ಚಳ್ಳಕೆರೆ ಜನಧ್ವನಿ ವಾರ್ತೆ ಫೆ 21.
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ವಿಮೆ ಮಾಡಿಸಿದ ರೈತರು ವಿಮಾ ಮೊತ್ತ ಬರುತ್ತದೆ ಅಂದುಕೊAಡು ರೈತರು ಕಂತು ಕಟ್ಟಿದ್ದಾರೆ. ಆದರೆ, ಒಂದು ವರ್ಷವಾದರೂ ಬೆಳೆ ವಿಮೆ ಬಾರದೆ ಇರುವುದು ರೈತನ್ನು ಮತ್ತಷ್ಟು ಆತಂಕಕ್ಕೆ ದೂಡುವಂತೆ ಮಾಡಿ ಬೆಳೆವಿಮೆ ಕಂಪನಿಗಳ ಮೇಲಿನ ನಂಬಿಕೆ ಕಳೆದುಕದೊಳ್ಳುವಂತೆ ಮಾಡಿದೆ.
ಹೌದು ಚಳ್ಳಕೆರೆ ತಾಲೂಕಿನ ರೈತರು ಸತತ ಕಳೆದ 15 ವರ್ಷಗಳಿಂದಲೂ ಸಕಾಲಕ್ಕೆ ಮಳೆ ಬಳೆ ಸಿಗದೆ ಅತಿ ವೃಷ್ಠಿ-ಅನಾವೃಷ್ಠಿಗೆ ಸಿಲುಕಿ ಬಿತ್ತನೆ ಮಾಡಿದ ಬೆಳೆಗಳು ಕೈಗೆ ಸಿಗದೆ ಸಾಲದ ಸುಳಿಗೆ ಸಿಲುಕಿ ಅನ್ನೆದಾತರು ಸಾವಿನ ಮನೆ ಕದ ತಟ್ಟುವಂತಾಗಿದೆ. ಸಾಂದರ್ಭಿಕ ಚಿತ್ರ
ತಾಲೂಕಿನ ರೈತರು 2022-23 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಪ್ರಮುಖ ವಾಣೀಜ್ಯ ಬೆಳೆ ಶೇಂಗಾ, ತೊಗರಿ, ಜೋಳ, ಸೇರಿದಂತೆ ವಿವಿಧ ಬೆಳೆಗಳಿಗೆ 45691 ರೈತರು 67780557 ರೂಗಳನ್ನು ಬೆಳೆವಿಮೆ ಕಂಪನಿಗೆ ಕಟ್ಟಿದ್ದು ಶೇ ೭೫ ರಷ್ಟು ಬೆಳೆ ನಷ್ಟವಾಗಿದೆ ಎಂಬ ವರದಿಯನ್ನು ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಸಮೀಕ್ಷೆ ಮಾಡಿ ಸರಕಾರಕ್ಕೆ ವರದಿ ನೀಡಿದ್ದರೂ ಸಹ ರೈತರಿಗೆ ಬೆಳೆ ವಿಮೆ ಪಾವತಿ ಮಾಡದೆ ಇರುವುದು ಅನ್ನದಾತರು ಹಣ ಕಟ್ಟಿ ವಿಮೆಗಾಗಿ ಅಲೆಡುವಂತೆ ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ.
ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟ ಪರಿಣಾಮ, ಫಸಲ್ ಬಿಮಾ ಯೋಜನೆಯಡಿ ಅರ್ಜಿ ತುಂಬಿ ಕಂತು ಪಾವತಿಸಿರುವ ರೈತರು, ಯೋಜನೆಯ ಅವೈಜ್ಞಾನಿಕ ಮಾನದಂಡಗಳು ಬೇಸರ ತರಿಸಿವೆ
ಸರಕಾರದ ವಿರುದ್ದ ರೈತರ ಅಕ್ರೋಶ.
ಸಾಂದರ್ಭಿಕ ಚಿತ್ರ
ಮತ್ತೊಂದೆಡೆ ಬೆಳೆ ವಿಮೆ ಕುರಿತು ರೈತ ಸಮುದಾಯ ಕೇಂದ್ರ ಸರಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದೆ. ಫಸಲ್ ಬಿಮಾ ಯೋಜನೆ ಜಾರಿಗೊಳಿಸಿ ದೊಡ್ಡ ಆಂದೋಲವನ್ನೇ ಸೃಷ್ಟಿಸಿ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ತೆರಳಿ ಯೋಜನೆಯಲ್ಲಿ ರೈತರನ್ನು ತೊಡಗಿಸಿತ್ತು. ತಾಲೂಕಿನಾದ್ಯಂತ ಸುಮಾರು ೪೫೬೯೧ ಸಾವಿರ ರೈತರು ವಿಮೆ ಕಟ್ಟಿದ್ದಾರೆ ಅಕಾಲಿಕ ಮಳೆಗೆ ಬೆಳೆ ಹಾನಿಯಾದರೂ ಸಹ ಬೆಳೆವಿಮೆ ರೈತರಿಗೆ ವಿತರಣೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರಕಾರದ ಮುಂದಾಗದೆ ಇರುವುದು ರೈತರು ಸರಕಾರ ಹಾಗೂ ಬೆಳೆ ವಿಮೆ ಕಂಪನಿಗಳಿಗೆ ಇಡಿ ಶಾಪ ಹಾಕುತ್ತಿದ್ದಾರೆ.
ಕಂಪನಿಗಳಿಗೆ ವರದಾನ ರೈತರಿಗೆ ಜೇಬಿಗೆ ಕತ್ತರಿ.
ಬೆಳೆ ಹಾನಿ ಕುರಿತು ಕಂದಾಯ, ಕೃಷಿ ಮತ್ತು ವಿಮಾ ಕಂಪನಿ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿರುವ ಪದ್ಧತಿ ಅವೈಜ್ಞಾನಿಕವಾಗಿದೆ ಎಂಬುದು ರೈತ ಸಂಘದ ಆರೋಪ. ತಾಲೂಕಿನ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾವುದೋ ಒಂದು ಮೂಲೆಯಲ್ಲಿ ಉತ್ತಮ ಫಸಲು ಇರುವ ಭೂಮಿಯನ್ನು ಆಯ್ಕೆ ಮಾಡಿಕೊಂಡು ವಿಮೆ ಮಂಜೂರಾತಿಗಾಗಿ ಕಳಿಸಲಾಗುತ್ತಿದೆ.
ಸಾಂದರ್ಭಿಕ ಚಿತ್ರ.
ಇದು ಇಡಿಯಾಗಿ ಆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಭೂಮಿಗಳಿಗೂ ಅನ್ವಯಿಸುತ್ತದೆ. ಇದು ಕಂಪನಿ ಮತ್ತು ಇಲಾಖೆ ಅಧಿಕಾರಿಗಳು ನಡೆಸುತ್ತಿರುವ ರೈತ ವಿರೋಧಿ, ಅವೈಜ್ಞಾನಿಕ ಪದ್ಧತಿಯಾಗಿದೆ. ಕೂಡಲೇ ಈ ಪದ್ಧತಿ ಕೈಬಿಟ್ಟು ಮಳೆ ಕೈಕೊಟ್ಟಿರುವ ಪೂರ್ಣ ಪ್ರದೇಶವನ್ನು ವಿಮೆಗೊಳಪಡಿಸಬೇಕೆಂಬುದು ರೈತ ಮುಖಂಡರ ಹಾಗೂ ರೈತರ ಆಗ್ರಹವಾಗಿದೆ.
ಕೂಡಲೆ ರೈತರು ಕಟ್ಟಿದ ಬೆಳೆ ವಿಮೆ ಪಾವತಿ ಮಾಡದಿದ್ದರೆ ವಿಧಾನಸಾಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಸರಕಾರಗಳಿಗೆ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
0 Comments