ಬೆಂಗಳೂರು ಮುಖ್ಯ ರಸ್ತೆಯ ಜೈನ್ ಕಲ್ಯಾಣ ಮಂಟದ ಮುಂಭಾಗದಲ್ಲಿ ಬೈಕ್ ಸವಾರನೊಬ್ಬ ಲಾರಿ ಚಕ್ರಕ್ಕೆ ಸಿಲುಕಿ ಮೃತ ಪಟ್ಟಿರುವುದು.
ಚಳ್ಳಕೆರೆ ಜನಧ್ವನಿ ವಾರ್ತೆ ಮಾ.27
ನಗರದಲ್ಲಿ ದಿನೇದಿನೇ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದು, ದಟ್ಟಣೆ ಹೆಚ್ಚಾಗಿದ್ದು ಅಮಾಯಕ ಯುವಕರು ಬಲಿಯಾಗುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಮುಖ್ಯ ರಸ್ತೆಗೊಂದಿಕೊಂಡು ವಾಹನಗಳನ್ನು ನಿಲುಗಡೆ ಮಾಡಿರುವುದು.
ನಗರದ ಬೆಂಗಳೂರು, ಬಳ್ಳಾರಿ, ಪಾವಗಡ ಹಾಗೂ ಚಿತ್ರದುರ್ಗ ರಸ್ತೆಗಳಲ್ಲಿ ಎಲ್ಲಿಯೂವ ವಾಹನ ನಿಲುಗಡೆಗೆ ಸರಿಯಾದ ಜಾಗವಿಲ್ಲದೆ ರಸ್ತೆಗಳಲ್ಲಿ ಅಕ್ಕ ಪಕ್ಕ, ಪಾದಚಾರಿ ರಸ್ತೆಗಳಲ್ಲಿ ವಾಹನ ಗಳ ನಿಲುಗಡೆ ಹಾಗೂ ವ್ಯಾಪಾರಿಗಳು ರಸ್ತೆಗಳನ್ನು ಅಕ್ರಮಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿರುವುದರಿಂದ ವಾಹನಗಳ ದಟ್ಟಣೆಯ್ನು ನಿಯಂತ್ರಣ ಮಾಡಲು ಪೊಲೀಸರು ಹರಸಹಾಸ ಪಡಬೇಕಾಗಿದೆ.
ಸಾರ್ವಜನಿಕ ತೆರಿಗೆ ಹಣದಲ್ಲಿ ಮಖ್ಯ ರಸ್ತೆಗಳ ಅಗಲೀಕರಣ, ಹಾಗೂ ಪಾದಚಾರಿಗಳ ರಸ್ತೆಗಳನ್ನು ನಿರ್ಮಿಸಿದ್ದು ಇವರುಗಳನ್ನು ವರ್ತಕರು ಅಕ್ರಮಸಿಕೊಂಡು ಶೆಡ್ ನಿರ್ಮಿಸಿಕೊಂಡಿದ್ದಾರೆ ಇದರಿಂದ ವಾಹನಗಳ ಸಂಚಾರಕ್ಕೆ ಕಿರಿಕಿರಿ ಯಾಗುತ್ತಿದೆ.
ಸಾರ್ವಜನಿಕ ಪಾದಚಾರಿಗಳ ರಸ್ತೆಗಳನ್ನು ಒತ್ತುವರಿ ಮಾಡಿಕೊಂಡ ವರ್ತಕರು.
ನಗರದ ಹೃದಯ ಭಾಗದಲ್ಲೇ ರಾಷ್ಟಿçÃಯ ಹೆದ್ದಾರಿ ಹಾದು ಹೋಗಿರುವುದರಿಂದ ಬಳ್ಳಾರಿ, ಬೆಂಗಳೂರು, ಮೈಸೂರು, ಪಾವಗಡ, ಹೊಸಪೇಟೆ. ಕೊಪ್ಪಳ, ಸೇರರಿದಂತೆ ವಿವಿಧ ನಗರಗಳಿಗೆ ಹೋಗುವ ವಾಹನಳ ದಟ್ಟಣೆ ಸಂಚಾರ ಹೆಚ್ಚಾಗಿದೆ. ಮುಖ್ಯ ರಸ್ತೆಗೆ ಹೊಂದಿಕೊAಡು ಕಲ್ಯಾಣ ಮಂಟಪಗಳಿದ್ದು ವಾಹನ ನಿಲುಗಡೆ ಸ್ಥಳವನ್ನು ನಿಗಧಿ ಮಾಡದೆ ಇರುವುದರಿಂದ ಕಲ್ಯಾಣ ಮಂಟಪಗಳಿಗೆ ಬರುವ ವಾಹನಗಳನ್ನು ರಸ್ತೆಯ ಮೇಲೆ ನಿಲ್ಲಿಸಿ ಹೋಗುವುದರಿಂದ ಇರುವ ರಸ್ತೆಯನ್ನು ಅಕ್ರಮಿಸಿಕೊಂಡು ವಾಹನ ದಟ್ಟಣೆ ಉಂಟಾಗುತ್ತಿದೆ ಇದರಿಂದ ಅಪಘಾಗಳ ಸಂಖ್ಯೆ ಹೆಚ್ಚುತ್ತಿದೆ.
ನಗರದ ನೆಹರು ವೃತ್ತದಲ್ಲಿ ರಾಷ್ಟಿçÃಯ ಹೆದ್ದಾರಿ ಹಾದು ಹೋಗಿರುವುರದರಿಂದ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅಲ್ಲದೆ, ಈ ವೃತ್ತಗಳಲ್ಲಿ ವಾಹನ ಸವಾರರು ಮನಬಂದAತೆ ಚಲಾಯಿಸುತ್ತಾರೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಪಾದಚಾರಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಪ್ರಾಣವನ್ನು ಕೈಯಲ್ಲಿಡಿದು ಸಂಚರಿಸುವ ಸ್ಥಿತಿ ಇದೆ. ರಾಷ್ಟಿçÃಯ ಹೆದ್ದಾರಿಯಲ್ಲಿ ಈ ಹಿಂದೆ ಟ್ರಾಫಿಕ್ ಸಿಗ್ನಲ್ ಹಾಗೂ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿತ್ತು ಅವುಗಳು ಕೆಟ್ಟ ನಂತರ ಅಳವಡಿಸದೆ ಇರುವುರಿಂದ ಪ್ರಮುಖ ವೃತ್ತಗಳಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ.
ಕೂಡಲೆ ಪೊಲೀಸ್ ಇಲಾಖೆ, ನಗರಸಭೆ ಅಧಿಕಾರಿಗಳು ಜಂಟಿಯಾಗಿ ರಸ್ತೆ ಬದಿಯಲ್ಲಿ ಪಾದ ಚಾರಿಗಳ ರಸ್ತೆ ಅಕ್ರಮಸಿಕೊಂಡಿರುವುದನ್ನು ತೆರವುಗೊಳಿಸ ಬೇಕು ಹಾಗೂ ವಾಹನ ನಿಲುಗಡೆಗೆ ಸೂಕ್ತ ಸ್ಥಳವನ್ನು ನಿಗಧಿ ಪಡಿಸಿ ಅಪಘಾತಗಳನ್ನು ತಪ್ಪಿಸ ಬೇಕೆಂದು ಸಾರ್ವಜನಿಕು ಒತ್ತಾಯಿಸಿದ್ದಾರೆ.
0 Comments