ಹಿರಿಯೂರು ಜ.10 ಮೂತ್ರ ವಿರ್ಜನೆ ಮಾಡಲು ಹೋಗಿ ವಾಹನದಲ್ಲಿನ ಜರ್ಕೀನ್ ತೆಗೆಕೊಳ್ಳುತ್ತಿದ್ದ ವ್ಯಕ್ತಿಗೆ ವಾಹನ ಡಿಕ್ಕಿ ಸಾವು. ಶಿವಮೊಗ್ಗ ತಾಲ್ಲೂಕಿನ ಹಾರೋಬೆನಹಳ್ಳಿ ಗ್ರಾಮದ ಮೇಘರಾಜ( 29 ) ಮೃತ ವ್ಯಕ್ತಿ. ಶಿವಮೊಗ್ಗ ಜಿಲ್ಲೆಯ ಶಕ್ತಿ ಆಟೋ ಮೋಟಿವ್ ಸ್ಪೇರ್
ಸ್ಪಾಟ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೇಘರಾಜ ಜ 10 ರಾತ್ರಿ 12.20
ಸಮಯದಲ್ಲಿ ಸ್ಪೇರ್ ಪಾರ್ಟ್ ಗಳನ್ನು ಅಂಗಡಿಗಳಿಗೆ ನೀಡಲು ತುಮಕೂರಿಗೆ ಹೋಗಿ, ವಾಪಾಸ್ಸು,
ಶಿವಮೊಗ್ಗ ಕ್ಕೆ ಹೋಗಲು ಹಿರಿಯೂರು-ಚಿತ್ರದುರ್ಗ ದ ಮಾರ್ಗವಾಗಿ ಹಿರಿಯೂರು ನಗರದ ಸ್ವಾಮಿಯಪ್ಪ
ಹೋಟೆಲ್ ಸಮೀಪ ಭಾರತ್ ಪೆಟ್ರೋಲ್ ಬಂಕ್ ಬಳಿ ಬೆಂಗಳೂರು ಚಿತ್ರದುರ್ಗ ಕಡೆಗೆ ಹಾದು ಹೋಗಿರುವ
ಎನ್.ಹೆಚ್-04 ಏಕ ಮುಖ ರಸ್ತೆಯ ಎಡಬದಿಗೆ ಅಶೋಕ್ ಲೆಲ್ಯಾಂಡ್ ಗೂಡ್ಸ್ ವಾಹನವನ್ನು ನಿಲ್ಲಿಸಿ, ಮೂತ್ರ
ವಿಸರ್ಜನೆಗೆಂದು ಮೇಘರಾಜ ಇಳಿದಿದ್ದು, ತದನಂತರ ಗೂಡ್ಸ್ ವಾಹನದ ಚಾಲಕ ನಿಂದ ಜರ್ಕಿನ್
ತೆಗೆದುಕೊಳ್ಳುವಾಗ ಬೆಂಗಳೂರು ಕಡೆಯಿಂದ ಬಂದ ಯಾವುದೋ ಒಂದು ಲಾರಿಯ ಚಾಲಕ ತನ್ನ ಲಾರಿಯನ್ನು
ಅತೀ ವೇಗ ಮತ್ತು ಅಜಾಗೂರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿಂತಿದ್ದ ಅಶೋಕ್ ಲೇಲ್ಯಾಂಡ್
ವಾಹನದ ಹತ್ತಿರವಿದ್ದ ಮೇಘರಾಜ ನಿಗೆ ಡಿಕ್ಕಿ ಪಡಿಸಿದ ಪರಿಣಾಮ ಮೇಘರಾಜನಿಗೆ ಗಂಭೀರವಾಗಿ ಗಾಯಗೊಂಡ ಮೇಘರಾಜನನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಪರಿಶೀಲಿದಾಗ ದಾರಿ ಮಧ್ಯೆ ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ. ಹಿರಿಯೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments