ಪರಶುರಾಮಪುರ
ಇಂದಿನ ಅಧುನಿಕ ಕಾಲಘಟ್ಟದಲ್ಲೂ ಸಹ ಶ್ರೀ ರಾಮಾನುಜಾಚಾರ್ಯರ ತತ್ವಾದರ್ಶಗಳು ತೀರಾ ಪ್ರಸ್ತುತವಾಗಿದೆ ಎಂದು ಮೇಲುಕೋಟೆಯ ಯದುಗಿರಿ ಮಠದ (ಮಲ್ಲೇಶ್ವರಂ ಬೆಂಗಳೂರು)41 ನೇ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಯದುಗಿರಿ ಯತಿರಾಜ ರಾಮಾನುಜ ನಾರಾಯಣ ಜೀಯರ್ ಸ್ವಾಮಿಗಳ ಅಭಿಪ್ರಾಯಪಟ್ಟರು
ಗ್ರಾಮದ ಪಾವಗಡ ರಸ್ತೆಯ ಲಕ್ಷ್ಮಿಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಶ್ರೀ ವೈಷ್ಣವ ಮಹಾಸಭಾ (ರಿ) ಬೆಂಗಳೂರು ಹಾಗೂ ಭಗವದ್ ಶ್ರೀ ರಾಮಾನುಜಾಚಾರ್ಯರ ಜಯಂತ್ಯುತ್ಸವ ಸಮಿತಿ (ರಿ) ಪರಶುರಾಮಪುರ ಹಾಗೂ ಆಂಧ್ರ ಮತ್ತು ಕರ್ನಾಟಕ ರಾಜ್ಯಗಳ ಶ್ರೀ ವೈಷ್ಣವ ಸಮುದಾಯದ ವತಿಯಿಂದ ಗ್ರಾಮದಲ್ಲಿ ಭಗವದ್ ಶ್ರೀ ರಾಮಾನುಜಾಚಾರ್ಯರ 1007 ನೇ ಜಯಂತ್ಯುತ್ಸವದ ಸಂಭ್ರಮಾಚರಣೆ ಪ್ರಯುಕ್ತ ಪಿಆರ್ಪುರದಲ್ಲಿ 35 ನೇ ಶ್ರೀ ರಾಮಾನುಜಾಚಾರ್ಯರ ಜಯಂತ್ಯುತ್ಸವದ ಅಂಗವಾಗಿ ಗುರುವಾರ ಆಯೋಜಿಸಿದ್ದ ಉಪನಯನದ ವಟುಗಳಿಗೆ ಶ್ರೀ ಗಳಿಂದ ಸಮಾಶ್ರಯಣ, ಮುದ್ರಾಧಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು
ಲೋಕ ಕಲ್ಯಾಣಾರ್ಥವಾಗಿ ಮಹಾಸುದರ್ಶನ ಹೋಮ ಹಾಗೂ ಪೂರ್ಣಾಹುತಿ ಕಾರ್ಯಕ್ರಮ ಆಯೋಜಿಸಲಾಗಿತ್ತು ಉಪನಯನ ಕಾರ್ಯಕ್ರಮದ ಪೌರೋಹಿತ್ಯ ನೇತೃತ್ವವನ್ನು ಉಭಯ ವೇದಾಂತ ವಿದ್ವಾನ್ ಮಧುಸೂಧನ್ ಭಟ್ಟರು ಕತ್ರಿಗುಪ್ಪೆ, ಬೆಂಗಳೂರು, ಯಲಹಂಕದ ರಾಮು ರಾಮಾನುಜಜಂ ತುಮಕೂರಿನ ಶ್ರೀನಿವಾಸರಾಜ್ ತುಳಸೀ ಆಚಾರ್ಯರು ತಾವರೇಕೆರೆಯ ಹರಿಪ್ರಸಾದ್ ದಾವಣಗೆರೆಯ ಸುನಿಲ್ ಆಚಾರ್ಯ ನಡೆಸಿಕೊಟ್ಟರು
ಗುರುವಾರ ಬೆಳಗ್ಗೆ ಗ್ರಾಮದ ಲಕ್ಷ್ಮಿಚನ್ನಕೇಶವಸ್ವಾಮಿ ರಾಮಾನುಜಾಚಾರ್ಯರಿಗೆ ಪಂಚಾಮೃತಾಭಿಷೇಕ ಹಾಗೂ ಹೂವಿನ ಅಲಂಕಾರ ಸೇವೆ ಸಲ್ಲಿಸಿದರು
ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿದ ಶ್ರೀ ವೈಷ್ಣವ ಸಮಾಜದವರು; ಗುರುವಾರ ಬೆಳಗ್ಗೆ ಬೆಂಗಳೂರಿನಿಂದ ಗ್ರಾಮಕ್ಕೆ ಆಗಮಿಸಿದ ಶ್ರೀ ಶ್ರೀ ಯದುಗಿರಿ ಯತಿರಾಜ ರಾಮಾನುಜ ನಾರಾಯಣ ಜೀಯರ್ ಸ್ವಾಮಿಗಳನ್ನು ಶ್ರೀ ವೈಷ್ಣವ ಸಮುದಾಯದವರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು ಆಂಧ್ರ ಕರ್ನಾಟಕ ರಾಜ್ಯಗಳ ಸಹಸ್ರಾರು ಭಕ್ತರು ಆಗಮಿಸಿದ್ದರು
ಸಂದರ್ಭದಲ್ಲಿನ ಅಖಿಲ ಕರ್ನಾಟಕ ಶ್ರೀ ವೈಷ್ಣವ ಮಹಾಸಭಾದ ಅಧ್ಯಕ್ಷ ರವಿ ನರಸಿಂಹನ್ ಕಾರ್ಯದರ್ಶಿ ಸುಗಂಧರಾಜು, ಸಾಲುಕಟ್ಟೆ ಶ್ರೀನಿವಾಸ, ಎಸ್ ಅನಂತ್, ಕೆ ಎಸ್ ಶ್ರೀನಿವಾಸ ಹೊಸದುರ್ಗ, ದಾವಣಗೆರೆಯ ವರದರಾಜು, ಚನ್ನಗಿರಿಯ ನರಸಿಂಹಮೂರ್ತಿ, ಶಿವಮೊಗ್ಗದ ಎಸ್ ಆರ್ ಗಿರೀಶ, ಗೌರವಾಧ್ಯಕ್ಷ ಟಿ ಎಲ್ ವೆಂಕಟರಾಜು, ಆಡಳಿತ ಮಂಡಳಿಯ ಅಧ್ಕಕ್ಷ ಎಸ್ ಎಚ್ ಸತ್ಯನಾರಾಯಣಮೂರ್ತಿ, ಕೆ ಬಿ ರಾಮಕೃಷ್ಣ, ಎಸ್ ಹನುಮಂತರಾಯ, ಪ್ರಭಾಕರ, ಗೋಪಾಲ, ಪಿ ಎಸ್ ಸುರೇಶ, ಪಿ ಎಸ್ ನಾಗರಾಜು, ದಿವಾಕರಮೂರ್ತಿ, ಎಸ್ ಶ್ರೀನಿವಾಸ, ಎಸ್ ಆದಿತ್ಯ, ರಂಗನಾಥ, ಗಾಯತ್ರಮ್ಮ, ಗೌರಮ್ಮ, ಅಶೋಕ ಮತ್ತಿತರರು ಭಾಗವಹಿಸುವರು ಎಂದು ಆಡಳಿತ ಮಂಡಳಿಯ ಅಧ್ಕ÷್ಷ ಎಸ್ ಎಚ್ ಸತ್ಯನಾರಾಯಣಮೂರ್ತಿ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಶ್ರೀ ವೈಷ್ಣವ ಸಮುದಾಯದವರು ಪಾಲ್ಗೊಂಡಿದ್ದರು
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments