ಅಬಕಾರಿ ಉಪಆಯುಕ್ತ ಸ್ವಪ್ನ, ಅಬಕಾರಿ ನಿರೀಕ್ಷಕಿ ಶೀಲಾ ಸೇರಿದಂತೆ ನಾಲ್ಕು ಅಧಿಕಾರಿಗಳು ಲೋಕಾಯುಕ್ತರ ಬಲೆಗೆ.

by | 14/10/23 | ಕ್ರೈಂ


ದಾವಣಗೆರೆ, ಅ.14: ದಾವಣಗೆರೆಲೋಕಾಯುಕ್ತ ತಂಡ ಭರ್ಜರಿ ಬೇಟೆ ಮಾಡಿದ್ದು, ಅಬಕಾರಿ ಡಿಸಿ
ಸ್ವಪ್ನ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಈ ಸಂಬಂಧ ಅಬಕಾರಿ ಉಪಆಯುಕ್ತ ಸ್ವಪ್ನ, ಅಬಕಾರಿ ನಿರೀಕ್ಷಕಿ ಶೀಲಾ ಸೇರಿದಂತೆ ನಾಲ್ಕು ಅಧಿಕಾರಿಗಳನ್ನು
ಬಂಧಿಸಲಾಗಿದೆ.
ಲೋಕಾಯುಕ್ತ ಎಸ್ ಪಿ ಕೌಲಾಪುರೆ ನೇತೃತ್ವದಲ್ಲಿ ಲೋಕಾಯುಕ್ತ ಪೋಲಿಸ್ನಿ ರೀಕ್ಷಕರಾದ ಪ್ರಭು,ಮಧುಸೂದನ್,
ರಾಷ್ಟ್ರಪತಿ, ಹಾವೇರಿಯ ಮಂಜುನಾಥ್
ಪಂಡಿತ್ ಹಾಗೂ ಸಿಬ್ಬಂದಿಗಳು ದಾಳಿ
ನಡೆಸಿದ್ದಾರೆ.ಸಿ ಎಲ್ 7 ಲೈಸೆನ್ಸ್ ಮಾಡಿಕೊಡಲು 3 ಲಕ್ಷ ಹಣ ಲಂಚ ಪಡೆಯುವಾಗ ಲೋಕಾಯುಕ್ತ
ಪೋಲಿಸರು ಟ್ರ್ಯಾಪ್ ಮಾಡಿದ್ದಾರೆ. ಡಿಜಿ
ರಘುನಾಥ್ ಬಳಿಯಿಂದ ಹಣ ಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ.ಹರಿಹರದ ಅಮರಾವತಿ ಕಾಲೋನಿ ಬಳಿಯ ಡಿಜಿಆರ್ ಅಮ್ಯೂಸ್ ಮೆಂಟ್ಪಾ ರ್ಕ್ ಮಾಲೀಕ ನೀಡಿದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ
ನಡೆಸಲಾಗಿತ್ತು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *