ಚಿತ್ರದುರ್ಗ ಜ.3 ಅಪರೂಪದ ಕಾಯಿಲೆಗೆ ತುತ್ತಾಗಿ ನಗರ ಪೋಲಿಸ್ ಠಾಣೆ ಪೋಲಿಸ್ ಪೇದೆ ಮಹೇಂದ್ರ ಮೃತಪಟ್ಟ ಘಟನೆ ನಡೆದಿದೆ. ಚಿತ್ರದುರ್ಗ ನಗರ ಠಾಣೆ ಎಸ್.ಮಹೇಂದ್ರ (26) ಚಳ್ಳಕೆರೆ ತಾಲೂಕಿನ ಮಲ್ಲಸಮುದ್ರ ಗ್ರಾಮದ ನಿವಾಸಿಯಾದ ಮಹೇಂದ್ರ ಅವರು ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅನಾರೋಗ್ಯದ ಕಾರಣಕ್ಕೆ 2023ರ ಡಿ.28 ರಂದು ಚಿತ್ರದುರ್ಗ ಬಸವೇಶ್ವರ ವೈದ್ಯಕೀಯ ಮತ್ತು ಸಂಶೋಧನಾ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರ ಸಲಹೆಯಂತೆ ಮಂಗಳವಾರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ತುಮಕೂರು ಸಮೀಪ ಮಾರ್ಗ ಮಧ್ಯೆ ಮೃತಪಟ್ಟಿರುತ್ತಾರೆ.
ಮಹೇಂದ್ರ 2018 ರಲ್ಲಿ ಕೆಎಸ್ಆರ್ಪಿ ಪೊಲೀಸ್ ಆಗಿ 3 ವರ್ಷ ಸೇವೆ ಸಲ್ಲಿಸಿ, 2022 ರಲ್ಲಿ ಸಿವಿಲ್ ಪೊಲೀಸ್ ಆಗಿ ಆಯ್ಕೆಯಾಗಿ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಬಡತನದಲ್ಲಿಯೇ ಮನೆಯ ಜವಬ್ದಾರಿ ಹೊತ್ತು ನೌಕರಿ ಪಡೆದಿದ್ದ ಮಹೇಂದ್ರ ಅವರ ಬದುಕು ಹಸನಾಗುವ ಸಮಯಕ್ಕೆ ಮಾರಕ ಕಾಯಿಲಿಗೆ ತುತ್ತಾಗಿದ್ದಾರೆ. ಕರ್ತವ್ಯ ನಿಷ್ಠೆಗೆ ಮೇಲಾಧಿಕಾರಿ ಸಿಬ್ಬಂದಿಗಳಿಂದ ಸೈ ಎನಿಸಿಕೊಂಡಿದ್ದರು. ಮಹೇಂದ್ರ ಅವರ ಅಕಾಲಿಕ ಸಾವಿಗೆ ಚಿತ್ರದುರ್ಗ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments