ತುಮಕೂರು:
ಪುಣೆಯ ಎನ್.ಐ.ಸಿ.ಎಂ.ಎ.ಆರ್ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕನ್ಸ್ಟ್ರಕ್ಷನ್ ಮ್ಯಾನೇಜ್ಮೆಂಟ್ ಅಂಡ್ ರಿಸರ್ಚ್) ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್ 6 ರಂದು ನಡೆದ ಘಟಿಕೋತ್ಸವದಲ್ಲಿ ತುಮಕೂರಿನ ವಿದ್ಯಾರ್ಥಿನಿ ಕುಮಾರಿ ವೈ.ಆರ್.ಶ್ವೇತಾರವರು ಪ್ರಾಜೆಕ್ಟ್ ಎಂಜಿನಿಯರಿಂಗ್ ಮತ್ತು ನಿರ್ವಹಣೆಯ ಸ್ನಾತಕೋತ್ತರ ವಿಭಾಗದಲ್ಲಿ ಆಲ್ ಇಂಡಿಯಾ ಟಾಪರ್ ಆಗಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ವೈ.ಆರ್.ಶ್ವೇತಾರವರು ನಗರದ ಹನುಮಂತಪುರದ ಡಯಟ್ನ ಹಿರಿಯ ಉಪನ್ಯಾಸಕ ವೈ.ಎನ್.ರಾಮಕೃಷ್ಣಯ್ಯ ಹಾಗೂ ನಿರ್ಮಲರವರ ಸುಪುತ್ರಿಯಾಗಿದ್ದಾರೆ.
ಪದಕ ಮತ್ತು ಪದವಿ ಪ್ರಮಾಣಪತ್ರವನ್ನು ಎನ್.ಐ.ಸಿ.ಎಂ.ಎ.ಆರ್ ಅಧ್ಯಕ್ಷ ಮತ್ತು ಹಿಂದೂಸ್ಥಾನ್ ನಿರ್ಮಾಣ ಮಂಡಳಿಯ ಅಧ್ಯಕ್ಷ ಅಜಿತ್ ಗುಲಾಬ್ ಚಂದ್ ಅವರು ನೀಡಿ ಗೌರವಿಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments