ಚಳ್ಳಕೆರೆ ಜನಧ್ವನಿ ವಾರ್ತೆ ಜೂ.6 ಪ್ರತಿಯೊಬ್ಬರ ಮನೆ ಮುಂದೆ ಹಣ್ಣಿನ ಹಾಗೂ ತರಕಾರಿ ಗಿಡ ಮರಗಳನ್ನು ಬೆಳೆಸುವುದರಿಂದ ಪರಿಸರ ರಕ್ಷಣೆಯ ಜತಗೆ ನಿಮ್ಮ ಆರೋಗ್ಯ ಸದೃಢ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಗ್ರೀನ್ ಸ್ಟೆಪ್ ನ ಸಂಸ್ಥಾಪಕಿ ಎಚ್ ಕೆ ಸವಿತಾ ಕಿವಿಮಾತು ಹೇಳಿದರು.
ತಾಲೂಕಿನ ದೊಡ್ಡ ಉಳ್ಳಾರ್ತಿದಲ್ಲಿ ಗ್ರೀನ್ ಸ್ಟೆಪ್ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ 450 ಉಚಿತ ಹಣ್ಣಿನ ಸಸಿಗಳನ್ನು ವಿತರಿಸಿ ಮಾತನಾಡಿದರು.
ಅರಣ್ಯ ಗಿಡಗಳನ್ನು ಬೆಳೆಸಲು ನಮ್ಮ ಮನೆ ಮುಂದೆ ಜಾಗವಿಲ್ಲ ಚಿಂತೆ ಬಿಡಿ ಪ್ರತಿಯೊಬ್ಬರ ಮನೆ ಮುಂದೆ , ಹಿತ್ತಲ್ಲಲ್ಲಿ ಬೆಳೆಯುವಂತಹ ಸೀಮೆ, ನಿಂಬೆ, ಅಂಜೂರ, ಕರಿಬೇವು, ಮಾವಿನ ಗಿಡಗಳನ್ನು ಪ್ರತಿ ಮನೆಗಳಿಗೆ ಹಾಗೂ ಶಾಲೆಗಳಿಗೆ ಉಚಿತವಾಗಿ ವಿತರಣೆ ಮಾಡಲಾಗುತ್ತಿದ್ದ ಪ್ರತಿಯೊಬ್ಬರು ಗಿಡನೆಟ್ಟು ಪಾಲನೆ ಪೋಷಣೆ ಮಾಡಿದರೆ ಪರಿಸರ ರಕ್ಷಣೆ ಹಾಗೂ ಅದರಿಂದ ಬರುವ ಫಲಗಳನ್ನು ಸೇವನೆ ಮಾಡಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.
ನಾನೊಬ್ಬ ಸಮಾಜ ಶ್ರಾಸ್ತದ ಶಿಕ್ಷಕಿಯಾಗಿ ಮಕ್ಕಳಿ ಪಾಠ ಮಾಡುವ ಜತಗೆ ಗ್ರೀನ್ ಸ್ಟೆಪ್ ಎಂಬ ಸಂಸ್ಥಾಪಕಿಯಾಗಿ ಕಳೆದ ಮೂರು ವರ್ಷಗಳಿಂದ ಬಯಲು ಸೀಮೆಯಾದ ನಮ್ಮ ಹಳ್ಳಿಗಳಲ್ಲಿ ನಿರಂತರವಾಗಿ ಸಾರ್ವಜನಿಕ ಅರಣ್ಯೀಕರಣ ಮಾಡುವುದು ನನ್ನ ಉದ್ದೇಶವಾಗಿದ್ದು.ಜನರಿಗೆ ಉಚಿತವಾಗಿ ಹಣ್ಣಿನ ಗಿಡಗಳನ್ನು ನೀಡಿದರೆ ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗುವಂತೆ ಸಿಗುವ ಮೂಲಕ ಉತ್ತಮ ವಾತಾವರಣವನ್ನು ನಿಲ್ಲಿಸುವುದೇ ಆಗಿದೆ.
ಕಳೆದ ಮೂರು ವರ್ಷಗಳಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಾಯಕನಹಟ್ಟಿ,ಸಾಣಿಕೆರೆ ಚಳ್ಳಕೆರೆ ನಗರ ಪ್ರದೇಶಗಳಲ್ಲಿ 1200 ಕ್ಕೂ ಹೆಚ್ಚು ಗಿಡಗಳನ್ನು ವಿತರಣೆ ಮಾಡಿ ಇಂದು ದೊಡ್ಡ ಉಳ್ಳಾರ್ತಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪರಿಸರದಿನಾಚರಣೆ ಹಮ್ಮಿಕೊಂಡು ಗ್ರಾಮದ ಜನತೆಗೆ ಹಣ್ಣಿನ ಸಸಿಗಳನ್ನು ವಿತರಣೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಕ್ಷೆ ಕರಿಯಮ್ಮ, ಹೆಚ್ ವಿ ಕೃಷ್ಣಮೂರ್ತಿ,ಲಿಂಗರಾಜ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಶ್ರೀನಿವಾಸ್ , ಗ್ರಾಪಂ ಪಿಡಿಒ ಸುರೇಶ್ ಮಾತನಾಡಿದರು.
ಶಿವಕುಮಾರ್, ರವಿತೇಜ, ಅಭಿನಂದನ್, ಪೃಥ್ವಿ, ನಾಗೇಶ ,ಸಿದ್ದಾರ್ಥ, ಅಜಿತ್ ,ಪ್ರತಿಕ್ಷ, . ಬೋರಯ್ಯ ವೆಂಕಟೇಶ್. ಸಣ್ಣ ತಿಮ್ಮಯ್ಯ. ಇತರರಿದ್ದರು.
ಕಾರ್ಯಕ್ಕೂ ಶಾಲಾ ಮಕ್ಕಳಿಂದ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಪರಿಸರ ಜಾಗೃತಿ ಜಾಥ ಮೂಲಕ ಸಾರ್ವಜನಿಕರಲ್ಲಿ ಪರಿಸರ ದಿನಾಚರಣೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
0 Comments