ಅತಿ ಹೆಚ್ಚಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿದ ಕ್ಷೇತ್ರ ಚಳ್ಳಕೆರೆ , ಸತತವಾಗಿ ಗೆದ್ದ ಶಾಸಕ ಟಿ.ರಘುಮೂರ್ತಿ ದಾಖಲೆ ಪುಟಕ್ಕೆ

by | 13/05/23 | ಚುನಾವಣೆ-2023


ಚಳ್ಳಕೆರೆ ಜನಧ್ವನಿ ವಾರ್ತೆ ಮೇ 13
ಒಂದೇ ಪಕ್ಷದಿಂದ ಯಾವ ಶಾಸಕರೂ ಸತತ ಮೂರನೇ ಬಾರಿ ಗೆಲುವು ಸಾಧಿಸಿದ ಉದಾಹರಣೆ ಇಲ್ಲ. ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಹಾಗೂ ಕಾರ್ಯವೈಖರಿ ಮಾನದಂಡದ ಆಧಾರದ ಮೇಲೆ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿಗತ ವರ್ಚಿಸ್ಸಿಗೆ ಮತದಾರರು ಶಾಸಕ ಟಿ.ರಘುಮೂರ್ತಿಗೆ ವಿಜಯಮಾಲೆ ಹಾಕುವ ಮೂಲಕ ಪುನರಾಯ್ಕೆಗೆ ಮಾಡಿ ಇತಿಹಾಸದ ದಾಖಲೆಯ ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.
ನೋವು ನಲಿವಿಗೆ ಸ್ಫಂದಿಸಿದವರಿಗೆ ಗೆಲವಿನ ಸಿಹಿ ನೀಡುವ ಮೂಲಕ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಪುನರಾಯ್ಕೆಗೆ ಮತದಾರ ಮಣೆ ಹಾಕಿ ದಾಖಲೆ ಶೃಷ್ಟಿಸಿದ್ದಾರೆ. ಚಳ್ಳಕೆರೆ ಕ್ಷೇತ್ರದಲ್ಲಿ ಯಾರು ಸಹ ಒಂದೇ ಪಕ್ಷದಿಂದ ಮರು ಆಯ್ಕೆಯಾಗಿಲ್ಲ ಆದ್ದರಿಂದ ಈ ಬಾರಿ ಕಾಂಗ್ರೆಸ್ ಸೋಲುಂಡು ಜೆಡಿಎಸ್ ಪಕ್ಷ ಜಯಬೇರಿ ಬಾರಿಸಲಿದೆ ಎಂಬ ಮಾತುಗಳು ಹರಿದಾಡುತ್ತಿದ್ದವು ಆದರೆ ಕ್ಷೇತ್ರದ ಮತದಾರರು ಶಾಸಕ ಟಿ.ರಘುಮೂರ್ತಿಗೆ ಸಿಹಿ ನೀಡುವ ಮೂಲಕ ಇತಿಹಾಸದ ಪುಟಗಳನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
1957 ರಿಂದ 2023ಈವರೆಗೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಚುನಾವಣೆಗಳ ಹಿನ್ನೋಟ ನೋಡಿದರೆ 1962ರಲ್ಲಿ ಬಿ.ಎಲ್.ಗೌಡ ಎಂ.ಪಿ.ಎಸ್.ಪಿ ಪಕ್ಷದಿಂದ ಗೆದ್ದು ಮತ್ತೆ 1967 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಪುನರಾಯ್ಕೆಯಾಗಿದ್ದು ಬಿಟ್ಟರೆ ಒಂದೇ ಪಕ್ಷದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಉದಾಹರಣೆಗಳಿಲ್ಲ.
2008 ರಲ್ಲಿ ಕ್ಷೇತ್ರ ವಿಂಗಡಣೆವೇಳೆ ಸಾಮಾನ್ಯ ಕ್ಷೇತ್ರವಾಗಿದ್ದ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಎಸ್ಟಿಗೆ ಮೀಸಲಾಗಿದ್ದರಿಂದ 2008 ರಲ್ಲಿ ಬಿಜೆಪಿ ಪಕ್ಷದಿಂದ ತಿಪ್ಪೇಸ್ವಾಮಿ ಶಾಸಕರಾಗಿ ಆಯ್ಕೆಯಾದರು ನಂತರ 2013 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿ.ರಘುಮೂರ್ತಿ ಶಾಸಕರಾಗಿ ಆಯ್ಕೆಯಾಗಿ, 2018 ಹಾಗೂ 2023 ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದಿಂದ ಟಿ.ರಘುಮೂರ್ತಿ ಮೂರನೇ ಬಾರಿಗೆ ಆಯ್ಕೆಯಾಗುವ ಮೂಲಕ ಚಳ್ಳಕೆರೆ ವಿಧಾನಸಭಾ ಮೀಸಲು ಕ್ಷೇತ್ರದಲ್ಲಿ ಇತಿಹಾಸದ ಪುಟಗಳನ್ನು ಸೇರಿದ್ದಾರೆ.
2013 ರಚುನಾವಣೆಯಲ್ಲಿ 10 ಜನ ಅಭ್ಯರ್ಥಿಗಳು ಕಣಕ್ಕಿಳಿದರೆ 2018 ರ ವಿಧಾನ ಸಭಾ ಚುನಾವಣೆಗೆ ಸ್ಫರ್ಥಿಸಲು ವಿವಿಧ ಪಕ್ಷಗಳಿಂದ ಕಣಕ್ಕಿಳಿಯಲು ಯಾರು ಮುಂದೆ ಬಾರದೆ ಕೇವಲ ನಾಲ್ಕು ಜನ ,2023 ರಲ್ಲಿ 7 ಅಭ್ಯರ್ಥಿಗಳು ಮಾತ್ರ ಕಣಕ್ಕಿಳಿದಿದ್ದರು. ಮತದಾರು ಕ್ಷೇತ್ರದ ಅಭಿವೃದ್ಧಿಯನ್ನು ಕಂಡು ಕಾಂಗ್ರೆಸ್ ನ ಶಾಸಕ ಟಿ.ರಘುಮೂರ್ತಿ ಗೆ ಪುನರಾಯ್ಕೆಯಲ್ಲಿ ಕೈಯಿಡಿದಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಶಾಸಕ ಟಿ.ರಘುಮೂರ್ತಿ ವಿರುದ್ದ ಯಾರು ಕಣಕ್ಕಿಳಿಯಲು ಹಿಂದೇಟು ಹಾಕುತ್ತಾರೆ ಆದ್ದರಿಂದ ಸತತವಾಗಿ ಶಾಸಕ ಟಿ.ರಘುಮೂರ್ತಿಯವರೇ ಕ್ಷೇತ್ರದ ಶಾಸಕರಾಗಿರುತ್ತಾರೆ ಎಂಬ ಮಾತುಗಳು ಕ್ಷೇತ್ರದ ಜನತೆಯಿಂದ ಕೇಳಿ ಬರುತ್ತವೆ.
1957 ಎ.ಭೀಮಪ್ಪ (ಕಾಂಗ್ರೆಸ್) ಮತ್ತು ಟಿ.ಹನುಮಂತಪ್ಪ (ಕಾಂಗ್ರೆಸ್)
1962.ಬಿ.ಎಲ್.ಗೌಡ (ಎಂ.ಪಿ.ಎಸ್.ಪಿ), 1967.ಬಿ.ಎಲ್.ಗೌಡ (ಕಾಂಗ್ರೆಸ್)1972. ವಿ.ಮಸಿಯಪ್ಪ(ಕಾಂಗ್ರೆಸ್), 1978. ಎನ್.ಜಯಣ್ಣ (ಕಾಂಗ್ರೆಸ್),1983 ಹೆಚ್.ಸಿ. ಶಿವಶಂಕರಪ್ಪ (ಜನತಾಪಕ್ಷ), 1985 ತಿಪ್ಪೇಸ್ವಾಮಿ(ಜನತಾಪಕ್ಷ), 1989.ಎನ್.ಜಯಣ್ಣ (ಕಾಂಗ್ರೆಸ್), 1994 ತಿಪ್ಪೇಸ್ವಾಮಿ (ಜನತಾದಳ), 1999ಜೆ.ಬಸವರಾಜ್‌ಮಂಡಿಮಠ್(ಬಿಜೆಪಿ), 2004. ಡಿ.ಸುಧಾಕರ್ (ಕಾಂಗ್ರೆಸ್), 2008. ತಿಪ್ಪೇಸ್ವಾಮಿ( ಬಿಜೆಪಿ), 2013 ಟಿ.ರಘುಮೂರ್ತಿ(ಕಾಂಗ್ರೆಸ್) 2018 ಟಿ.ರಘುಮೂರ್ತಿ (ಕಾಂಗ್ರೆಸ್) 2023 ಟಿ.ರಘುಮೂರ್ತಿ (ಕಾಗ್ರೆಸ್)
1957 ರಿಂದ 2023 ರವರೆ ಈ ಕ್ಷೇತ್ರದಲ್ಲಿ ಇದುವರೆಗೂ ಆಡಳಿತ ಮಾಡಿದ ಶಾಸಕರಲ್ಲಿ ಕಾಂಗ್ರೆಸ್ 9, ಎಂ.ಪಿ.ಎಸ್.ಪಿ 1 ,ಜನತಾಪಕ್ಷ 2 , ಬಿಜೆಪಿ 2, ಜನತಾದಳ 1ಪಕ್ಷಗಳಿಂದ ಕ್ಷೇತ್ರದ ಜನತೆ ಶಾಸಕರನ್ನು ನೀಡಿದ್ದಾರೆ.
ಶಾಸಕ ಟಿ.ರಘುಮುರ್ತಿ67952, ಜೆಡಿಎಸ್ ರವೀಶ್‌ಕುಮಾರ್ 51502, ಪಕ್ಷೇತರ ಕೆ.ಟಿ.ಕುಮಾರಸ್ವಾಮಿ 29148, ಬಿಜೆಪಿ ಅನಿಲ್‌ಕುಮಾರ್ 22894 , ಅಮ್ ಆದ್ಮಿ ಮಾರಕ್ಕ 3072 ಕೆಆರ್‌ಎಸ್ ಪಕ್ಷ ಬೋಜರಾಜ್ 1139, ಅಂಜಮ್ಮ 715 ತಿರಸ್ಕೃತ 247, ನೋಟ 1639 ಒಟ್ಟು ಮತದಾನ 178308
ಕ್ಷೇತ್ರ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸುವ ಮೂಲಕ ವಿಜೋತ್ಯವ ಆಚರಣೆ ಮಾಡಿ ಸಂಭ್ರಮ ಆಚರಣೆ ಮಾಡಿದರು.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page