ಚಳ್ಳಕೆರೆ ಜನಧ್ವನಿ ವಾರ್ತೆ ಡಿ.1. ನಗರಸಭೆಯಲ್ಲಿ ಅಧ್ಯಕ್ಷರಿಲ್ಲದೆ ಕಳೆದ ಸುಮಾರು 8 ತಿಂಗಳಿಂದ ಸಾಮಾನ್ಯ ಸಭೆ ನಡೆದಿಲ್ಲ. ಇದರಿಂದ ಅನುದಾನದ ಹಂಚಿಕೆ ಆಗುತ್ತಿಲ್ಲ. ಕಾಮಗಾರಿಗಳ ಅನುಮೋದನೆ. ಇ-ಸ್ವತ್ ಸೇರಿದಂತೆ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ ಎಂದು ನಗರಸಭೆ ಸದಸ್ಯ ವೈ.ಪ್ರಕಾಶ್ ಗಂಭೀರ ಆರೋಪಮಾಡಿದ್ದಾರೆ. ಚಳ್ಳಕೆರೆ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಗೊಂದಲದಿಂದ ಎರಡನೇ ಅವಧಿ ಮೀಸಲಾತಿ ಸರಕಾರ ನಿಗಧಿ ಪಡಿಸದೇ ಇರುವುದರಿಂದ ಸದಸ್ಯಕ್ಕೆ ಸುಮಾರು ಕಳೆದ 8 ತಿಂಗಳಿಂದ ನಗರಸಭೆಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿದ್ದು ನಗರಸಭೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಸಾರ್ವಜನಿಕರ ಯಾವುದೇ ಕೆಲದಸ ಕಾರ್ಯಗಳು ನಡೆಯುತ್ತಿಲ್ಲ ನಿವೇಶ. ಆಸ್ತಿ ಇ-ಸ್ವತ್ತು. ಕಂದಾಯ ಸೇರಿದಂತೆ ತಿಂಗಳಗಟ್ಟಲೆ ಅಲೆದಾಡಿದರೂ ಯಾವುದೇ ಕೆಲಸಗಳು ನಡೆಯುತ್ತಿಲ್ಲ .ನಮ್ಮನ್ನು ನಗರಸಭೆಗೆ ಆಯ್ಕೆ ಮಾಡಿ ಕಳಿಸಿದ್ದಾರೆ. ಜನರಿಗೆ ನಾವು ಮುಖ ತೋರಿಸದಂತಾಗಿದೆ ಒತ್ತಡದಿಂದ ನಗರಸಭೆಯ ಕೆಲಸಗಳು ಸುಗಮವಾಗಿ ಸಾಗುತ್ತಿಲ್ಲ. ನಗರಸಭೆಗೆ ಆಡಳಿತಾಧಿಕಾರಿ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆಗೆ ಧ್ವನಿಯಾಗುತ್ತಿಲ್ಲ. ಕಡತಗಳಿಗೆ ಸಹಿ ಹಾಕುವುದಕ್ಕೆ ಸೀಮಿತರಾಗಿದ್ದಾರೆ ಎಂಬ ಕೂಗು ನಗರದ ಜನತೆಯಿಂದ ಕೇಳಿ ಬರುತ್ತಲಿದೆ.
‘ಜಿಲ್ಲಾಧಿಕಾರಿ ಜಿಲ್ಲೆಯ ನಿರ್ವಹಣೆಯ ಗುರುತರ ಜವಾಬ್ದಾರಿ ಹೊಂದಿದ್ದು, ನಗರಸಭೆಯ ಹೆಚ್ಚುವರಿ ಹೊಣೆ ನಿಭಾಯಿಸಲು ಕಷ್ಟಸಾಧ್ಯವಾಗುತ್ತಿದೆ’ ಎಂಬುದು ನಾಗರಿಕರಿಂದ ಕೇಳಿ ಬರುತ್ತಿವೆ.
‘ನಗರಸಭೆ ಕಾರ್ಯಕಲಾಪಗಳು, ಸಾಮಾನ್ಯ ಸಭೆ, ಪ್ರಗತಿ ಪರಿಶೀಲನೆ, ಕಾಮಗಾರಿ, ಸ್ವಚ್ಛತಾ ಕಾರ್ಯ, ದೈನಂದಿನ ಕೆಲಸ ಕಾರ್ಯಗಳು ಹಿನ್ನಡೆ ಅನುಭವಿಸುತ್ತಿವೆ. ಇದರಿಂದ ನಾಗರಿಕರು ಪರದಾಡುವಂತಾಗಿದೆ’ ಎನ್ನುತ್ತಾರೆ ಸಾರ್ವಜನಿಕರು.ನಗರಸಭೆ ಸದಸ್ಯರು ಅಧಿಕಾರ ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಎಲ್ಲದಕ್ಕೂ ಆಡಳಿತಾಧಿಕಾರಿಗಳ ಸಹಿ ಬೇಕು. ಇದರಿಂದ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ. ನಮ್ಮನ್ನು ಆಯ್ಕೆ ಮಾಡಿದ ಮತದಾರರು ನಮಗೆ ಶಪಿಸುತ್ತಿದ್ದಾರೆ’ ಎನ್ನುತ್ತಾರೆ ನಗರಸಭೆ ಸದಸ್ಯರು.
ಅಧಿಕಾರಿಗಳ ಮೇಲೆ ಹಿಡಿತ ಇಲ್ಲ. ನಗರಸಭೆ ಸದಸ್ಯರು ಅಧಿಕಾರ ಚಲಾಯಿಸುವಂತಿಲ್ಲ. ಹೀಗಾಗಿ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ನೈರ್ಮಲ್ಯ, ಬೀದಿದೀಪದ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಎಂಬುದು ನಾಗರಿಕರ ಬೇಸರ ವ್ಯಕ್ತ ಪಡಿಸಿದ್ದಾರೆ ಈಗಲಾದರೂ ಜಿಲ್ಲಾಧಿಕಾರಿಗಳು ಚಳ್ಳಕೆರೆ ನಗರಸಭೆಗೆ ಭೇಟಿ ನೀಡಿ ಸಾರ್ವಜನಿಕರು ಕುಂದುಕೊರತೆ ಆಲಿಸಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವರೇ ಕಾದು ನೋಡ ಬೇಕಾಗಿದೆ.
0 Comments