ಹೊಸದುರ್ಗ ಜನಧ್ವನಿ ವಾರ್ತೆ ಮಾ.11
ಅನಾರೋಗ್ಯದಿಂದ ಬಳಲುತ್ತಿರುವ ಗಂಡನಿಗೆ ದಯಾಮರಣಕ್ಕೆ ಅವಕಾಶ ನೀಡಿ ಎಂದು ಪತ್ನಿಯೊಬ್ಬಳು ರಾಜ್ಯಪಾಲರಿಗೆ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.
ಹೌದು ಇದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ನಗರ ವಿದ್ಯಾನಗರದ ಗಸಿರಾಯಪ್ಪ ಗುಣವಂತಮ್ಮ ನಿಯಲದಲ್ಲಿ ವಾಸ ಮಾಡುವ ರೇಖಾ ರಮೇಶ್ ಇವರ ಪತಿ ರಮೇಶ್ಇವರಿಗೆ ವೆರಿಕೋಸ್, ಬಿಪಿ. ಸುಗರ್,ವೈನ್ಸ್ ವೀನಸ್, ಅಲ್ಸರ್, ಹೈಡ್ರೋಸಿಲ್ ಲೈಪೊಮಾ, ಬ್ಲಡ್ ಕ್ಲಾಟ್, ಫಿಡ್ಸ್ ಹಗೆ ಹಲುವು ಖಾಹಿಲೆಗಳಿಂದ ಬಳಲುತ್ತಿದ್ದು ಈಗಾಗಲೆ ಚಿಕಿತ್ಸೆಗಾಗ ಸಾಕಷ್ಟು ಹಣ ಖರ್ಚು ಮಾಡಿದರೂ ಚಿಕಿತ್ಸೆ ಫಲಿಸದೆ ಚೇತರಿಸಿಕೊಳ್ಳುವ ಲಕ್ಷಣಗಳಿಲ್ಲ ಈಗಾಗಲೆ ಸಾಕಷ್ಟು ಹಣ ಖರ್ಚು ಮಾಡಿದ್ದು ನಮಗೆ ಯಾವುದೇ ದುಡಿಮೆ ಇಲ್ಲ ಬಾಡಿಮೆ ಮನೆಯಲ್ಲಿ ವಾಸ ಮಾಡುತ್ತಿದ್ದು ಜೀವನ ದುಸ್ಥರವಾಗಿದೆ.
ದಾವಣಗೆರೆ ತಾಲೂಕಿನ ಹರಿಹರ ನಗರದ ಹರಿಹರೇಶ್ವರ ದೇವಸ್ಥಾನದ ಬೀದಿಯಲ್ಲಿರುವ ಜೋಳ ಸುಬ್ಬಣ್ಣ ಇವರ ಮಗನಾದ ಹರೀಶ್ ಇವರನ್ನು ನಾನು ರೇಖಾ ಹರೀಶ್ ಇವರನ್ನು ವಿವಾಹವಾಗಿ ೭ ವರ್ಷಗಳು ಕಳೆದಿವೆ.
ಜೋಳದ ಸುಬ್ಬಯ ಇವರಿಗೆ 7 ಜನ ಮಕ್ಕಳಿದ್ದು ಶಾರದ,ಸತ್ಯವತಿ, ಹರೀಶ್,ಯಶೋಧ,ರಮೇಶ್, ಚಂದ್ರಕಲಾ ಶಿಕ್ಷಕಿ, ರತ್ನ ಶಿಕ್ಷಕಿ, 5 ಹೆಣ್ಣು, 2 ಗಂಡು ಮಕ್ಕಳಲ್ಲಿ 5 ನೇ ಮಗನೇ ಹರೀಶ್ ಇವರಿಗೆ ಗಂಭಿರವಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದು ಇದು ನನಗೆ ಜೀವನ ನಡೆಸಲು ಕಷ್ಟವಾಗಿದೆ ನನ್ನ ಗಂಡನ ಅಣ್ಣ ಹರಿಹರದಲ್ಲಿ ಮಳಿಗೆಗಳನ್ನು ಬಾಡಿಗೆ ನೀಡಿದ್ದು ತಿಂಗಳಿಗೆ 30 ಸಾವಿರ ರೂ ಹಣ ಬಂದರೂ ನನ್ನ ಗಂಡನಿಗೆ ಔಷಧಿ ಖರಿದಿಗೆ ಹಾಗೂ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ.
ನನ್ನ ಮಾವರನ ಆಸ್ತಿಯಲ್ಲಿ ಭಾಗ ಪಡೆಯಲು ನ್ಯಾಯಾಲಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು ಜೀವನ ನಡೆಸುವುದು ದುಸ್ಥರವಾಗಿದೆ.
ಜೀವನ ನೆಸಲು ಸಾಧ್ಯವಾಗದೆ ಇರುವುದರಿಂದ ನಾನು ಹಾಗೂ ನನ್ನ ಗಂಡ ಬದುಕುವುದ ಬೇಡ ಎಂದು ನಿರ್ಧರಿಸಿದ್ದು ಜೀವಂತವಾಗಿರುವುದಕ್ಕಿಂತ ಸಾಯುವುದೇ ಲೇಸು ಆಗಾಗಿ ದಯಾ ಮರಣಕ್ಕೆ ಅವಕಾಶ ಕೊಡಬೇಕೆಂದು ರಾಜ್ಯಪಾಲರು, ರಾಜಭವನ ಬೆಂಗಳೂರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ನೋಂದಣೆ ಅಂಚೆ ಮೂಲಕ ರೇಖಾ ರಮೇಶ್ ಪತ್ರ ಬರೆದಿರುವುದು ಜನಧ್ವನಿ ಗೆ ಲಭ್ಯವಾಗಿದೆ.
0 Comments