ಚಳ್ಳಕರ ಮಾ.22.ಚಳಕರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ
ವೇದಾವತಿ ನದಿಯ ಮೂಲಕ 0.25 ಟಿ.ಎಂ.ಸಿ ನೀರನ್ನು
ಮಾ.22 ಇಂದಿನಿಂದ ಹರಿಸಲಾಗಿದ್ದು ಮೂರಾಲ್ಕು ದಿನಗಳಲ್ಲಿ
ಚಳ್ಳಕೆರೆ ಗಡಿ ಭಾಗಕ್ಕೆ ತಲುಪುವ ಸಾಧ್ಯತೆ ಇದೆ ಆಧದರಿಂದ ಗಡಿ ಭಾಗದ ಜನ-
ಜಾನುವಾರುಗಳನ್ನು ನದಿಗೆ ಇಳಿಸದಂತೆ ನದಿ ಪಾತ್ರದ
ಜನರಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ವಾಣಿವಿಲಾಸ ಸಾಗರದಿಂದ ಚಳ್ಳಕೆರೆ ವಿಧಾನಸಭಾ
ಕ್ಷೇತ್ರಕ್ಕೆ 70 ಕಿ.ಮೀ ದೂರವಿದ್ದು ಅದರಲ್ಲಿ ಹಿರಿಯೂರು
ತಾಲೂಕಿನ 35 ಕಿ.ಮೀ. ಇದ್ದು ಚಳ್ಳಕೆರೆ ಕ್ಷೇತ್ರದ ಗಡಿ
ಪ್ರಾರಂಭದಿಂದ0. 25 ಟಿ.ಎಂ.ಸಿ. ನೀರನ್ನು ನದಿ ಮೂಲಕ
ಚಳಕರ ವಿಧಾನಸಭಾ ಕ್ಷೇತ್ರದ ವೇದಾವತಿ ನದಿ ಪಾತ್ರದ
ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆ
ಮಾಡುವ ಸಂಬಂಧ ವಾಣಿ ವಿಲಾಸ ಸಾಗರ
ಜಲಾಶಯದಿಂದ ಹರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವೇದಾವತಿ ನದಿ ಪಾತ್ರದ 50ಕ್ಕೂ ಹೆಚ್ಚು ಹಳ್ಳಿಗಳ
ಜನರ ಹಾಗೂ ಜಾನುವಾರುಗಳ ಶಾಶ್ವತ ಕುಡಿಯುವ
ನೀರಿನ ಸಮಸ್ಯೆ ಪರಿಹಾರಕ್ಕಾಗಿ ಭದ್ರಾ ಮೇಲ್ದಂಡೆ
ಯೋಜನೆ ಯಲ್ಲಿ ವಿವಿ ಸಾಗರಕ್ಕೆ ಹರಿಸುವ ಎರಡು
ಟಿ.ಎಂ.ಸಿ. ನೀರಿನಲ್ಲಿ ವೇದಾವತಿ ನದಿಗೂ 0.25
ಟಿ.ಎಂ.ಸಿ. ನೀರು ಶಾಶ್ವತಕುಡಿ ಯುವ ನೀರಿಗಾಗಿ ವೇದಾವತಿ ನದಿಗೆ ನೀರು ವಾಣಿವಿಲಾಸ ಸಾಗರ ಜಲಾಶದಿಂ
ನೀರನ್ನು ಮಾ.22 ರಂದು ಬಿಡಲಾಗುತ್ತಿದೆ.ಜಲಾಶಯದಲ್ಲಿ ಪ್ರಸ್ತುತ 18.92 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ.
ಮಾರ್ಚ್ 16 ರಂದು ಬೆಂಗಳೂರಿನಲ್ಲಿ ಪ್ರಾದೇಶಿಕ ಆಯುಕ್ತರು ಹಾಗೂ
ಕುಡಿಯುವ ನೀರಿನ ಸಲಹಾ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ
ಸಭೆಯಲ್ಲಿ ಚಳ್ಳಕೆರೆ ತಾಲ್ಲೂಕಿನ ವೇದಾವತಿ ನದಿಪಾತ್ರದ ಹಳ್ಳಿಗಳಿಗೆ 0.25
ಟಿಎಂಸಿ ಅಡಿ ನೀರು ಹರಿಸಲು ಅನುಮೋದನೆ ನೀಡಲಾಗಿದೆ’ ಎಂದು
ನಿಗಮದ ಪ್ರಕಟಣೆಯಲ್ಲಿ
ಹಿರಿಯೂರು ತಾಲೂಕಿನ ಕಾರ್ತಿಕೇನಹಳ್ಳಿ, ಅಣೆಕಟ್ಟು
ಮುಖಾಂತರ, ವೇದಾವತಿ ನದಿ ಪಾತ್ರದ ಸೇರಲಿದೆ.
ಲಕ್ಕವ್ವನಹಳ್ಳಿ, ಕುಡಿಯುವ ನೀರಿನ ಬ್ಯಾರೇಜ್
ಕಸವನಹಳ್ಳಿ ಬ್ಯಾರೇಜ್, ಹಳೆ ಯಳನಾಡು ಬ್ಯಾರೇಜ್,
ಕೂಡ್ಲಹಳ್ಳಿ ಬ್ಯಾರೇಜ್, ಓಬೇನಹಳ್ಳಿ ಬ್ಯಾರೇ
ಜ್ಗಳಲ್ಲಿಯ ಸ್ಟೋರಿಂಗ್ ಸ್ಟೋಯಿಸ್ ಗೇಟ್ಗಳನ್ನು
ತೆಗೆದಿರಿಸಿ ನೀರು ಸರಾಗವಾಗಿ ಹರಿದು ಸಿದ್ದಯ್ಯನಕೋಟೆ
ಡ್ಯಾಂ ಮೂಲಕ ಚಳ್ಳಕೆರೆ ಕ್ಷೇತ್ರಕ್ಕೆ ನೀರು ತಲುಪುತ್ತವೆ.
ಚಳ್ಳಕೆರೆ ಕ್ಷೇತ್ರದ ಬೊಂಬೇರಹಳ್ಳಿ, ಚೌಳೂರು,
ಪರಶುರಾಂಪುರ ಗ್ರಾಮಗಳಲ್ಲಿ ನಿರ್ಮಿಸಿ ರುವ
ಬ್ಯಾರೇಜ್ಗಳಿಗೆ ನೀರು ಸರಾಗವಾಗಿ ಹರಿದು ವೇದಾವತಿ
ನದಿಯ ದಂಡೆಯಲ್ಲಿರುವ ಹಳ್ಳಿಗಳಿಗೆ ಜನ
ಜಾನುವಾರುಗಳಿಗೆ ಶಾಶ್ವತ ಕುಡಿಯುವ ನೀರಿನ ಸಮಸ್ಯೆ
ನಿವಾರಣೆಯಾಗುವ ಜತೆಗೆ ಅಂತರ್ಜಲ ಮಟ್ಟ
ಸುಧಾರಣೆಯಾಗಿ ರೈತರ ಕೃಷಿ ಚಟುವಟಿಕೆಗೆ ಸಹ
ಕಾರಿಯಾಗಲಿದೆ ಎಂದು ನದಿ ಪಾತ್ರದ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments