ಚಳ್ಳಕೆರೆ ಜನಧ್ವನಿ ವಾರ್ತೆ ಜ.31. ರಸ್ತೆಯ ಬದಿಯ ಫಲಕೊಡದೆ ಮೋಟು ಮರಗಳು ಅಪಘಾತಕ್ಕೆ ಆಹ್ವಾನ ನೀಡುತ್ತಿವೆ ಎಂದು ಸಾರ್ವಜನಕರು ಆರೋಪಿಸಿದ್ದಾರೆ.
ಚಳ್ಳಕೆರೆ ಯಿಂದ ಚಿತ್ರದುರ್ಗ ಮಾರ್ಗವಾಗಿ ದಿನ ನಿತ್ಯ ನೂರಾರು ವಾಹನಗಳು ವಾಹನಗಳ ದಟ್ಟಣೆಯಿಂದೆ ಕೂಡಿರುವ ರಸ್ತೆಗೆ ಹೊಂದಿಕೊಡಿರುವ ಸಾಲೂ ಸಾಲು ಒಣಗಿದ ಹಾಗೂ ಬೋಡು ಹುಣಿಸೆ ಮರಳು ಸುಮಾರು 30 ರಿಂದ 40 ವರ್ಷದ ಹಳೆಯ ಮಳಗಳಾಗಿದ್ದು ಆವುದೇ ಫಲವೂ ನೀಡುವುದಿಲ್ಲ ರಸ್ತೆಗೆ ಚಾಚಿಕೊಂಡ ಮರದ ಕೊಂಬೆಗಳನ್ನು ಹಾಗಿಂದಾಗ ಕಡಿಯಲಾಗಿತ್ತಿದೆ ಆದರೂ ಸಹ ವಾಹನ ಸವಾರರು ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಮರಗಳಿಗೆ ಡಿಕ್ಕಿ ಹೊಡೆದು ಸಾವಿನ ಮನೆ ಹಾಗೂ ಕೈಕಾಲುಗಳನ್ನು ಕಳೆದು ಕೊಂಡು ವಿಕಲರಾದ ಘಟನೆಗಳು ಸಾಕಷ್ಟಿವೆ.
ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಗ್ರಾಮದ ಬಳಿ ಮೋಟು ಬರಕ್ಕೆ ಚಳ್ಳಕೆರೆ ನಗರದ ಚಿತ್ರಯ್ಯನಹಟ್ಟಿ ಗ್ರಾಮದ 45 ಹಾಗೂ 55 ವರ್ಷದ ಇಬ್ಬರು ವೆಂಕಟೇಶ್ ಎಂಬ ಹೆಸರಿನ ಇಬ್ಬರು ಚಿತ್ರದುರ್ಗಕ್ಕೆ ಹೋಗಿ ಮರಳಿ ಚಳ್ಳಕೆರೆಗೆ ಬರುವಾಗ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ನುಜ್ಜುಗುಜ್ಜಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಮತ್ತೊಬ್ಬ ವ್ಯಕ್ತಿ ಗಾಯಗೊಂಡು ಚಿಲ್ಲಾಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ..
ರಸ್ತೆ ಬದಿಯ ಸಾಲು ಸಾಲು ಒಣಗಿದ ಹಾಗೂ ಫಲಕೊಡದ ಮೋಟು ಹುಣಿಸೆ ಮರಗಳನ್ನು ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸಿ ವಾಹನ ಸವಾರರ ಪ್ರಾಣ ರಕ್ಷಣೆಗೆ ಮುಂದಾಗುವರೇ ಕಾದು ನೋಡ ಬೇಕಿದೆ.
0 Comments