ಚಳ್ಳಕೆರೆ ಅ.1. ಯಾರೂ ರದ್ತೆ ಚರಂಡಿ ಹಾಗೂ ಸಾರ್ವಜನಿಕ ಸ್ಥಳದಲ್ಲಿ ತಾಜ್ಯವನ್ನು ಹಾಕದಿದ್ದರೆ ಸ್ವಚ್ಚ ಪರಿಸರವನ್ನು ಹೊಂದಲು ಸಮುದಾಯದ ಪಾಲುದಾರಿಕೆ ಅತಿಮುಖ್ಯವಾಗಿದೆ ಎಂದು ಪಿಡಿಒ ಪಾಲಯ್ಯ ಹೇಳಿದರು.
![](https://janadhwani.in/wp-content/uploads/2023/10/IMG-20231001-WA0206.jpg)
ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಗ್ರಾಮಪಂಚಾಯಿತಿ.ಅಂಗನವಾಡಿ.ಆಶಾಕಾರ್ಯಕರ್ತೆಯರ ಸಹಯೋಗದಲ್ಲಿ ಆಯೋಜಿಸಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಸತನಾಡಿದರು. ಕೇವಲ ಗ್ರಾಮಪಂಚಾಯಿತಿ ಮಾಡಲಿ ಎಂಬ ಮನೋಭಾವನೆಯನ್ನು ಬಿಟ್ಟು ನಿಮ್ಮ ಮನೆಯಲ್ಲಿನ ಕದವನ್ನು ತಂದು ರಸ್ತೆ ಹಾಗೂ ಚರಂಡಿಯಲ್ಲಿ ಹಸಕುವುದರಿಂದ ಚರಂಡಿ ನೀರು ಸರಾಗವಾಗಿ ಹರಿಯದೆ ಸೊಳ್ಳೆಗಳ ಹಾವಳಿಯಿಂದ ಸಾಂಕ್ರಮಿಕ ರೋಗಗಳಿಗೆ ತುತ್ತಾಗ ಬೇಕಿದೆ.
ನಿಮ್ಮ ಮನಗಳ ಸುತ್ತ ಮುತ್ತ ಕಸವನ್ನು ಹಾಕದೆ ಉತ್ತಮ ಪರಿಸರ ಕಾಪಾಡಿದರೆ ರೋಗಗಳಿಗೆ ತುತ್ತಾಗುವ ಸಾಧ್ಯತೆ ಕಡಿಮೆಯಾಗಲಿದೆ. ಮಹಾತ್ಮ ಗಾಂಧೀಜಿಯವರ ಕನದಿನ ಕೂಸಾದ ಸ್ವಚ್ಚ ಭಾರತ ವಾಗಿದ್ದರಿಂದ ಅ.2. ಗಾಂಧಿಜಯಂತಿ ಹಂಗವಾಗಿ ಸ್ವಚ್ಛತೆಯೇ ಸೇವೆ ತಾಜ್ಯ ಮುಕ್ತಭಾರತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಶ್ರಮದಾನವನ್ನು ಹಮ್ಮಿಕೊಂಡು ರಸ್ತೆ
ಚರಂಡಿಗಳನ್ನು ಸ್ವಚ್ವತೆ ಮಾಡಲಾಗುತ್ತಿದೆ.
ಗ್ರಾಮಗಳು ಮತ್ತು ಹಟ್ಟಿಗಳ ಆರೋಗ್ಯ ಸಂಪತ್ತನ್ನು ಹೊಂದಬೇಕಾದರೆ ಸ್ವಚ್ಛತೆ ಮತ್ತು ಮನೆಗಳ ವೈಯಕ್ತಿಕ ಸ್ವಚ್ಛತೆಗೆ ಜನರು ಆಧ್ಯತೆ ನೀಡಬೇಕು. ಇದರಿಂದ ಗ್ರಾಮವು ಆರೋಗ್ಯ ಸಂಪತ್ತನ್ನು ಹೊಂದಿ ಆಥಿರ್ಕವಾಗಿ ಪ್ರಗತಿಯಲ್ಲಿ ಮುಂದುವರೆಯುತ್ತದೆ. ಆರೋಗ್ಯ ಇಲಾಖೆಯು ನೀಡುವಂತಹ ಇಂತಹ ಜಾಗೃತಿ ಕಾರ್ಯಕ್ರಮಗಳಿಂದ ಗ್ರಾಮಗಳು ಸದುಪಯೋಗ ಪಡೆದುಕೊಳ್ಳ ಬೇಕು ಎಂದು ತಿಳಿದಿದರು. ಸ್ವಚ್ಚತಾ ಶ್ರಮದಾನ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ. ಉಪಾಧ್ಯರು.ಸದಸ್ಯರು.ಅಂಗನವಾಡಿ.ಆಶಾ ಕಾರ್ಯಕರ್ತರು ಹಾಗೂ ಗ್ರಾಪಂ ಸಿಬ್ಬಂದಿ ಭಾಗವಹಿಸಿದ್ದರು.
![](https://janadhwani.in/wp-content/uploads/2023/10/IMG-20231001-WA0188.jpg)
0 Comments