ಚಳ್ಳಕೆರೆ ಏ.1. ಅಕ್ರಮ ಮರಳು ಸಂಗ್ರಹಿಸಿದ್ದದಾಸ್ತಾನು ಮೇಲೆ ಡಿವೈಎಸ್ ರಾಜಣ್ಣ ದಾಳಿ ಪ್ರಕರಣ ದಾಖಲು. ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ವಶಕ್ಕೆ ಪಡೆದ ಪೊಲೀಸರು
ತಾಲೂಕಿನ ತಳಕು ಹೋಬಳಿ ವ್ಯಾಪ್ತಿಯ ಮೈಲನಹಳ್ಳಿ ಗ್ರಾಮದ ಸಮೀಪ ವೇದವತಿ ನದಿಯ ತಡದಲ್ಲಿ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ್ದ ಸ್ಥಳಕ್ಕೆ ಡಿ ವೈ ಎಸ್ ಪಿ ರಾಜಣ್ಣ ಭೇಟಿ ನೀಡಿದ್ದು ಇಂದು ಅಧಿಕಾರಿಗಳೊಂದಿಗೆ ದಾಳಿ ನಡೆಸಿ 120 ಮೆಟ್ರಿಕ್ ಟನ್ನು ಮರಳನ್ನ ವಶಕ್ಕೆ ಪಡೆದಿದ್ದಾರೆ.
ಅಕ್ರಮವಾಗಿ ಮರಳು ದಾಸ್ತಾನು ಮಾಡಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಮೇರೆಗೆ ಡಿ ಎಸ್ ಪಿ ಟಿ.ಬಿ.ರಾಜಣ್ಣ ಹಾಗೂ ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ರೂಪ . ತಳಕು ಪಿಎಸ್ಐ ಅಶ್ವಿನಿ ಪೋಲಿಸ್ ತಂಡದೊಂದಿಗೆ ವೇದವತಿ ನದಿಯ ಪಾತ್ರಕ್ಕೆ ಭೇಟಿ ನೀಡಿದ್ದು. ಅಕ್ರಮವಾಗಿ ಮಾರಾಟ ಮಾಡಲು ದಾಸ್ತಾನು ಮಾಡಿದ್ದ ಮರಳನ್ನು ವಶಕ್ಕೆ ಪಡೆದಿದ್ದಾರೆ.
ಆದರೆ ಮರಳು ಯಾರು ಶೇಖರಣೆ ಮಾಡಿದ್ದು ಎಂಬುದು ತಿಳಿದು ಮರಳನ್ನು ವಶಕ್ಕೆ ಪಡೆದು ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
0 Comments