ಚಳ್ಳಕೆರೆ ಏ.22
ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸಿದ ಮೋದಿಜೀ ದೇಶದ ಕಟ್ಟ ಕಡೆಯ ವ್ಯಕ್ತಿಗೆ ಅಥವಾ ಕುಟುಂಬಕ್ಕೆ ನೂರಾರು ಯೋಜನೆಗಳನ್ನು ನೇರವಾಗಿ ತಲುಪುವಂತೆ ಮಾಡಿದ ಕಾರ್ಯಕ್ರಮಗಳು ಜನರಿಗೆ ತಿಳಿದಿದ್ದು, ಇಂದಿನ ಈಚುನಾವಣೆಯಲ್ಲಿ ಜನರನಾಡಿಮಿಡಿತ ಮೋದಿಯೇ ಹೊರತು ಕಾಂಗ್ರೆಸ್ ನ ಗ್ಯಾರಂಟಿಗಳಲ್ಲ ಎಂಬುದಾಗಿ ಬಿಜೆಪಿ ಮುಖಂಡ ಕೆಮಟಿ.ಕುಮಾರಸ್ವಾಮಿಹೇಳಿದರು.
ತಾಲೂಕಿನ ಜಾಜೂರು ಜಿಲ್ಲಾಪಂಚಾಯ್ತಿ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರ ಪರವಾಗಿ ಮತಯಾಚನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿ ಚುನಾವಣೆಯು ಒಂದೊಂದು ವಿಷಯದ ಮಾನದಂಡದ ಮೇಲೆ ನಡೆಯುತ್ತಿದ್ದು, ಸ್ಥಳೀಯ ಸಂಸ್ಥೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ವಿಧಾನಸಭೆಗಳ ಚುನಾವಣೆ ಜಾತಿ, ಸ್ಥಳೀಯ ಸಮಸ್ಯೆ, ಚುನಾಯಿತ ಪ್ರತಿನಿಧಿಗಳ ನಡವಳಿಕೆಗಳ ಮೇಲೆ ಮತದಾರ ನಿರ್ಣಯಿಸುತ್ತಾನೆ,
ಆದರೆ ರಾಷ್ಟ್ರದ ವಿಷಯ ಬಂದಾಗ ಮತದಾರ ಎಲ್ಲಾ ಅಂಶಗಳನ್ನು ಬದಿಗಿಟ್ಟು ರಾಷ್ಟ್ರದ ಸಾರ್ವಭೌಮತ್ವ, ಆಂತರಿಕ ಭದ್ರತೆ ಮತ್ತು ಸರ್ವರನ್ನು ಸಮಾನ ರೀತಿಯಲ್ಲಿ ಕಾಣುವ ಪಕ್ಷದ ಪ್ರಧಾನಿಯನ್ನು ಬಯಸಿಯೇ ಈ ಬಾರಿ ಮತ್ತೊಮ್ಮೆ ಮೋದಿಜೀ ಪ್ರಧಾನಿ ಆಗಲೆಂದು ಜನರು ಬಿಜೆಪಿಗೆ ಮತ ನೀಡಲಿದ್ದಾರೆ ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡ ಎಂ.ರವೀಶ್ ಮಾತನಾಡಿ, ಬಿಜೆಪಿ ಚುನಾವಣಾ ಪ್ರಚಾರದ ಮುಖ್ಯಭಾಗವಾಗಿ ಪ್ರತಿಗ್ರಾಮ ವಾರ್ಡ್ಗಳ ಎಲ್ಲಾ ಮನೆಗಳ ಪ್ರತಿ ಕುಟುಂಬಗಳಿಗೂ ಮೋದಿಜೀ ಅವರ ಜನಪರ ಯೋಜನೆಗಳನ್ನು ವಿವರಿಸಿ ಹೇಳುವ ಮೂಲಕ ಮತಯಾಚನೆ ಮಾಡಬೇಕು ಎಂದರಲ್ಲದೆ,
ಉಜ್ವಲ ಯೋಜನೆಯ ಉಚಿತ ಸಿಲಿಂಡರ್, ಭೇಟಿ ಬಚಾವೋ, ಭೇಟಿ ಪಡಾವೋಯಲ್ಲಿ ಹೆಣ್ಣು ಮಕ್ಕಳಿಗೆ ಅವರ ಹೆಸರಿನಲ್ಲಿ ಠೇವಣಿ, ಬೀದಿಬದಿ ವ್ಯಾಪಾರಿಗಳಿಗೆ ಜಾಮೀನು ರಹಿತ ಸಾಲ, ಆಯುಷ್ಮಾನ್ ಭಾರತ್ ಉಚಿತ ಆರೋಗ್ಯ ತಪಾಸಣೆ, ಜನೌಷಧಿ ಕೇಂದ್ರಗಳ ಮೂಲಕ ಕೈಗೆಟುಕುವ ದರದಲ್ಲಿ ಔಷಧಿಗಳ ಪೂರೈಕೆ ಇತ್ಯಾದಿಗಳನ್ನು ಜನಸಾಮಾನ್ಯರೇ ನಮ್ಮ ಕಾರ್ಯಕರ್ತರುಗಳಿಗೆ ವಿವರಿಸಿ ಹೇಳಿ ಮೋದಿಜಿಗೆ ನಮ್ಮ ಮತ ಎನ್ನುವರು ಎಂಬುದಾಗಿ ಹೇಳಿದರು. ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್. ಅನಿಲ್ ಕುಮಾರ್. ಜೆ.ಡಿ.ಎಸ್.ಅಧ್ಯಕ್ಷ ಪಿ.ಟಿ.ತಿಪ್ಪೇಸ್ವಾಮಿ . ಅಭ್ಯರ್ಥಿ ಗೋವಿಂದ ಕಾರ್ಜೋಳ ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಇದ್ದರು.ಚಿತ್ರದುರ್ಗ ಲೋಕಸಭಾ ಚುನಾವಣೆ ಅಂಗವಾಗಿ ಇಂದು ಜಾಜೂರು ಗ್ರಾಮದಲ್ಲಿ ಸಾರ್ವಜನಿಕರ ಬಹಿರಂಗ ಸಭೆಯಲ್ಲಿ ಅಭ್ಯರ್ಥಿ ಗೋವಿಂದಕಾರಜೋಳ ಇವರಿಗೆ ಹೂವಿನ ಮಳೆಸುರಿದು ಅದ್ದೂರಿಯಾಗಿ ಬರಮಾಡಿಕೊಂಡರು ಸಭೆಯಲ್ಲಿ ನಿರೀಕ್ಷೆಗೂ ಹೆಚ್ಚು ಜನರು ಸೇರಿದ್ದರು. ರಾಮದಾಸ್,
ಬಸವರಾಜ್ ಮಂಡಿಮಠ್,ಜಯಪಾಲಯ್ಯ, ವೆಂಕಟೇಶ್ ಯಾದವ್, ಶಿವಪುತ್ರಪ್ಪ, ಹಾಗೂಬಿಜೆಪಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಜಿಲ್ಲಾ ಮತ್ತು ಮಂಡಲದ ಪಧಾದಿಕಾರಿಗಳು ಮುಖಂಡರುಗಳು ಇತರರಿದ್ದರು.
0 Comments