ಚಳ್ಳಕೆರೆ ಜನಧ್ವನಿ ವಾರ್ತೆ ಡಿ 18. ಅಡುಗೆ ಅನಿಲ ಪಡೆಯಲೂ ಡಿ.31 ರೊಳಗೆ ಇ ಕೆವೈಸಿ ಆಧಾರ್ ಲಿಂಕ್ ಮಾಡಿಸದಿದ್ದರೆ ಸಿಲೆಂಡರ್ ವಿತರಣೆ ನಿಲ್ಲಿಸಲಾಗುವುದು
ಹೌದು ಇದು ಬ್ಯಾಂಕ್ ಖಾತೆ, ಪಡಿತರ ಅಕ್ಕಿ,ಬೆಳೆವಿಮೆ, ಬೆಳೆ ಪರಿಹಾರ ಸೇರಿದಂತೆ ಸರಿಕಾರಿ ಸೌಲಭ್ಯಗಳ ದುರ್ಬಳಕೆ ಕಡಿವಾಣ ಹಾಕಲು ಇ ಕೆವೈಸಿ ಆಧಾರ್ ಲಿಂಕ್ ಕಡ್ಡಾಯ ಈಗ ಅಡುಗೆ ಅನಿಲ ಸಂಪರ್ಕ ಫಲಾನುಭವಿಗಳಿಗೂ ಇ.ಕೆ.ವೈಸಿ ಆಧಾರ್ ಲಿಂಕ್ ಕಡ್ಡಾಯ ಮಾಡಿರುವುದರಿಂದ ಅಡುಗೆ ಅನಿಲ ವಿತರಣೆ ಮಾಡವ ಅಂಗಡಿ ಮಂದೆ ಸರದಿ ಸಾಲಿನಲ್ಲಿ ನಿಂತು ಇಕೆವೈಸಿ ಮಾಡಿಸಲು ಮುಗಿ ಬಿದ್ದಿದ್ದಾರೆ.
ಪಡಿತರ ಅಕ್ಕಿ, ಅಡುಗೆ ಅನಿಲ , ಬೆಳೆ ಪರಿಹಾರ, ಬೆಳೆವಿಮೆ ಸತ್ತ ಫಲಾನುಭವಿಗಳ ಹೆಸರಿನಲ್ಲೂ ಸರಕಾರಿ ಸೌಲಭ್ಯ ಪಡೆಯುತ್ತಿದ್ದವರಿಗೆ ಇಕೆವೈಸಿ ಯಿಂದ ಬ್ರೇಕ್ ಬೀಳಲಿದೆ. ಸರಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ರೂ ನಷ್ಟವನ್ನುಂಟು ಮಾಡುತ್ತಿತ್ತು ಇದರಿಂದ ಸರಕಾರ ಫಲಾನುಭವಿಗಳ ಆಧಾರ್ ಕಾರ್ಡ್ ಹಾಗೂ ಹೆಬ್ಬೆಟ್ಟಿನ ಗುರುತು ಪಡೆಯುವ ಮೂಲಕ ಸರಕಾರಿ ಸೌಲಭ್ಯಗಳಿಗೆ ಕಡ್ಡಾಯವಾಗಿ ಇಕೆವೈಸಿ ಜಾರಿಗೊಳಿಸಿದೆ.
ಬ್ಯಾಂಕ್ ಗ್ರಾಹಕರಿಗೆ ಇ ಕೆ ವೈಸಿ ಕಡ್ಡಾಯ ಎಂಬುದು ಗೊತ್ತು. ಇದೀಗ ಸರ್ಕಾರದ ಸಬ್ಸಿಡಿ ಗ್ಯಾಸ್ ಸಿಲಿಂಡರ್ ಪಡೆಯಲು ಸಹ ಇ ಕೆ ವೈಸಿ ಯನ್ನು ಕಡ್ಡಾಯಗೊಳಿಸಲಾಗಿದೆ. ಒಬ್ಬರಿಗೆ ಒಂದಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಸಂಪರ್ಕ ಗೃಹ ಬಳಕೆ ಸಿಲಿಂಡರ್ ಸಂಪರ್ಕ ದುರ್ಬಳಕೆಯಾಗುವುದನ್ನು ತಪ್ಪಿಸಲು ಗ್ರಾಹಕರ ಇಕೆವೈಸಿ ಅಪ್ಡೇಟ್ ಮಾಡುವಂತೆ ಕೇಂದ್ರಸರಕಾರ ಗ್ಯಾಸ್ ಏಜೆನ್ಸಿಗಳಿಗೆ ಸೂಚನೆ ನೀಡಿವೆ. ಬ
ಗ್ರಾಹಕರ ಬೆರಳು ಗುರುತು ಮತ್ತು ಮುಖ ಚಹರೆಯನ್ನು ಮಾತ್ರ ಪರಿಗಣಿಸಿ ಇಕೆವೈಸಿ ಅಪ್ಡೇಟ್ ಮಾಡಬೇಕೆಂದು ಕೇಂದ್ರ ಸರಕಾರದ ಪೆಟ್ರೋಲಿಯಂ ಸಚಿವಾಲಯ, ತೈಲ ಕಂಪನಿಗಳಿಗೆ ಎರಡು ವಾರದ ಹಿಂದೆ ಆದೇಶ ಮಾಡಿದ್ದು, ವರ್ಷಾಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದೆ. ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಸಂಪರ್ಕ ಪಡೆದಿರುವ ಗ್ರಾಹಕರಿಗೂ ಇಕೆವೈಸಿ ಅನ್ವಯವಾಗಲಿದೆ.
![](https://janadhwani.in/wp-content/uploads/2023/12/Screenshot_20231219_082837.png)
ವರ್ಗಾವಣೆಗೆ ಅವಕಾಶ
ಒಂದ ವೇಳೆ ಈಗಾಗಲೆ ಅಡುಗೆ ಅನಿಲ ಫಲಾನುಭವಿ ಮೃತಪಟ್ಟಿದ್ದರೆ.
ಯಾರದೋ ಹೆಸರಿನಲ್ಲಿ ಅನಿಲ ಸಂಪರ್ಕವಿದ್ದು, ಮತ್ತೊಬ್ಬರು ಬಳಕೆ ಮಾಡುತ್ತಿದ್ದರೆ ಅವರಿಗೆ ಇಕೆವೈಸಿ ಆಗುವುದಿಲ್ಲ. ಕುಟುಂಬದ ಬೇರೆ ಸದಸ್ಯರು ಬಳಕೆ ಮಾಡುತ್ತಿದ್ದರೆ ಸಂಪರ್ಕವನ್ನು ಅಡುಗೆ ಅನಿಲ ವಿತರಕರಿಗೆದ ಅಗತ್ಯ ದಾಖಲಿಗಳನ್ನು ನೀಡಿ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಬಹುದು. ನಿಜವಾದ ಗ್ರಾಹಕರಿಗೆ ಮಾತ್ರ ಸಬ್ಸಿಡಿ ಸಿಲಿಂಡರ್ ಸಿಗಬೇಕು ಎನ್ನುವುದು ಇಕೆವೈಸಿ ಉದ್ದೇಶ ಎನ್ನುತ್ತಾರೆ ಗ್ಯಾಸ್ ಏಜೆನ್ಸಿಯ ಮಾಲೀಕರೋಬ್ಬರು.
![](https://janadhwani.in/wp-content/uploads/2023/12/Screenshot_20231219_082851.png)
![](https://janadhwani.in/wp-content/uploads/2023/12/Screenshot_20231219_082810.png)
0 Comments