ಚಳ್ಳಕೆರೆ: ನಗರದ ಗೆಳೆಯರ ಬಳಗದ ವತಿಯಿಂದ ಅಯೋಧ್ಯೆಯಲ್ಲಿ ಸೋಮವಾರ ನಡೆಯುತ್ತಿರುವ ರಾಮಮಂದಿರದ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮದ ಅಂಗವಾಗಿ ಸ್ನೇಹ ಬಳಗದ ವತಿಯಿಂದ ಸುಮಾರು 555 ಕೆಜಿಯಷ್ಟು ಲಾಡು ತಯಾರಿಸಲಾಗುತ್ತಿದ್ಧು ಸುಮಾರು 16000 ನಾಗರಿಕರಿಗೆ ಹಂಚಲಾಗುವುದು ಎಂದು ಗೆಳೆಯರ ಬಳಗದ ಡಾ. ಕುಬೇರ ತಿಳಿಸಿದರು.
ಈ ವೇಳೆ ಮಾತನಾಡಿದ ಅವರು ನಗರದ ಹಿಂದೂ ಮುಸ್ಲಿಂ ಕ್ರೈಸ್ತ ಎಲ್ಲಾ ಸಮುದಾಯದ ಜನರು ಜಾತಿ ಮತ ಧರ್ಮದ ಭೇದ ತೊರೆದು ಬಾಲ್ಯ ಸ್ನೇಹಿತರು ವಾಣಿಜ್ಯೋದ್ಯಮಿಗಳು ನಾಗರಿಕರು ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ ಸೋಮವಾರ ಮಧ್ಯಾಹ್ನ 12:30ಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ಆರಂಭವಾದ ಕೂಡಲೇ ನಗರದ ಶ್ರೀರಾಮ ಮಂದಿರದ ಬಳಿ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿ ನಂತರ ನಗರದ ಪಾವಗಡ ರಸ್ತೆ ಮಹದೇವಿ ರಸ್ತೆ ಬೆಂಗಳೂರು ರಸ್ತೆ ಚಿತ್ರದುರ್ಗ ರಸ್ತೆ ಖಾಸಗಿ ಬಸ್ ನಿಲ್ದಾಣ ಬಳ್ಳಾರಿ ರಸ್ತೆ ಸೇರಿದಂತೆ ರಾಜ ಬೀದಿಗಳಲ್ಲಿ ರಾಮನ ಭಾವಚಿತ್ರದೊಂದಿಗೆ ತೆರೆದ ವಾಹನದಲ್ಲಿ ತೆರಳಿ, ಲಾಡು ಪ್ರಸಾದ ಪ್ಯಾಕೆಟ್ ಅನ್ನು ಸಾರ್ವಜನಿಕರಿಗೆ ವಿತರಿಸಿ ಅಯೋಧ್ಯೆಯ ಶ್ರೀರಾಮನಿಗೆ ಭಕ್ತಿ ಸಮರ್ಪಿಸಲಾಗುವುದು ಎಂದು ತಿಳಿಸಿದರು.
ಗೆಳೆಯರ ಬಳಗದ ಮಂಜುನಾಥ್ ಮಾತನಾಡಿ ಸುಮಾರು 500 ವರ್ಷಗಳ ಕನಸಾಗಿದ್ದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿರುವುದು ಸಂತಸ ತಂದಿದೆ ದೇಶದಲ್ಲಿ ತ್ರೇತಾಯುಗದ ವಾತಾವರಣ ಸೃಷ್ಟಿಯಾದಂತೆ ಕಂಡುಬರುತ್ತಿದ್ದು ಸೋಮವಾರ ಯಾವುದೇ ಜಾತಿ ಭೇದ ಭಾವ ಮಾಡದೆ ಈ ಕಾರ್ಯದಲ್ಲಿ ಎಲ್ಲಾ ಸಾರ್ವಜನಿಕರು ಬಂದು ಪ್ರಸಾದ ಸ್ವೀಕರಿಸಬಹುದಾಗಿದೆ ದೇಶದ ಇತಿಹಾಸದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ಸೌಹಾರ್ದತೆಯ ಸಂಕೇತವಾಗಿ ಉಳಿಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೆಳೆಯರ ಬಳಗದ ವಂದನ ಮಂಜು ಬಿಸಿನೀರು ಸಂತೋಷ್ ಪ್ರಶಾಂತ್ ಕುಮಾರ್ ಎಂ ಬಾಲಾಜಿ. ಜೈ ಕುಮಾರ್ ಮಾದೇಶ್ ಬಸವರಾಜ್ ಉಮೇಶ್ ರಾಜು ಜೈರಾಮ್ ಬಾಲಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
0 Comments