಬೇಸಾಯಕ್ಕೆ ನೀರಿನ ಅಭಾವ ಹೆಚ್ಚಾಗುತ್ತಿರುವುದರಿಂದ ರೈತರು ಹನಿ ನೀರಾವರಿ ಪದ್ಧತಿಯ ಕಡೆಗೆ ಮುಖ ಮಾಡುತ್ತಿದ್ದಾರೆ ಎಂದು ಟಿ.ಜೆ.ಸತ್ಯನಾರಾಯಣ ಹೇಳಿದ್ದಾರೆ.
ಮಳೆಯ ಕೊರತೆಯಿಂದ ಇತ್ತೀಚಿನ ದಿನಗಳಲ್ಲಿ ಬೇಸಾಯ ಮಾಡಲು ನೀರಿನ ಅಭಾವ ಹೆಚ್ಚಾಗುತ್ತಿದೆ. ಹನಿ ನೀರಾವರಿ ಬೇಸಾಯ ಪದ್ಧತಿಗೆ ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ಇರುವುದರಿಂದ ರೈತರು ಸದ್ಬಳಕೆ ಮಾಡಿಕೊಂಡು ಹನಿ ನೀರಾವರಿಯ ಮೂಲಕ ಬೇಸಾಯ ಮಾಡಿ ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು. ತೋಟಗಾರಿಕೆ ಇಲಾಖೆಯಿಂದ ಸಾಕಷ್ಟು ಯೋಜನೆಗಳು, ಸೌಲಭ್ಯಗಳಿವೆ, ಎಸ್ಸಿ,ಎಸ್ಟಿ ಶೇ 90 , ಸಾಮನ್ಯರಿಗೆ ಶೇ 75 ರಷ್ಟು ರೈತರಿಗೆ ಸಬ್ಸಿಡಿಯಲ್ಲಿ ಯೋಜನೆಗಳು ದೊರೆಯಲಿದ್ದು ರೈತರು ಕಾಲಮಿತಿಯೊಳಗೆ ಎಲ್ಲಾ ಯೋಜನೆಗಳನ್ನು ಪಡೆದುಕೊಂಡು ಕಷಿಕ್ಷೇತ್ರದಲ್ಲಿ ಆರ್ಥಿಕವಾಗಿ ಅಭಿವದ್ಧಿ ಹೊಂದಬೇಕು ಎಂದು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈಗಾಗಲೆ ರೈತರು ಕಡಿಮೆ ನೀರಿನಲ್ಲಿ ಹನಿ ನೀರಾವರಿ ಪದ್ದತಿಯನ್ನು ಅಳವಡಿಸಿಕೊಂಡು ಹೆಚ್ಚು ಇಳುವರಿಗೆ ಪಡೆದು ಆರ್ಥಿಕವಾಗಿ ಸದೃಡರಾಗಿದ್ದಾರೆ.
ರೈತರಿಗೆ ಸಂತಸದ ಸುದ್ದಿ ನಿಮ್ ಹಳೆಯ ಲ್ಯಾಟೆರಲ್ ನ್ನು ಒಂದು ಕೇಜಿಗೆ 50 ರೂಗಳಂತೆ ತೆಗೆದುಕೊಳ್ಳಲಾಗುವುದು.
0 Comments