ಅಡುಗೆ ಅನಿಲ ಅಕ್ರಮ ಸಂಪರ್ಕಗಳಿಗೆ ಕಡಿವಾಣ ಹಾಕಲು ಇಕೆವೈಸಿ ಕಡ್ಡಾಯಗೊಳಿಸಿದ ಸರಕಾರ ಇಕೆವೈಸಿ ಮಾಡಿಸಲು ಮುಗಿದ್ದ ಫಲಾನುಭವಿಗಳು….

by | 19/12/23 | ಸುದ್ದಿ


ಚಳ್ಳಕೆರೆ ಜನಧ್ವನಿ ವಾರ್ತೆ ಡಿ 18. ಅಡುಗೆ ಅನಿಲ ಪಡೆಯಲೂ ಡಿ.31 ರೊಳಗೆ ಇ ಕೆವೈಸಿ ಆಧಾರ್ ಲಿಂಕ್ ಮಾಡಿಸದಿದ್ದರೆ ಸಿಲೆಂಡರ್ ವಿತರಣೆ ನಿಲ್ಲಿಸಲಾಗುವುದು


ಹೌದು ಇದು ಬ್ಯಾಂಕ್ ಖಾತೆ, ಪಡಿತರ ಅಕ್ಕಿ,ಬೆಳೆವಿಮೆ, ಬೆಳೆ ಪರಿಹಾರ ಸೇರಿದಂತೆ ಸರಿಕಾರಿ ಸೌಲಭ್ಯಗಳ ದುರ್ಬಳಕೆ ಕಡಿವಾಣ ಹಾಕಲು ಇ ಕೆವೈಸಿ ಆಧಾರ್ ಲಿಂಕ್ ಕಡ್ಡಾಯ ಈಗ ಅಡುಗೆ ಅನಿಲ ಸಂಪರ್ಕ ಫಲಾನುಭವಿಗಳಿಗೂ ಇ.ಕೆ.ವೈಸಿ ಆಧಾರ್ ಲಿಂಕ್ ಕಡ್ಡಾಯ ಮಾಡಿರುವುದರಿಂದ ಅಡುಗೆ ಅನಿಲ ವಿತರಣೆ ಮಾಡವ ಅಂಗಡಿ ಮಂದೆ ಸರದಿ ಸಾಲಿನಲ್ಲಿ ನಿಂತು ಇಕೆವೈಸಿ ಮಾಡಿಸಲು ಮುಗಿ ಬಿದ್ದಿದ್ದಾರೆ.
ಪಡಿತರ ಅಕ್ಕಿ, ಅಡುಗೆ ಅನಿಲ , ಬೆಳೆ ಪರಿಹಾರ, ಬೆಳೆವಿಮೆ ಸತ್ತ ಫಲಾನುಭವಿಗಳ ಹೆಸರಿನಲ್ಲೂ ಸರಕಾರಿ ಸೌಲಭ್ಯ ಪಡೆಯುತ್ತಿದ್ದವರಿಗೆ ಇಕೆವೈಸಿ ಯಿಂದ ಬ್ರೇಕ್ ಬೀಳಲಿದೆ. ಸರಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ರೂ ನಷ್ಟವನ್ನುಂಟು ಮಾಡುತ್ತಿತ್ತು ಇದರಿಂದ ಸರಕಾರ ಫಲಾನುಭವಿಗಳ ಆಧಾರ್ ಕಾರ್ಡ್ ಹಾಗೂ ಹೆಬ್ಬೆಟ್ಟಿನ ಗುರುತು ಪಡೆಯುವ ಮೂಲಕ ಸರಕಾರಿ ಸೌಲಭ್ಯಗಳಿಗೆ ಕಡ್ಡಾಯವಾಗಿ ಇಕೆವೈಸಿ ಜಾರಿಗೊಳಿಸಿದೆ.
ಬ್ಯಾಂಕ್ ಗ್ರಾಹಕರಿಗೆ ಇ ಕೆ ವೈಸಿ ಕಡ್ಡಾಯ ಎಂಬುದು ಗೊತ್ತು. ಇದೀಗ ಸರ್ಕಾರದ ಸಬ್ಸಿಡಿ ಗ್ಯಾಸ್ ಸಿಲಿಂಡರ್ ಪಡೆಯಲು ಸಹ ಇ ಕೆ ವೈಸಿ ಯನ್ನು ಕಡ್ಡಾಯಗೊಳಿಸಲಾಗಿದೆ. ಒಬ್ಬರಿಗೆ ಒಂದಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಸಂಪರ್ಕ ಗೃಹ ಬಳಕೆ ಸಿಲಿಂಡರ್ ಸಂಪರ್ಕ ದುರ್ಬಳಕೆಯಾಗುವುದನ್ನು ತಪ್ಪಿಸಲು ಗ್ರಾಹಕರ ಇಕೆವೈಸಿ ಅಪ್ಡೇಟ್ ಮಾಡುವಂತೆ ಕೇಂದ್ರಸರಕಾರ ಗ್ಯಾಸ್ ಏಜೆನ್ಸಿಗಳಿಗೆ ಸೂಚನೆ ನೀಡಿವೆ.
ಗ್ರಾಹಕರ ಬೆರಳು ಗುರುತು ಮತ್ತು ಮುಖ ಚಹರೆಯನ್ನು ಮಾತ್ರ ಪರಿಗಣಿಸಿ ಇಕೆವೈಸಿ ಅಪ್ಡೇಟ್ ಮಾಡಬೇಕೆಂದು ಕೇಂದ್ರ ಸರಕಾರದ ಪೆಟ್ರೋಲಿಯಂ ಸಚಿವಾಲಯ, ತೈಲ ಕಂಪನಿಗಳಿಗೆ ಎರಡು ವಾರದ ಹಿಂದೆ ಆದೇಶ ಮಾಡಿದ್ದು, ವರ್ಷಾಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದೆ. ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಸಂಪರ್ಕ ಪಡೆದಿರುವ ಗ್ರಾಹಕರಿಗೂ ಇಕೆವೈಸಿ ಅನ್ವಯವಾಗಲಿದೆ.

ವರ್ಗಾವಣೆಗೆ ಅವಕಾಶ
ಒಂದ ವೇಳೆ ಈಗಾಗಲೆ ಅಡುಗೆ ಅನಿಲ ಫಲಾನುಭವಿ ಮೃತಪಟ್ಟಿದ್ದರೆ.
ಯಾರದೋ ಹೆಸರಿನಲ್ಲಿ ಅನಿಲ ಸಂಪರ್ಕವಿದ್ದು, ಮತ್ತೊಬ್ಬರು ಬಳಕೆ ಮಾಡುತ್ತಿದ್ದರೆ ಅವರಿಗೆ ಇಕೆವೈಸಿ ಆಗುವುದಿಲ್ಲ. ಕುಟುಂಬದ ಬೇರೆ ಸದಸ್ಯರು ಬಳಕೆ ಮಾಡುತ್ತಿದ್ದರೆ ಸಂಪರ್ಕವನ್ನು ಅಡುಗೆ ಅನಿಲ ವಿತರಕರಿಗೆದ ಅಗತ್ಯ ದಾಖಲಿಗಳನ್ನು ನೀಡಿ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಬಹುದು. ನಿಜವಾದ ಗ್ರಾಹಕರಿಗೆ ಮಾತ್ರ ಸಬ್ಸಿಡಿ ಸಿಲಿಂಡರ್ ಸಿಗಬೇಕು ಎನ್ನುವುದು ಇಕೆವೈಸಿ ಉದ್ದೇಶ ಎನ್ನುತ್ತಾರೆ ಗ್ಯಾಸ್ ಏಜೆನ್ಸಿಯ ಮಾಲೀಕರೋಬ್ಬರು.

ಗ್ಯಾಸ್ ಸಿಲಿಂಡರಿಗೆ ಇಕೆವೈಸಿ ಮಾಡಿಸುವುದು ಕಡ್ಡಾಯ ಎಂದು ಘೋಷಿಸಿದೆ. ಇಕೆವೈಸಿ ಮಾಡಿಸದಿದ್ದರೆ ಸದ್ಯ ದೊರೆಯುತ್ತಿರುವ ಸಬ್ಸಿಡಿ ನಿಲ್ಲುತ್ತದೆ. ಸರ್ಕಾರವು ಇಕೆವೈಸಿ ಮಾಡಿಸಲು ಈಗಾಗಲೇ ನವಂಬರ್ 25 ರಿಂದ ಅವಕಾಶವನ್ನು ನೀಡಿದೆ. ಇ – ಕೆವೈಸಿಯನ್ನು ಮಾಡಿಸಲು ಡಿಸೆಂಬರ್ 31ರವರೆಗೂ ಅವಕಾಶವಿದೆ, 31ನೇ ಡಿಸೆಂಬರ್ ಒಳಗೆ ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಇಕೆವೈಸಿ ಮಾಡಿಕೊಡಲಾಗುವುದು ಇ-ಕೆವೈಸಿ ಮಾಡಿಸದಿದ್ದರೆ ನಿಮಗೆ ಮುಂದಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ವಿತರಣೆ ಹಾಗೂ ಸಬ್ಸಿಡಿಯು ಕಡಿತಗೊಳ್ಳುತ್ತದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ತಿಳಿಸಿದೆ


Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page