ಹಿರಿಯೂರು:
ಆಟೋ ಚಾಲಕರು ಆಟೋ ಚಾಲನೆಯನ್ನು ಹಗುರವಾಗಿ ಪರಿಗಣಿಸಬಾರದು. ಅದನ್ನುಒಂದು ವೃತ್ತಿ ಧರ್ಮವನ್ನಾಗಿ ಸ್ವೀಕರಿಸಿಕೊಂಡು ಕಾನೂನು ಪಾಲನೆ ಮಾಡುವುದರ ಮೂಲಕ ವೃತ್ತಿಗೆ ಗೌರವ ತರಬೇಕಾಗಿದೆ ಎಂಬುದಾಗಿ ಡಿವೈಎಸ್ಪಿ ಚೈತ್ರ ತಿಳಿಸಿದರು.
ನಗರ ಪೋಲೀಸ್ ಠಾಣೆಯಲ್ಲಿ ಆಟೋ ಚಾಲಕರ ಪದಾಧಿಕಾರಿಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆಟೋ ಬಾಡಿಗೆಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ನವೀಕರಿಸಿ ಜೊತೆಯಾಗಿಟ್ಟುಕೊಳ್ಳಿ, ಚಾಲನೆ ಪರವಾನಗಿ ಕಡ್ಡಾಯ, ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಿ, ಸಹಕಾರ ಬೇಕಾದಲ್ಲಿ ನಿಮ್ಮ ಚಾಲನ ಕ್ರಮವು ಕ್ರಮಬದ್ಧವಾಗಿರಬೇಕು ಎಂದರಲ್ಲದೆ,
ಅಂಕಿ ಅಂಶಗಳ ಪ್ರಕಾರ ಇಡೀ ಜಿಲ್ಲೆಯಲ್ಲಿ ವರ್ಷಕ್ಕೆ 30 ಕೊಲೆಗಳು ಸಂಭವಿಸಿವೆ. ಆದರೆ ಅಪಘಾತದ ಪರಿಣಾಮವಾಗಿ ವರ್ಷಕ್ಕೆ 350ಕ್ಕೂ ಹೆಚ್ಚು ಸಾವುಗಳು ಸಂಭವಿಸುವ ವರದಿಯಲ್ಲಿದೆ. ಎಂದರಲ್ಲದೆ, ಅಪಘಾತಕ್ಕೆ ಮುಖ್ಯ ಕಾರಣಗಳಾಗಿ ಅಗತ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವುದು ವೇಗದ ಚಾಲನೆ ಕುಡಿತದ ಚಾಲನೆ ಸಂಚಾರಿ ನಿಯಮ ಉಲ್ಲಂಘನೆಗಳೆ ಆಗಿವೆ.
ಹಿರಿಯೂರು ನಗರವು ಸುತ್ತಮುತ್ತಲಿನ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಿಂದ ಕೂಡಿದೆ. ಪ್ರಯಾಣಿಕರ ಆಟೋಗಳು ಗೊತ್ತು ಗುರಿಯಿಲ್ಲದೆ ಸಾಗುವುದು, ಸೇವಾ ರಸ್ತೆ ಬಳಸದೆ ಹೆದ್ದಾರಿಯಲ್ಲಿಯೇ ಸಂಚರಿಸುವುದು ಈ ಅಪಘಾತಗಳಿಗೆ ಕಾರಣವಾಗಿದೆ ಎಂದರು.
ಪೊಲೀಸ್ ಇಲಾಖೆ ಆಟೋ ಚಾಲಕರ ಹಾಗೂ ಪ್ರಯಾಣಿಕರ ಜೀವನದ ಬಗ್ಗೆ ಯೋಚಿಸಿ ಕ್ರಮ ಕೈಗೊಳ್ಳುವುದೇ ಹೊರತು ಇನ್ಯಾವ ಫಲಾಪೇಕ್ಷೆ ಇಲ್ಲ. ಸಂಚಾರಿ ಉಲ್ಲಂಘನೆ ಚಾಲನೆಯಿಂದ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾದರೆ ನೀವುಗಳು ಜನಪ್ರತಿನಿಧಿಗಳಿಂದ ಫೋನ್ ಹಾಕಿಸಿ, ಕೈಕಟ್ಟಿ ನಿಲ್ಲುವ ದಯಾಮಯ ಸ್ಥಿತಿ ತರಿಸಿಕೊಳ್ಳಬೇಡಿ ಎಂಬುದಾಗಿ ಅವರು ತಿಳಿಸಿದರು.
ಪೋಲೀಸ್ ಇನ್ ಸ್ಪೆಕ್ಟರ್ ರಾಘವೇಂದ್ರ ಮಾತನಾಡಿ ನಗರದಲ್ಲಿ 9 ರಿಂದ 10 ಆಟೋ ಸ್ಟ್ಯಾಂಡ್ ಗಳಿದ್ದು ಯಾವ ಸ್ಟ್ಯಾಂಡ್ ಗಳಲ್ಲೂ ಸರದಿ ಸಾಲಿನಲ್ಲಿ ನಿಲ್ಲಿಸುವ ಗೋಜಿಗೆ ಆಟೋ ಚಾಲಕರು ಹೋಗುವುದಿಲ್ಲ. ಮನಬಂದಂತೆ ಆಟೋ ನಿಲ್ಲಿಸಿ ಹರಟೆ ಹೊಡೆಯಲು ಬೇರೆ ಕಡೆ ಹೋಗುವಿರಿ ಎಂದರಲ್ಲದೆ,
ನಗರದ ನಿಲ್ಧಾಣಕ್ಕೆ ಬಸ್ಗಳು ಬಂದು ನಿಲ್ಲಿಸಿದರೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಒಮ್ಮೆಲೆ ನಾಲ್ಕರಿಂದ ಐದು ಆಟಗಳು ಪ್ರಯಾಣಿಕರನ್ನು ಸುತ್ತುವರೆದು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಗೆ ಕಾರಣವಾಗುವಿರಿ ಎಂಬುದಾಗಿ ಬೇಸರ ವ್ಯಕ್ತಪಡಿಸಿದರು.
ಒಂದು ಅಂದಾಜಿನ ಪ್ರಕಾರ ನಗರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಆಟೋಗಳು ಪ್ರತಿನಿತ್ಯ ರಸ್ತೆಗಳಲ್ಲಿ ಸಂಚರಿಸುತ್ತಿದ್ದು ಅವುಗಳಲ್ಲಿ ಅರ್ಧದಷ್ಟು ಆಟೋಗಳ ದಾಖಲೆಗಳು ಮಾತ್ರ ಸರಿಯಿದ್ದು, ಸಂಚರಿಸಲು ಯೋಗ್ಯವಾಗಿವೆ. ಉಳಿದ ಆಟೋಗಳಿಗೆ ಯಾವುದೇ ರೀತಿಯ ಸರಿಯಾದ ದಾಖಲೆಗಳಿಲ್ಲ.
ಈ ಸಭೆಯ ಮೂಲಕ ಕಡೆಯದಾಗಿ ಪೋಲೀಸ್ ಇಲಾಖೆ ನೀಡುವ ಎಚ್ಚರಿಕೆಯೆಂದರೆ, ದಾಖಲೆಗಳಲ್ಲಾಗಲಿ, ಸಂಚಾರದಲ್ಲಿ ಆಗಲಿ ನಿಯಮಗಳು ಉಲ್ಲಂಘನೆ ಆದರೆ ಕಾನೂನು ರೀತಿಯಲ್ಲಿ ಆಟೋ ಜಪ್ತಿ ಮಾಡಿ ದಂಡ ಹಾಗೂ ಶಿಕ್ಷೆಗೆ ಗುರಿಪಡಿಸಲಾಗುವುದು ಎಂಬುದಾಗಿ ಅವರು ಎಚ್ಚರಿಕೆ ನೀಡಿದರು.
ಈ ಸಭೆಯಲ್ಲಿ ಪಿಎಸ್ಐ ಸತ್ಯನಾರಾಯಣ, ಸಿಬ್ಬಂದಿಗಳಾದ ರಾಘು, ರವಿ, ಆಟೋ ಚಾಲಕರ ಸಂಘದ ಪದಾಧಿಕಾರಿಗಳಾದ ಬೈಲಪ್ಪ, ರಾಮು, ಯಶ, ಮಧು, ತಿಪ್ಪೇಸ್ವಾಮಿ, ನರಸಿಂಹಮೂರ್ತಿ, ಕೃಷ್ಣನಾಯಕ್, ನವಾಜ್ ಖಾಲಿ, ಜಗಮೀರ್, ರಂಗಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments