ಅತಿ ಹೆಚ್ಚಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿದ ಕ್ಷೇತ್ರ ಚಳ್ಳಕೆರೆ , ಸತತವಾಗಿ ಗೆದ್ದ ಶಾಸಕ ಟಿ.ರಘುಮೂರ್ತಿ ದಾಖಲೆ ಪುಟಕ್ಕೆ

by | 13/05/23 | ಚುನಾವಣೆ-2023


ಚಳ್ಳಕೆರೆ ಜನಧ್ವನಿ ವಾರ್ತೆ ಮೇ 13
ಒಂದೇ ಪಕ್ಷದಿಂದ ಯಾವ ಶಾಸಕರೂ ಸತತ ಮೂರನೇ ಬಾರಿ ಗೆಲುವು ಸಾಧಿಸಿದ ಉದಾಹರಣೆ ಇಲ್ಲ. ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಹಾಗೂ ಕಾರ್ಯವೈಖರಿ ಮಾನದಂಡದ ಆಧಾರದ ಮೇಲೆ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿಗತ ವರ್ಚಿಸ್ಸಿಗೆ ಮತದಾರರು ಶಾಸಕ ಟಿ.ರಘುಮೂರ್ತಿಗೆ ವಿಜಯಮಾಲೆ ಹಾಕುವ ಮೂಲಕ ಪುನರಾಯ್ಕೆಗೆ ಮಾಡಿ ಇತಿಹಾಸದ ದಾಖಲೆಯ ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.
ನೋವು ನಲಿವಿಗೆ ಸ್ಫಂದಿಸಿದವರಿಗೆ ಗೆಲವಿನ ಸಿಹಿ ನೀಡುವ ಮೂಲಕ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಪುನರಾಯ್ಕೆಗೆ ಮತದಾರ ಮಣೆ ಹಾಕಿ ದಾಖಲೆ ಶೃಷ್ಟಿಸಿದ್ದಾರೆ. ಚಳ್ಳಕೆರೆ ಕ್ಷೇತ್ರದಲ್ಲಿ ಯಾರು ಸಹ ಒಂದೇ ಪಕ್ಷದಿಂದ ಮರು ಆಯ್ಕೆಯಾಗಿಲ್ಲ ಆದ್ದರಿಂದ ಈ ಬಾರಿ ಕಾಂಗ್ರೆಸ್ ಸೋಲುಂಡು ಜೆಡಿಎಸ್ ಪಕ್ಷ ಜಯಬೇರಿ ಬಾರಿಸಲಿದೆ ಎಂಬ ಮಾತುಗಳು ಹರಿದಾಡುತ್ತಿದ್ದವು ಆದರೆ ಕ್ಷೇತ್ರದ ಮತದಾರರು ಶಾಸಕ ಟಿ.ರಘುಮೂರ್ತಿಗೆ ಸಿಹಿ ನೀಡುವ ಮೂಲಕ ಇತಿಹಾಸದ ಪುಟಗಳನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
1957 ರಿಂದ 2023ಈವರೆಗೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಚುನಾವಣೆಗಳ ಹಿನ್ನೋಟ ನೋಡಿದರೆ 1962ರಲ್ಲಿ ಬಿ.ಎಲ್.ಗೌಡ ಎಂ.ಪಿ.ಎಸ್.ಪಿ ಪಕ್ಷದಿಂದ ಗೆದ್ದು ಮತ್ತೆ 1967 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಪುನರಾಯ್ಕೆಯಾಗಿದ್ದು ಬಿಟ್ಟರೆ ಒಂದೇ ಪಕ್ಷದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಉದಾಹರಣೆಗಳಿಲ್ಲ.
2008 ರಲ್ಲಿ ಕ್ಷೇತ್ರ ವಿಂಗಡಣೆವೇಳೆ ಸಾಮಾನ್ಯ ಕ್ಷೇತ್ರವಾಗಿದ್ದ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಎಸ್ಟಿಗೆ ಮೀಸಲಾಗಿದ್ದರಿಂದ 2008 ರಲ್ಲಿ ಬಿಜೆಪಿ ಪಕ್ಷದಿಂದ ತಿಪ್ಪೇಸ್ವಾಮಿ ಶಾಸಕರಾಗಿ ಆಯ್ಕೆಯಾದರು ನಂತರ 2013 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿ.ರಘುಮೂರ್ತಿ ಶಾಸಕರಾಗಿ ಆಯ್ಕೆಯಾಗಿ, 2018 ಹಾಗೂ 2023 ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದಿಂದ ಟಿ.ರಘುಮೂರ್ತಿ ಮೂರನೇ ಬಾರಿಗೆ ಆಯ್ಕೆಯಾಗುವ ಮೂಲಕ ಚಳ್ಳಕೆರೆ ವಿಧಾನಸಭಾ ಮೀಸಲು ಕ್ಷೇತ್ರದಲ್ಲಿ ಇತಿಹಾಸದ ಪುಟಗಳನ್ನು ಸೇರಿದ್ದಾರೆ.
2013 ರಚುನಾವಣೆಯಲ್ಲಿ 10 ಜನ ಅಭ್ಯರ್ಥಿಗಳು ಕಣಕ್ಕಿಳಿದರೆ 2018 ರ ವಿಧಾನ ಸಭಾ ಚುನಾವಣೆಗೆ ಸ್ಫರ್ಥಿಸಲು ವಿವಿಧ ಪಕ್ಷಗಳಿಂದ ಕಣಕ್ಕಿಳಿಯಲು ಯಾರು ಮುಂದೆ ಬಾರದೆ ಕೇವಲ ನಾಲ್ಕು ಜನ ,2023 ರಲ್ಲಿ 7 ಅಭ್ಯರ್ಥಿಗಳು ಮಾತ್ರ ಕಣಕ್ಕಿಳಿದಿದ್ದರು. ಮತದಾರು ಕ್ಷೇತ್ರದ ಅಭಿವೃದ್ಧಿಯನ್ನು ಕಂಡು ಕಾಂಗ್ರೆಸ್ ನ ಶಾಸಕ ಟಿ.ರಘುಮೂರ್ತಿ ಗೆ ಪುನರಾಯ್ಕೆಯಲ್ಲಿ ಕೈಯಿಡಿದಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಶಾಸಕ ಟಿ.ರಘುಮೂರ್ತಿ ವಿರುದ್ದ ಯಾರು ಕಣಕ್ಕಿಳಿಯಲು ಹಿಂದೇಟು ಹಾಕುತ್ತಾರೆ ಆದ್ದರಿಂದ ಸತತವಾಗಿ ಶಾಸಕ ಟಿ.ರಘುಮೂರ್ತಿಯವರೇ ಕ್ಷೇತ್ರದ ಶಾಸಕರಾಗಿರುತ್ತಾರೆ ಎಂಬ ಮಾತುಗಳು ಕ್ಷೇತ್ರದ ಜನತೆಯಿಂದ ಕೇಳಿ ಬರುತ್ತವೆ.
1957 ಎ.ಭೀಮಪ್ಪ (ಕಾಂಗ್ರೆಸ್) ಮತ್ತು ಟಿ.ಹನುಮಂತಪ್ಪ (ಕಾಂಗ್ರೆಸ್)
1962.ಬಿ.ಎಲ್.ಗೌಡ (ಎಂ.ಪಿ.ಎಸ್.ಪಿ), 1967.ಬಿ.ಎಲ್.ಗೌಡ (ಕಾಂಗ್ರೆಸ್)1972. ವಿ.ಮಸಿಯಪ್ಪ(ಕಾಂಗ್ರೆಸ್), 1978. ಎನ್.ಜಯಣ್ಣ (ಕಾಂಗ್ರೆಸ್),1983 ಹೆಚ್.ಸಿ. ಶಿವಶಂಕರಪ್ಪ (ಜನತಾಪಕ್ಷ), 1985 ತಿಪ್ಪೇಸ್ವಾಮಿ(ಜನತಾಪಕ್ಷ), 1989.ಎನ್.ಜಯಣ್ಣ (ಕಾಂಗ್ರೆಸ್), 1994 ತಿಪ್ಪೇಸ್ವಾಮಿ (ಜನತಾದಳ), 1999ಜೆ.ಬಸವರಾಜ್‌ಮಂಡಿಮಠ್(ಬಿಜೆಪಿ), 2004. ಡಿ.ಸುಧಾಕರ್ (ಕಾಂಗ್ರೆಸ್), 2008. ತಿಪ್ಪೇಸ್ವಾಮಿ( ಬಿಜೆಪಿ), 2013 ಟಿ.ರಘುಮೂರ್ತಿ(ಕಾಂಗ್ರೆಸ್) 2018 ಟಿ.ರಘುಮೂರ್ತಿ (ಕಾಂಗ್ರೆಸ್) 2023 ಟಿ.ರಘುಮೂರ್ತಿ (ಕಾಗ್ರೆಸ್)
1957 ರಿಂದ 2023 ರವರೆ ಈ ಕ್ಷೇತ್ರದಲ್ಲಿ ಇದುವರೆಗೂ ಆಡಳಿತ ಮಾಡಿದ ಶಾಸಕರಲ್ಲಿ ಕಾಂಗ್ರೆಸ್ 9, ಎಂ.ಪಿ.ಎಸ್.ಪಿ 1 ,ಜನತಾಪಕ್ಷ 2 , ಬಿಜೆಪಿ 2, ಜನತಾದಳ 1ಪಕ್ಷಗಳಿಂದ ಕ್ಷೇತ್ರದ ಜನತೆ ಶಾಸಕರನ್ನು ನೀಡಿದ್ದಾರೆ.
ಶಾಸಕ ಟಿ.ರಘುಮುರ್ತಿ67952, ಜೆಡಿಎಸ್ ರವೀಶ್‌ಕುಮಾರ್ 51502, ಪಕ್ಷೇತರ ಕೆ.ಟಿ.ಕುಮಾರಸ್ವಾಮಿ 29148, ಬಿಜೆಪಿ ಅನಿಲ್‌ಕುಮಾರ್ 22894 , ಅಮ್ ಆದ್ಮಿ ಮಾರಕ್ಕ 3072 ಕೆಆರ್‌ಎಸ್ ಪಕ್ಷ ಬೋಜರಾಜ್ 1139, ಅಂಜಮ್ಮ 715 ತಿರಸ್ಕೃತ 247, ನೋಟ 1639 ಒಟ್ಟು ಮತದಾನ 178308
ಕ್ಷೇತ್ರ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸುವ ಮೂಲಕ ವಿಜೋತ್ಯವ ಆಚರಣೆ ಮಾಡಿ ಸಂಭ್ರಮ ಆಚರಣೆ ಮಾಡಿದರು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page