ಚಳ್ಳಕೆರೆ ಮೇ8.
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಅಬಕಾರಿ ಪೋಲಿಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ನಡೆದಿದೆ. ಚಳ್ಳಕೆರೆ ತಾಲೂಕಿನ ಕ್ಯಾತಗೊಂಡನಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಗ್ರಾಮಸ್ಥರ ಮನವಿ ಮೇರೆಗೆ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ಗ್ರಾಮದಲ್ಲಿ ಯಾರೂ ಅಕ್ರಮಮದ್ಯ ಮಾರಾಟ ಮಾಡದಂತೆ ಗ್ರಾಮಸ್ಥರಿಗೆ ತಿಳುವಳಿಕೆ ನೀಡಿದರೂ ಸಹ ಕ್ಯಾತಗೊಂಡನಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಪುಟ್ಟಮ್ಮ ( 44) ಅಕ್ರಮಮದ್ಯ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ನೀತಿ ಸಂಹಿತೆ ಜಾರಿಯಾಲ್ಲಿರುವ ಹಿನ್ನೆಲೆಯಲ್ಲಿ ಅಬಕಾರಿ ಉಪ ಆಯುಕ್ತರು ಇವರ ನಿರ್ದೇಶನ ಮತ್ತು ಅಬಕಾರಿ ಉಪ ಅಧೀಕ್ಷಕರು ಹಿರಿಯೂರು ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಜಿಲ್ಲಾಧಿಕಾರಿಗಳ ದೂರಿನ ಅನ್ವಯ ನಾಗರಾಜು ಸಿ.ಅಬಕಾರಿ ನಿರೀಕ್ಷಕರು ನೇತೃತ್ವದಲ್ಲಿ ರೇಖಾ ಎಸ್ ಹೆಚ್.ಅಬಕಾರಿ ಉಪ ನಿರೀಕ್ಷಕರು ಕಿರಣ್ ಅಪ್ಪಾ ಸಾಬ್ ಜುಲ್ಪಿ ಅಬಕಾರಿ ನಿರೀಕ್ಷಕರು ಉಪವಿಭಾಗ ರುದ್ರಗೌಡ ಅಬಕಾರಿ ಉಪ ನಿರೀಕ್ಷಕರು. ಹೆಡ್ ಕಾನ್ಸ್ಟೇಬಲ್ ಗಳಾದ ಎನ್ ನಾಗರಾಜ. ಟಿ ಸೋಮಶೇಖರ, ಚಿದಾನಂದ, ದಾದಾಪೀರ್ ಇವರು ದಾಳಿ ನಡೆಸಿ 4.450 ಲೀಟರ್ ಮದ್ಯ ವಶಪಡಿಸಿಕೊಂಡು ಆರೋಪಿ ಪುಟ್ಟಮ್ಮಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಾಗೂ ಇದೇ ದಿನ ವಿವಿಧ ಗ್ರಾಮಗಳಲ್ಲಿ ಹೋಟೆಲ್ ಗಳ ಮೇಲೆ ಮತ್ತು ಪೆಟ್ಟಿಗೆ ಅಂಗಡಿಗಳ ಮೇಲೆ ಅಬಕಾರಿ ದಾಳಿ ಮಾಡಲಾಗಿ ಮದ್ಯ ಸೇವಿಸಲು ಅವಕಾಶ ಮಾಡಿಕೊಟ್ಟ ಹೋಟೆಲ್ ಮತ್ತು ಪೆಟ್ಟಿಗೆ ಅಂಗಡಿಗಳ ಮಾಲೀಕರಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ ಎಂದು ಎಚ್ವರಿಕೆ ನೀಡಿದ್ದಾರೆ.
0 Comments