ಚಳ್ಳಕೆರೆ ಮಾ30.ಅಕ್ರಮ ಜೂಜಾಟದಲ್ಲಿತೊಡಗಿದ್ದ ಖಚಿತ ಮಾಹಿತಿ ಮೇರೆಗೆ ಚಳ್ಳಕೆರೆ ಠಾಣಾಧಿಕಾರಿ ಕೆ.ಕುಮಾರ್ ದಾಳಿ ನಡೆಸಿ 8 ಜನ ಹಾಗೂ 34690 ರೂ ಹಣ ನಾಲ್ಕು ದ್ವಿಚಕ್ರವಾಹನ. ಐದು ಮೊಬೈಲ್ ಪಡೆದು ಪ್ರಕರಣದಾಖಲಿಸಿಕೊಳ್ಳಲಾಗಿದೆ.
ಹೌದು ಇದು ಚಳ್ಳಕೆರೆ ನಗರದ ಸೋಮಗುದ್ದು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ, ಅರಣ್ಯ ಇಲಾಖೆಗೆ ಸೇರಿದ ಸರ್ಕಾರಿ ಜಾಗದಲ್ಲಿ ಚಳ್ಳಕೆರೆ ಟೌನ್ ಅಂಬೇಡ್ಕರ್ ನಗರ ವಾಸಿಗಳಾದ ಮಣಿ
ಮತ್ತು ಗಣೇಶ ಎಂಬುವರು ಸುಮಾರು 7 ರಿಂದ 8 ಜನರನ್ನು ಗುಂಪಾಗಿ ಸೇರಿಸಿಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಕಾನೂನು
ಬಾಹಿರವಾದ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಠಾಣಾಧಿಕಾರಿ ಕೆ.ಕುಮಾರ್ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿಗಳು ದಾಳಿ ನಡೆಸಿ ಮಣಿ,ಗಣೇಶ್. ಅಜಯ್ ಕುಮಾರ್ ಜಿ.ಟಿ . ರಾಘವೇಂದ್ರ ಎನ್ ,ಭೋರಯ್ಯ, ಬಿ .ರಾಜು ಯಾದವ್ ವೈ ,ಶ್ರೀನಿವಾಸ , ರಂಗನಾಥ, ಹಾಗೂ ವಿವಿಧ ಕಂಪನಿಗಳ ಬೆಲೆ ಬಾಳುವ 5 ಮೊಬೈಲ್, ವಿವಿಧ ಕಂಪನಿಯ ನಾಲ್ಕು ದ್ವಿಚಕ್ರವಾಹನ, 34690 ರೂ ಗಳನ್ನು ವಶಕ್ಕೆ ಪಡೆದು ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments