ಚಳ್ಳಕೆರೆ: ಗ್ರಾಮೀಣ ಭಾಗದ ಆರು ತಿಂಗಳಿAದ ಮೂರು ವರ್ಷದೊಳಗಿನ ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲರು ರಾಜ್ಯ ಹಾಗೂ ಕೇಂದ್ರ ಸರಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರೂ ನಿರ್ವಹಣೆ ಹೊಣೆ ಒತ್ತಿರುವವ ಸಿಬ್ಬಂದಿಗಳ ಬೇಜವ್ದಾರಿಯ ಪರಿಣಾಮವಾಗಿ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳು ಸೌಲಭ್ಯದಿಂದ ವಂಚಿತವನ್ನಾಗಿ ಮಾಡಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಪಂ ವ್ಯಾಪ್ತಿಯ ಬೊಮ್ಮಸಂದ್ರಗ್ರಾಮದ ಶಿಲ್ಪ ಕೋಂ ಮಾರುತಿಸ ದಂಪತಿಗೆ ಮಗು ಹುಟ್ಟಿನಿಂದ ನಿಶ್ಯಕ್ತಿ ಮತ್ತು ಕಡಿಮೆ ತೂಕದಿಂದ ಬಳಲುತ್ತಿದೆ. ಪ್ರತಿತಿಂಗಳು ಅಂಗನವಾಡಿ ಕೇಂದ್ರದಲ್ಲಿ ಮಗುವಿನ ತೂಕ ಮಾಡಲಾಗುತ್ತಿದೆ. ನಂತರ ಅಕ್ಕಿ, ಬೇಳೆ ಜತೆ ಪೌಷ್ಟಿಕ ಅಹಾರ ನೀಡುತ್ತಾರೆ, ಸರಕಾರ ಅಪೌಷ್ಟಿಕ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿಸಿ ಉಚಿತ ಔಷಧಿ ನೀಡುತ್ತಾರೆ ಎಂದು ಹೇಳುತ್ತಾರೆ.
ಮಗು ಹುಟ್ಟಿದಾಗ ಸುಮಾರು ೯ ಕೆ.ಜಿ ಇತ್ತು ಈಗ ಸುಮಾರು ೩ ವರ್ಷ ತುಂಬಿ ೪ ನೇ ವರ್ಷಕ್ಕೆ ಕಾಲಿಟ್ಟಿದ್ದು ಈಗ ೭ ಕೆ.ಜಿ ತೂಕ ಇದೆ . ಮಗುವಿನ ಚಿಕಿತ್ಸೆಗಾಗಿ ಚಳ್ಳಕೆರೆ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಚಿಕಿತ್ಸೆಕೊಡಿಸಲಾಗಿದೆ ಎಂದು ಮಗುವಿನ ತಾಯಿ ಶಿಲ್ಪ ಜನಧ್ವನಿಯೊಂದಿಗೆ ಮಾಹಿತಿ ಹಂಚಿಕೊAಡಿದ್ದಾರೆ.
ಅಪೌಷ್ಟಿಕ ಮಕ್ಕಳೆಂದು ಗುರುತಿಸಿ ಪೌಷ್ಟಿಕ ಅಹಾರದ ಜತೆ ಹಾಲು, ಕೋಳಿಮೊಟ್ಟೆ ನೀಡ ಬೇಕೆಂಬ ಸರಕಾರಿ ನಿಯಮ ಜಾರಿಗೆ ತಂದರೂ ಸಹ ಗ್ರಾಮೀಣ ಭಾಗದ ಮಕ್ಕಳು ಇದರಿಂದ ವಂಚನೆ ಯಾಗುತ್ತಿರುವ ಇಂತಹ ಹಲವಾರು ಪ್ರಕರಣಗಳು ತೆರೆಮರೆಯಲ್ಲಿ ಸೇರಿಕೊಂಡಿದ್ದು ಬೆಳೆಕಿಗೆ ಬರುವುದು ಕಡಿಮೆಯಾಗಿದ್ದು. ಇಂತಹ ಪ್ರಕರಣಗಲನ್ನು ಪತ್ತೆ ಹಚ್ಚುವ ಸಲುವಾಗಿ ಇಲಾಖೆಯೇ ಹೆಚ್ಚಿನ ಜವಾಬಬ್ದಾರಿವಹಿಸಿ ಅಪೌಷ್ಟಿಕ ಮಕ್ಕಳನ್ನು ಪತ್ತೆಹಚ್ಚಿ ಅಂತಹ ಮಕ್ಕಳಿಗೆ ಸರಕಾರದ ಸೌಲಭ್ಯ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಡೆಯ ಬೇಕಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments